Bengaluru Suburban Rail; ಸಬ್ ಅರ್ಬನ್ ರೈಲು ಯೋಜನೆ, ಯಾವ ಮಾರ್ಗದಲ್ಲಿ ಮೊದಲು ಸಂಚಾರ
ಬೆಂಗಳೂರು, ಡಿಸೆಂಬರ್ 07: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಕರ್ನಾಟಕ ಸರ್ಕಾರ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ)ಯನ್ನು ಜಾರಿಗೊಳಿಸುತ್ತಿದೆ. 148 ಕಿ. ಮೀ. ಉದ್ದದ ಈ ಯೋಜನೆ ಒಟ್ಟು 4 ಕಾರಿಡಾರ್ಗಳನ್ನು ಒಳಗೊಂಡಿದೆ. ಇವುಗಳ ಪೈಕಿ ಎರಡು ಕಾರಿಡಾರ್ಗಳ ಕೆಲಸ ಪ್ರಗತಿಯಲ್ಲಿದೆ. ನಗರದಲ್ಲಿ ಸಬ್ ಅರ್ಬನ್ ರೈಲು ಸಂಚಾರ ಯಾವಾಗ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ಯೋಜನೆಯನ್ನು ಕರ್ನಾಟಕ ಸರ್ಕಾರ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಹಂತ ಹಂತವಾಗಿ ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಸಂಚಾರ ಆರಂಭವಾಗಲಿದೆ.

ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ ಬಿಎಸ್ಆರ್ಪಿಯ ಎರಡು ಮಾರ್ಗದಲ್ಲಿ ಮೊದಲ ಹಂತದ ಸಂಚಾರ 2027ರಲ್ಲಿ ಆರಂಭವಾಗಲಿದೆ. ಮೂರು ಬೋಗಿಯ ರೈಲು 10 ನಿಮಿಷಗಳ ಅಂತರದಲ್ಲಿ ಸಂಚಾರವನ್ನು ನಡೆಸಲಿವೆ. ಬಳಿಕ ರೈಲು ಸಂಚಾರದ ಅವಧಿಯನ್ನು 5 ನಿಮಿಷಕ್ಕೆ ತರಲಾಗುತ್ತದೆ.
ಯಾವ ಮಾರ್ಗ ಮೊದಲು ಆರಂಭ?; ವರದಿಯ ಪ್ರಕಾರ 2026ರ ಡಿಸೆಂಬರ್ನಲ್ಲಿ ಚಿಕ್ಕಬಣಾವರ-ಯಶವಂತಪುರ ನಡುವಿನ 8 ಕಿ. ಮೀ. ಮಾರ್ಗ ಕಾರಿಡಾರ್-2 ಸಂಚಾರಕ್ಕೆ ಮುಕ್ತವಾಗಲಿದೆ. ನಾಲ್ಕು ತಿಂಗಳ ಬಳಿಕ ಹೀಗಲಿಗೆ-ಬೆನ್ನಿಗಾನಹಳ್ಳಿ ಕಾರಿಡಾರ್ -4ರ 17 ಕಿ. ಮೀ. ವಿಸ್ತರಿತ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ. 2028ರ ಡಿಸೆಂಬರ್ನಿಂದ 2029ರ ಜೂನ್ ನಡುವೆ ಬಿಎಸ್ಆರ್ಪಿಯ ಎಲ್ಲಾ 148 ಕಿ. ಮೀ. ಮಾರ್ಗದಲ್ಲಿ ರೈಲು ಸಂಚಾರವನ್ನು ನಡೆಸಲಿದೆ.
ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ಬಿಎಸ್ಆರ್ಪಿ ಯೋಜನೆಗೆ 306 ರೈಲು ಬೋಗಿ ಖರೀದಿ ಮಾಡಲು ಒಪ್ಪಿಗೆ ನೀಡಿದೆ. ಕೆ-ರೈಡ್ ಈ ಕುರಿತು ಸರ್ಕಾರದ ಅಧಿಕೃತ ಆದೇಶಕ್ಕೆ ಕಾಯುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಶೇ 50ರಷ್ಟು ಅನುದಾನವನ್ನು ಬೋಗಿಯ ಖರೀದಿಗೆ ನೀಡಲಿವೆ. ಇದಕ್ಕೆ ಸುಮಾರು 4270 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಬೋಗಿ ಖರೀದಿಗೆ ಟೆಂಡರ್ ಕರೆಯಲು ನಾವು ತಯಾರಿ ನಡೆಸಿದ್ದೇವೆ. ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದ ಬಳಿಕ ರೈಲ್ವೆ ಬೋರ್ಡ್ಗೆ ಉಳಿದ ಶೇ 50ರಷ್ಟು ಅನುದಾನಕ್ಕಾಗಿ ಪತ್ರವನ್ನು ಬರೆಯಲಾಗುತ್ತದೆ. ಅನುದಾನ ಬಂದ ಬಳಿಕ ಟೆಂಡರ್ ಕರೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೋಗಿಯನ್ನು ಪೂರೈಸುವ ಕಂಪನಿ 5 ವಿನ್ಯಾಸಗಳನ್ನು ನೀಡಬೇಕಿದೆ. ಕೆ-ರೈಡ್ ಒಂದು ವಿನ್ಯಾಸ ಅಂತಿಮಗೊಳಿಸಲಿದೆ. ಬೆಂಗಳೂರು ಮೆಟ್ರೋ ಮಾದರಿಯಲ್ಲಿ ಮೊದಲು 3 ಬೋಗಿಯ ರೈಲು ಓಡಿಸಲಾಗುತ್ತದೆ ಬಳಿಕ ಇದನ್ನು 6 ಬೋಗಿಯ ರೈಲಾಗಿ ಪರಿವರ್ತನೆ ಮಾಡಲಾಗುತ್ತದೆ.
ಬಿಎಸ್ಆರ್ಪಿ ಒಂದು ಕಾರಿಡಾರ್ ಸಂಪೂರ್ಣವಾಗುವ ತನಕ ನಾವು ಕಾಯುವುದಿಲ್ಲ. ಎರಡು ಕಾರಿಡಾರ್ನ ಒಂದು ಹಂತ ಕೆಲಸಗಳು ಪೂರ್ಣವಾದಾಗ ರೈಲು ಬೋಗಿಯ ಲಭ್ಯತೆ ನೋಡಿಕೊಂಡು ಸಂಚಾರವನ್ನು ಆರಂಭಿಸುತ್ತೇವೆ. ಮಾರ್ಗ ಸಂಚಾರಕ್ಕೆ ಸಿದ್ಧವಾಗುವ ಹೊತ್ತಿಗೆ 8 ರಿಂದ 10 ಬೋಗಿಗಳು ಆಗಮಿಸುವ ನಿರೀಕ್ಷೆ ಇದೆ.
ಈ ರೈಲು ಬೋಗಿಗಳು ದೆಹಲಿ ಮೆಟ್ರೋ ಮಾದರಿಯಲ್ಲಿ ಇರಲಿವೆ. ಪ್ರತಿ ಬೋಗಿಯಲ್ಲಿ 80 ಸೀಟುಗಳು ಇರಲಿದ್ದು, 300 ಜನರು ಸಂಚಾರ ನಡೆಸಬಹುದು. ಸದ್ಯಕ್ಕೆ ಪ್ರತಿ 10 ನಿಮಿಷಕ್ಕೊಂದು ರೈಲು ಎಂದು ಯೋಜನೆ ರೂಪಿಸಲಾಗಿದೆ. ಬೆಳಗ್ಗೆ 4.30ರಿಂದ ರಾತ್ರಿ 11.30ರ ತನಕ ರೈಲುಗಳು ಸಂಚಾರ ನಡೆಸಲಿವೆ ಎಂದು ಕೆ-ರೈಡ್ ಅಂದಾಜಿಸಿದೆ.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications