Get Updates
Get notified of breaking news, exclusive insights, and must-see stories!

ದೆಹಲಿ ಶೃಂಗಸಭೆ; ಎಐ ಆಧಾರಿತ ನೀರು ನಿರ್ವಹಣೆಯಲ್ಲಿ ಬೆಂಗಳೂರು ಜಲಮಂಡಳಿ ಜಾಗತಿಕ ಮಾದರಿ: ರಾಮ್ ಪ್ರಸಾತ್ ಮನೋಹರ್

ನವದೆಹಲಿ: ನಗರದ ನೀರು ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳನ್ನು ಸಮರ್ಥವಾಗಿ ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರು ಜಲಮಂಡಳಿ ಜಾಗತಿಕ ಮಟ್ಟದಲ್ಲಿ ಮಾದರಿಯಾಗಿ ಹೊರಹೊಮ್ಮಿದೆ ಎಂದು ಜಲಮಂಡಳಿ ಅಧ್ಯಕ್ಷ ಹಾಗೂ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಹೇಳಿದರು. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ 'ಎಐ ಇಂಪ್ಯಾಕ್ಟ್ ಶೃಂಗಸಭೆ-2026'ರಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ನೀರು ನಿರ್ವಹಣೆಯಿಂದ ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯತ್ತ ನಡೆದ ಪರಿವರ್ತನೆಯನ್ನು ವಿವರಿಸಿದರು.

40 ಕೋಟಿ ರೂ. ಉಳಿತಾಯ

ಮಂಡಳಿಯ 'ಐಪಂಪ್‌ನೆಟ್' (IPUMPNET) ವ್ಯವಸ್ಥೆಯ ಬಗ್ಗೆ ವಿವರಿಸಿದ ಮನೋಹರ್, ಪಂಪಿಂಗ್ ಸ್ಟೇಷನ್‌ಗಳು ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಕಾರ್ಯಕ್ಷಮತೆಯನ್ನು ಎಐ ಆಧಾರಿತ ಪಂಪ್ ವ್ಯವಸ್ಥೆಗಳ ಮೂಲಕ ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಹೇಳಿದರು. ಎಐ ಆಧಾರಿತ ಪಂಪ್ ನಿಯಂತ್ರಣ ವ್ಯವಸ್ಥೆ ಅಳವಡಿಸಿದ ನಂತರ ವಿದ್ಯುತ್ ಬಳಕೆ ಕಡಿಮೆಯಾಗಿದೆ. ಇದರಿಂದ ವರ್ಷಕ್ಕೆ 40 ಕೋಟಿ ರೂಪಾಯಿಗೂ ಅಧಿಕ ವಿದ್ಯುತ್ ವೆಚ್ಚ ಉಳಿತಾಯವಾಗುತ್ತಿದೆ. ಇದು ಆರ್ಥಿಕ ಲಾಭದ ಜೊತೆಗೆ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

BWSSB

ನೀರು ಸೋರಿಕೆ ಮತ್ತು ಕಳ್ಳತನ ತಡೆಗೆ ರೋಬೋಟಿಕ್ಸ್

ಲೆಕ್ಕಕ್ಕೆ ಸಿಗದ ನೀರು (Non-Revenue Water-NRW) ಸಮಸ್ಯೆ ಪರಿಹಾರಕ್ಕೆ ಎಐ ಚಾಲಿತ ರೋಬೋಟಿಕ್ಸ್ ಬಳಕೆ ಮಾಡಲಾಗುತ್ತಿದೆ. ಪೈಪ್‌ಲೈನ್‌ಗಳಲ್ಲಿ ಸೋರಿಕೆ ಪತ್ತೆಹಚ್ಚಲು ಹಾಗೂ ಅನಧಿಕೃತ ಸಂಪರ್ಕಗಳನ್ನು ಗುರುತಿಸಲು ಈ ತಂತ್ರಜ್ಞಾನ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.ಮುಂಜಾಗ್ರತಾ ಕ್ರಮಗಳ ಮೂಲಕ ಸೋರಿಕೆಯಾಗುತ್ತಿದ್ದ ಅಮೂಲ್ಯ ನೀರನ್ನು ಉಳಿಸಿ, ಅದನ್ನು ಅಗತ್ಯವಿರುವ ನಾಗರಿಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವಿವರಿಸಿದರು.

ಐಐಎಸ್‌ಸಿ ಸಹಯೋಗದಲ್ಲಿ ಅಂತರ್ಜಲ ರಕ್ಷಣೆ

ನಗರದ ಅಂತರ್ಜಲ ಮಟ್ಟದ ವೈಜ್ಞಾನಿಕ ಮೇಲ್ವಿಚಾರಣೆಗೆ ಭಾರತೀಯ ವಿಜ್ಞಾನ ಸಂಸ್ಥೆ ಜೊತೆ ಸಹಯೋಗ ಸಾಧಿಸಲಾಗಿದೆ. ಬೆಂಗಳೂರು ನಗರದಲ್ಲಿ 40 ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲಾಗುತ್ತಿದೆ. ಅಂತರ್ಜಲ ಮಟ್ಟ ಮತ್ತು ಪರಿಸರದ ಮೇಲೆ ಪರಿಣಾಮವನ್ನು ನೈಜ ಸಮಯದಲ್ಲಿ ಅಳೆಯಲು ಎಐ ಆಧಾರಿತ ಐಒಟಿ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ನಾವು ಕೇವಲ ಕೆರೆಗಳನ್ನು ತುಂಬಿಸುತ್ತಿಲ್ಲ; ನಿಖರ ದತ್ತಾಂಶದ ಆಧಾರದಲ್ಲಿ ಅಂತರ್ಜಲ ಸುಧಾರಣೆಯನ್ನು ದಾಖಲಿಸುತ್ತಿದ್ದೇವೆ ಎಂದು ಹೇಳಿದರು.

ಸ್ಮಾರ್ಟ್ ಮೀಟರ್ ಮತ್ತು ಎಐ-ಸ್ಕಾಡಾ ವ್ಯವಸ್ಥೆ

ಬೃಹತ್ ಬಳಕೆದಾರರಿಗೆ ನಿಖರ ಬಿಲ್ ನೀಡಲು ಎಐ ಆಧಾರಿತ ಸ್ಮಾರ್ಟ್ ವಾಟರ್ ಮೀಟರ್ ಅಳವಡಿಸುವ ಪ್ರಸ್ತಾಪವಿದೆ. ಜೊತೆಗೆ ನಗರದ ನೀರು ಸರಬರಾಜು ವ್ಯವಸ್ಥೆಗೆ 'ಎಐ ಸಮಗ್ರ ಸ್ಕಾಡಾ ನಿರ್ವಹಣಾ ವ್ಯವಸ್ಥೆ' ಶೀಘ್ರದಲ್ಲೇ ಚಾಲನೆ ಪಡೆಯಲಿದೆ. ಈ ಯೋಜನೆಯನ್ನು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ರಾಜಕೀಯ ಇಚ್ಛಾಶಕ್ತಿ ಪ್ರಮುಖ ಕಾರಣ

ಈ ತಾಂತ್ರಿಕ ಪರಿವರ್ತನೆಗೆ ರಾಜ್ಯ ಸರ್ಕಾರದ ದೃಢ ನಾಯಕತ್ವ ಕಾರಣ ಎಂದು ಶ್ಲಾಘಿಸಿದರು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯ ನಾಯಕತ್ವದಿಂದ ಈ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗಿದೆ. ತಂತ್ರಜ್ಞಾನವನ್ನು ಜನಸಾಮಾನ್ಯರ ಒಳಿತಿಗಾಗಿ ಬಳಸುವ ರಾಜ್ಯದ ಬದ್ಧತೆಯಿಂದ ಬೆಂಗಳೂರು ಇಂದು ನೀರಿನ ಭದ್ರತೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.

ಈ ಸಂವಾದದಲ್ಲಿ ಗೂಗಲ್ ಡೀಪ್‌ಮೈಂಡ್, ಐಐಟಿ ದೆಹಲಿ ಹಾಗೂ ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್‌ಮೆಂಟ್ ಮತ್ತು ವಾಟರ್ ಸೇರಿದಂತೆ ಜಾಗತಿಕ ತಜ್ಞರು ಭಾಗವಹಿಸಿದ್ದರು. ಬೆಂಗಳೂರು ಜಲಮಂಡಳಿಯ ಎಐ ಆಧಾರಿತ ನೀರು ನಿರ್ವಹಣಾ ಮಾದರಿ, ನಗರ ಆಡಳಿತದಲ್ಲಿ ತಂತ್ರಜ್ಞಾನ ಬಳಕೆಯ ಹೊಸ ಮಾನದಂಡವನ್ನು ಸ್ಥಾಪಿಸುತ್ತಿದೆ ಎಂಬುದು ಶೃಂಗಸಭೆಯಲ್ಲಿ ವ್ಯಕ್ತವಾದ ಪ್ರಮುಖ ಅಭಿಪ್ರಾಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+