ಪ್ರಯಾಣಿಕರಿಗೆ ಸಿಹಿ ಸುದ್ದಿ: ಬಿಎಂಟಿಸಿ ಹೊಸ ಮಾರ್ಗಗಳ ಪರಿಚಯ
ಬೆಂಗಳೂರು: ಸಿಲಿಕಾನ್ ಸಿಟಿಯ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ನಗರದ ಪ್ರಯಾಣಿಕರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದೆ.
ಸಾರ್ವಜನಿಕ ದೀರ್ಘಕಾಲದ ಬೇಡಿಕೆಯನ್ನು ಪರಿಗಣಿಸಿ ಸಂಸ್ಥೆಯು ಇದೇ ಬರುವ ಮಾರ್ಚ್ 9,2026 ಸೋಮವಾರದಿಂದ ನಗರದ ವಿವಿಧೆಡೆ ನೂತನ ಬಸ್ ಮಾರ್ಗಗಳು ಸಾರ್ವಜನಿಕರ ಸೇವೆಗೆ ಇಳಿಯಲಿವೆ.

ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು ಹೊಸ ಬಡಾವಣೆಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುವುದು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಬಿಎಂಟಿಸಿ, ನಮ್ಮ ಮೆಟ್ರೋ ರೈಲು ತಲುಪದ ಭಾಗಗಳಿಗೆ ಹಾಗೂ ಹೆಚ್ಚಿನ ಜನದಟ್ಟಣೆ ಇರುವ ಪ್ರದೇಶಗಳಿಗೆ ಮಿತವ್ಯಯಕಾರಿ ಮತ್ತು ದಕ್ಷ ಸಾರಿಗೆ ಸೌಲಭ್ಯ ಒದಗಿಸಲು ಈ ಹೊಸ ಮಾರ್ಗಗಳನ್ನು ಪರಿಚಯಿಸಲಾಗುತ್ತಿದೆ. ಹೊಸದಾಗಿ ಆರಂಭಿಸಲಾದ ಮಾರ್ಗದ ಸಂಪೂರ್ಣ ವಿವರ ಈ ಕೆಳಗಿನಂತಿದೆ.
| ಕ್ರ. ಸಂ. | ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಿಡುವ ಸಮಯ | ಸುತ್ತುವಳಿ ಸಂಖ್ಯೆ |
|---|---|---|---|---|---|---|
| 1 | MF 22-E | ಹೊಸರೋಡ್ ಮೆಟ್ರೋ ನಿಲ್ದಾಣ (ಚಕ್ರ ಮಾರ್ಗ) | ಹೊಸರೋಡ್ ಮೆಟ್ರೋ ನಿಲ್ದಾಣ | ಸೆಂಟ್ರಲ್ ಜೈಲ್, ಹರಳೂರು, ಅಗರ, ಪರಂಗಿಪಾಳ್ಯ, ಸೋಮಸುಂದರ ಪಾಳ್ಯ, ಕೂಡ್ಲು ಗೇಟ್, ಸಿಂಗಸಂದ್ರ | 0600, 0700, 0815, 0845, 0915, 0930, 1000, 1030, 1100, 1130, 1200, 1240, 1310, 1430, 1500, 1530, 1600, 1620, 1650, 1710, 1730, 1800, 1910, 2020, 2140 | 25 |
| 2 | MF 22-EA | ಹೊಸರೋಡ್ ಮೆಟ್ರೋ ನಿಲ್ದಾಣ (ಚಕ್ರ ಮಾರ್ಗ) | ಹೊಸರೋಡ್ ಮೆಟ್ರೋ ನಿಲ್ದಾಣ | ಸಿಂಗಸಂದ್ರ, ಕೂಡ್ಲು ಗೇಟ್, ಸೋಮಸುಂದರ ಪಾಳ್ಯ, ಪರಂಗಿಪಾಳ್ಯ, ಅಗರ, ಹರಳೂರು, ಸೆಂಟ್ರಲ್ ಜೈಲ್ | 0615, 0715, 0830, 0900, 0930, 0945, 1015, 1045, 1115, 1145, 1215, 1255, 1325, 1405, 1435, 1510, 1530, 1555, 1625, 1645, 1710, 1730, 1845, 1955, 2120 | 25 |
| 3 | MF 22-K | ಹೊಸರೋಡ್ ಮೆಟ್ರೋ ನಿಲ್ದಾಣ | ಕಾರ್ಮೆಲಾರಾಂ ಬಸ್ ನಿಲ್ದಾಣ | ದೊಡ್ಡಮರ, ಚಿಕ್ಕನಾಯಕನಹಳ್ಳಿ, ದೊಡ್ಡಕನ್ನಲ್ಲಿ | 0600, 0635, 0710, 0755, 0835, 0915, 0955, 1045, 1120, 1155, 1230, 1430, 1505, 1540, 1625, 1700, 1735, 1815, 1855, 1935, 2010, 2100 | 44 |
ಬಿಎಂಟಿಸಿ: ಇಂದಿನಿಂದ ರಾಮನಗರ, ಕನಕಪುರಕ್ಕೂ 'ವಜ್ರ ವಿಸ್ತಾರ' ಎಸಿ ಬಸ್ ಸಂಚಾರ ಆರಂಭ!
ಫ್ರಯಾಣಿಕರಿಗೆ ಹೊಸ ಮಾರ್ಗಗಳ ಪರಿಚಯ
ಬೆಂಗಳೂರಿನ ಸಂಚಾರ ದಟ್ಟಣೆಗೆ ಪರ್ಯಾಯ ಮಾರ್ಗವಾಗಿರುವ ನೈಸ್ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಹಿ ಸುದ್ದಿ ನೀಡಿದೆ. ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ ಈ ಭಾಗದಲ್ಲಿ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೆಶದಿಂದ ಮಾರ್ಚ್ 5, 2026 ರಿಂದ ಜಾರಿಗೆ ಬರುವಂತೆ ನೂತನ ಹವಾನಿಯಂತ್ರಿತ ರಹಿತ ಬಸ್ ಸೇವೆಗಳನ್ನು ಪ್ರಾರಂಭಿಸಿದೆ.
ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಮಾರ್ಗಗಳನ್ನು ಪರಿಚಯಸಲಾಗಿದ್ದು, ಇದರಿಂದ ಉದ್ಯೋಗಿಗಳು, ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಕರವಾಗಲಿದೆ ಎಂದು ಬೆಂ.ಮ.ಸಾ. ಸಂಸ್ಥೆ ತಿಳಿಸಿದೆ. ಹೊಸದಾಗಿ ಆರಂಭಿಸಲಾದ ಮಾರ್ಗದ ಸಂಪೂರ್ಣ ವಿವರ ಈ ಕೆಳಗಿನಂತಿದೆ.
| ಮಾರ್ಗ | ಎಲ್ಲಿಂದ | ಎಲ್ಲಿಗೆ | ಮಾರ್ಗ ವಿವರ | ಬಸ್ಸು / ಸುತ್ತುವಳಿಗಳ ಸಂಖ್ಯೆ |
|---|---|---|---|---|
| ನೈಸ್-4 | ವಿಜಯನಗರ ಟಿಟಿಎಂಸಿ (ಬಿಡುವ ವೇಳೆ: 6.25 Hrs) | ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ (ಬಿಡುವ ವೇಳೆ: 16.35 Hrs) | ಚಂದ್ರ ಲೇಔಟ್, ನಾಯಂಡಹಳ್ಳಿ ಜಂಕ್ಷನ್ | 2 ಸುತ್ತುವಳಿಗಳು |
ಹೊಸ ಮಾರ್ಗದ ವೇಳಾಪಟ್ಟಿ ಮತ್ತು ನಿಲುಗಡೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಾರ್ವಜನಿಕರು ಹತ್ತಿರದ ಬಿಎಂಟಿಸಿ ಡಿಪೋ ಅಥವಾ ಅಧಿಕೃತ ಮೊಬೈಲ್ ಆಪ್ ಮೂಲಕ ಪಡೆದುಕೊಳ್ಳಬಹುದಾಗಿದೆ.
ರಾಮನಗರ, ಕನಕಪುರಕ್ಕೂ 'ವಜ್ರ' ವೈಭವ
ಬಿಎಂಟಿಸಿ ತನ್ನ ಸೇವೆಯನ್ನು ವಿಸ್ತರಿಸುವ ಮೂಲಕ ಇಂದು ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ಸೇವೆಯನ್ನು ಈಗ ಸಮೀಪದ ಜಿಲ್ಲೆಗಳ ಗ್ರಾಮೀಣ ಭಾಗಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಬಿಎಂಟಿಸಿ ವ್ಯಾಪ್ತಿಯನ್ನು 25 ಕಿ.ಮೀ ನಿಂದ 40 ಕಿ.ಮೀ ಗೆ ಹೆಚ್ಚಿಸಲಾಗಿದ್ದು, ಇದರ ಮೊದಲ ಭಾಗವಾಗಿ ಮಾರ್ಚ್ 04, 2026 ರಂದು ರಾಮನಗರ ಮತ್ತು ಕನಕಪುರಕ್ಕೆ 'ವಜ್ರ ವಿಸ್ತಾರ' (Vajra Vistara) ಎಸಿ ಬಸ್ಗಳ ಸಂಚಾರಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಈ ಮೂಲಕ ಹೊರವಲಯದ ಪ್ರಯಾಣಿಕರಿಗೂ ಆರಾಮದಾಯಕ ಎಸಿ ಬಸ್ ಸೌಲಭ್ಯ ಲಭ್ಯವಾಗಲಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications