ಸಬರ್ಬನ್ ನಿಲ್ದಾಣವಾಗಿ ಕಂಟೋನ್ಮೆಂಟ್, ಹೆಜ್ಜಾಲ ರೈಲ್ವೆ ನಿಲ್ದಾಣ ಪರಿವರ್ತನೆ
ಬೆಂಗಳೂರು, ಮೇ 22: ಬೆಂಗಳೂರು ಉಪನಗರ ರೈಲು ಯೋಜನೆ ಇನ್ನೂ ಕನಸಾಗಿಯೇ ಉಳಿದಿದೆ. ಕಂಟೋನ್ಮೆಂಟ್ ಹಾಗೂ ಹೆಜ್ಜಾಲ ರೈಲ್ವೆ ನಿಲ್ದಾಣವನ್ನು ಉಪನಗರ ರೈಲು ನಿಲ್ದಾಣವನ್ನಾಗಿ ಪರಿವರ್ತಿಸಲಾಗುತ್ತಿದೆ.
ಈ ಎರಡು ರೈಲು ನಿಲ್ದಾಣಗಳು ಪರಿರ್ವತನೆಗೊಂಡ ಬಳಿಕ ಹೆಚ್ಚುವರಿ ರೈಲು ಸೇವೆಯನ್ನು ನೀಡಲು ಸಹಾಯಕವಾಗಲಿದೆ. ಈಗಾಗಲೇ ರೈಲ್ವೆ ಮಂಡಳಿಯು 37.9 ಕೋಟಿ ರೂವನ್ನು 2018-19ನೇ ಸಾಲಿನಲ್ಲೇ ಬಿಡುಗಡೆ ಮಾಡಿದೆ. ನಾಲ್ಕು ಹೆಚ್ಚುವರಿ ಪ್ಲಾಟ್ಫಾರ್ಮ್ ಗಳನ್ನು ನಿರ್ಮಿಸಲಾಗುತ್ತಿದೆ. ಈ ಹೆಚ್ಚುವರಿ ಪ್ಲಾಟ್ಫಾರಂಗಳು ಹೊಸೂರು, ಚಿಕ್ಕಬಳ್ಳಾಪುರ, ಹಿಂದುಪುರ, ದೇವನಹಳ್ಳಿಗೆ ರೈಲು ಸಂಚಾರಕ್ಕೆ ಅನುಕೂಲವಾಗಲಿದೆ.
ನೈಋತ್ಯ ರೈಲ್ವೆ ನಿಲ್ದಾಣಗಳಲ್ಲಿ 2 ಸಾವಿರ ಮಕ್ಕಳ ರಕ್ಷಣೆ
ಹೆಜ್ಜಾಲದಲ್ಲಿ 1200 ಕೋಟಿ ವೆಚ್ಚದಲ್ಲಿ ಕೋಚ್ ಮೇಂಟೆನೆನ್ಸ್ ಯಾರ್ಡ್ ನಿರ್ಮಾಣ ಮಾಡಲಾಗುತ್ತದೆ. ಒಟ್ಟು 500 ಎಕರೆ ಪ್ರದೇಶವನ್ನು ದತ್ತು ತೆಗೆದುಕೊಳ್ಳಲಾಗಿದೆ.ಅಲ್ಲಿ ಮೆಂಟೆನೆನ್ಸ್ ಯಾರ್ಡ್ ನಿರ್ಮಾಣ ಮಾಡಲಾಗುತ್ತದೆ.
ಬೆಂಗಳೂರಲ್ಲಿ ರೈಲ್ವೆ ಪ್ರಯಾಣಿಕರ ಮೊಬೈಲ್ ಕದಿಯೋದು ಇವರೇ ನೋಡಿ
ಅದರಲ್ಲಿ 12 ಪಿಟ್ ಲೈನ್, 12 ಮೆಂಟೆನೆನ್ಸ್ ಪಿಟ್ಸ್ ನಿರ್ಮಾಣವಾಗಲಿದೆ. ರೈಲ್ವೆ ಮಂಡಳಿಯಿಂದ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು 2014ರಲ್ಲೇ ಪರಿವರ್ತಿಸಲು ಯೋಜನೆ ರೂಪಿಸಲಾಗತ್ತು. ಇದರಿಂದ ರಾಮನಗರಕ್ಕೆ ತೆರಳುವ ರೈಲು ಹೊರತುಪಡಿಸಿ ಉಳಿದೆಲ್ಲ ರೈಲುಗಳು ನಿಲುಗಡೆಯಾಗಲಿವೆ.