CBI, ED, IT ರಾಜಕೀಯ ವಿರೋಧಿಗಳ ಹಣಿಯಲು ಬಳಕೆ: ಕೇಂದ್ರದ ವಿರುದ್ಧ ಶೆಟ್ಟರ್ ಗುಡುಗು

ಹುಬ್ಬಳ್ಳಿ, ನವೆಂಬರ್ 26: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧದ ಸಿಬಿಐ ತನಿಖೆ ನಿರ್ಧಾರ ಹಿಂದಪಡೆಯಲು ರಾಜ್ಯ ಸಂಪುಟದಲ್ಲಿ ನಿರ್ಧಾರವಾಗುತ್ತಿದ್ದಂತೆ ಇದರ ಪರ ವಿರೋಧ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಪ್ರತಿಕ್ರಿಯಿಸಿದ್ದಾರೆ. ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನ ರಾಜಕೀಯ ವಿರೋಧಿಗಳನ್ನ ಹಣಿಯಲಿಕ್ಕೆ ಉಪಯೋಗಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮೇಲಿನ ಅಕ್ರಮ ಪ್ರಕರಣ ವಾಪಾಸ್ ಪಡೆಯಲು ಸಚಿವ ಸಂಪುಟದ ಒಪ್ಪಿದ್ದು ಸ್ವಾಗತಾರ್ಹ. ಇಂದು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.

Central Government Misuse CBI, IT and ED Official, Alleged by Jagadish Shettar

ಡಿಕೆ ಶಿವಕುಮಾರ್ ಮೇಲಿ‌ನ ಪ್ರಕರಣವನ್ನ ಸಿಬಿಐಗೆ ಕೊಟ್ಟವರು ಯಾರು?, ಅಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಇದ್ದರು. ಅವರೇ ಈ ಪ್ರಕರಣ ಸಿಬಿಐಗೆ ಕೊಟ್ಟವರು.

ವಾಪಾಸ್ ನಿರ್ಧಾರವು ತಪ್ಪಿಲ್ಲ

ಇಂದು ಕಾಂಗ್ರೆಸ್ ಸರ್ಕಾರದ ಬಂದಿದೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ ಸಹಜವಾಗಿಯೇ ಡಿಸಿಎಂ ಶಿವಕುಮಾರ್ ಮೇಲಿನ ಪ್ರಕರಣ ವಾಪಾಸ್ ಪಡೆದರೆ ಏನು ತಪ್ಪು?. ಯಾವುದೇ ತಪ್ಪಿಲ್ಲ ಎಂದು ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಪಾರ್ಲಿಮೆಂಟ್ ನಲ್ಲಿ ಆದಾನಿ ವಿರುದ್ಧ ಮಾತಾಡಿದರೆ ನೋಟಿಸ್ ಕೊಡುತ್ತಾರೆ. ಯಾವ ಆಧಾರದ ಮೇಲೆ ಕೊಡುತ್ತಾರೆ ಯಾವುದೇ ಪ್ರಕರಣ, ದೂರು ದಾಖಲು ಮಾಡದೇ ನೋಟಿಸ್ ಕೊಡುವುದು ತಪ್ಪು‌, ಈ ನಿಟ್ಟಿನಲ್ಲಿ ನನಗೆ ಕಾನೂನು ಬಗ್ಗೆ ಮಾಹಿತಿ ಇದೆ. ಮಾತಾನಾಡುವ ವ್ಯಕ್ತಿ ಮೇಲೆ ದೂರು ದಾಖಲು ಮಾಡಿದ ನಂತರ ನೋಟಿಸ್ ಕೊಟ್ಟು ವಿಚಾರಣೆ ಮಾಡಬೇಕು. ಇದು ಸರ್ವಾಧಿಕಾರಿ ಧೋರಣೆ ಎಂದು ಕೇಂದ್ರ ಸರ್ಕಾರದ ವಿರುದ್ಧ ದೂರಿದರು.

Central Government Misuse CBI, IT and ED Official, Alleged by Jagadish Shettar

ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ಟೀಕೆ ಮಾಡಿದರು. ಈಗ ಯಾವುದೇ ತುರ್ತು ಪರಿಸ್ಥಿತಿ ಇಲ್ಲ. ಈ ರೀತಿಯಾಗಿ ಮಾಡುವುದು ಸರಿಯೇ ಎಂದ ಅವರು ನವದೆಹಲಿ ಡಿಸಿಎಂ ಸಿಸೋಡಿಯೋ ಅವರನ್ನ ವರ್ಷಗಟ್ಟಲೇ ಒಳಗೆ ಹಾಕಿದ್ದಾರೆ. ಯಾವುದೇ ಗಂಭೀರ ಸ್ವರೂಪದ ದೂರು ಇಲ್ಲ ಎಂದು ಆರೋಪಿಸಿದರು.

ತನಿಖೆ ಎದುರಿಸಿ ದೋಷಮುಕ್ತರಾಗಲಿ: ಎಎಪಿ

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಸಿಬಿಐಗೆ ತನಿಖೆಗೆ ವಹಿಸಲು ಮನವಿ ಮಾಡಿತ್ತು. ಆದರೆ ಅಂದು ಸರ್ಕಾರ ಸಭಾಧ್ಯಕ್ಷರ ಮನವಿ ಪಡೆಯದೇ ನಿಯಮ ಮೀರಿ ತನಿಖೆ ಕೋರಿತ್ತು ಎಂದು ಕಾಂಗ್ರೆಸ್ ಇಂದು ಆ ಸಿಬಿಐ ತನಿಖೆ ನಡೆದಂತೆ ನಿರ್ಧಾರ ವಾಪಸಾತಿಗೆ ನಿರ್ಧರಿಸಿದೆ.

ಸರ್ಕಾರದ ಈ ನಿರ್ಧಾರಕ್ಕೆ ಕಾಂಗ್ರೆಸ್‌ ನಾಯಕರು ಒಪ್ಪಿದ್ದಾರೆ. ಆದರೆ, ಈ ಬಗ್ಗೆ ಬಿಜೆಪಿಗರು ಸರ್ಕಾರ ನಿರ್ಧಾರವನ್ನು ಖಂಡಿಸಿದ್ದಾರೆ. ಕಾನೂನಿನಡಿಯಲ್ಲಿ ತನಿಖೆ ಆಗಿ ಡಿಕೆಶಿ ಅವರು ದೋಷಮುಕ್ತರಾಗಲಿ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+