BMTC Good news: ಇನ್ಮುಂದೆ ಈ ಮಾರ್ಗದಲ್ಲೂ ಬರುತ್ತೆ ಬಿಎಂಟಿಸಿ ಬಸ್!
ಬೆಂಗಳೂರಿನ ಜನರಿಗೆ (Bengaluru Metropolitan Transport Corporation)ಬಿಎಂಟಿಸಿ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಲ್ಲಿ ಮೊದಲಿನಿಂದಲೂ ಬಿಎಂಟಿಸಿ (BMTC) ಜನರ ಪ್ರಯಾಣದ ಜೀವನಾಡಿ. ಬಿಎಂಟಿಸಿ ಇಂದಿಗೂ ಲಕ್ಷಾಂತರ ಜನರ ಪ್ರಯಾಣದ ಪಾರ್ಟನರ್. ಈಗ ಹೊಸ ಮಾರ್ಗದಲ್ಲೂ ಬಸ್ ಸೇವೆ ಕಲ್ಪಿಸಲು ಬಿಎಂಟಿಸಿ ಮುಂದಾಗಿದೆ. ಈ ಮೂಲಕ ಎಂಡ್ ಟು ಎಂಡ್ ಕನೆಕ್ಟಿವಿಟಿ (ಪ್ರಯಾಣದ ಪ್ರಾರಂಭದಿಂದ ಪ್ರಯಾಣ ಮುಕ್ತಾಯದವರೆಗಿನ ಸೇವೆ) ನೀಡಲು ಮುಂದಾಗಿದೆ. ಇದರಿಂದ ನೀವು ಬಸ್ ಬಳಸಿದ ನಂತರ ಮತ್ತೆ ಆಟೋ ಬಳಸಬೇಕಾದ ಅನಿವಾರ್ಯತೆ ಈ ಪ್ರದೇಶಗಳಲ್ಲಿ ತಪ್ಪಲಿದೆ.
ಎಲ್ಲೆಲ್ಲಿ ಬಿಎಂಟಿಸಿಯಿಂದ ಹೊಸ ಬಸ್ ಸೇವೆ: ಬಿಎಂಟಿಸಿಯು ಹಲವು ಹೊಸ ಮಾರ್ಗದಲಿ ಬಸ್ ಸೇವೆ ಕಲ್ಪಿಸುವುದಾಗಿ ತಿಳಿಸಿದೆ. ಹೊಸ ಬಸ್ ಸೇವೆ ಮಾರ್ಗಗಳಲ್ಲಿ ಬಸ್ ಸೇವೆ ಕಲ್ಪಿಸುವುದರ ಬಗ್ಗೆ ಜನರಿಂದಲೂ ಬಹು ಬೇಡಿಕೆಯೂ ಇತ್ತು. ಇದನ್ನು ಪರಿಗಣನೆಗೆ ತೆಗೆದುಕೊಂಡಿರುವ ಬಿಎಂಟಿಸಿ, ಈ ಮಾರ್ಗದಲ್ಲೂ ಹೊಸ ಬಸ್ಗಳನ್ನು ಬಿಟ್ಟಿದೆ. ಅದು ಯಾವುದು ಎನ್ನುವ ವಿವರ ಇಲ್ಲಿದೆ.

154: ಹಳೇ ಗುಡ್ಡದಹಳ್ಳಿ (Guddadahalli)- ಶಿವಾಜಿನಗರ: ಶಿರಸಿ (Sirsi Circle), ಕೆ.ಆರ್ ಮಾರ್ಕೆಟ್ ಮತ್ತು ಕಾರ್ಪೊರೇಷನ್ ಸರ್ಕಲ್ ಮಾರ್ಗವಾಗಿ ಈ ಬಸ್ ಸಾಗಲಿದೆ.
255 - R: ಯಶವಂತಪುರದ (Ttmc) ಮುಖ್ಯಬಸ್ ನಿಲ್ದಾಣದಿಂದ ರೈಲ್ವೆ ಗೊಲ್ಲಹಳ್ಳಿಗೆ ಹೋಗುವ ಮಾರ್ಗದಲ್ಲಿ ಹೊಸ ಬಸ್ ಪರಿಚಯಿಸಲಾಗಿದೆ. ಈ ಬಸ್ ಜಾಲಹಳ್ಳಿ ಕ್ರಾಸ್, ಮಾಕಳಿ ಹಾಗೂ ಹುಸ್ಕೂರು ಮಾರ್ಗವಾಗಿ ಹೋಗಲಿದೆ.
253C: ಯಶವಂತಪುರದಿಂದ ಕನಸವಾಡಿ: ಈ ಬಸ್ ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರ, ಹೆಸರಘಟ್ಟ, ಟಿ.ಬಿ ಕ್ರಾಸ್, ಕುಕ್ಕನಹಳ್ಳಿ ಹಾಗೂ ಮಧುರೆ ಮಾರ್ಗವಾಗಿ ಸಾಗಲಿದೆ.
374-S: ನೆಲಮಂಗಲ - ಸುಮನಹಳ್ಳಿ ಜಂಕ್ಷನ್: ಸೊಂಡೆಕೊಪ್ಪ, ತಾವರೆಕೆರೆ ಹಾಗೂ ಸುಂಕದಕಟ್ಟೆ ಮಾರ್ಗವಾಗಿ ಈ ಬಸ್ ಸಂಚರಿಸಲಿದೆ.
401- RA: ಚಿಕ್ಕೇಗೌಡನಪಾಳ್ಯದಿಂದ ಯಶವಂತಪುರ ಮುಖ್ಯಬಸ್ ನಿಲ್ದಾಣ: ಶ್ರೀನಿವಾಸಪುರ ಕ್ರಾಸ್, ಹಲಗೆವಡೇರಹಳ್ಳಿ, ವಿಜಯನಗರ ಹಾಗೂ ರಾಜಾಜಿನಗರ 1ನೇ ಬ್ಲಾಕ್ ಮಾರ್ಗವಾಗಿ ಈ ಬಸ್ ಸಾಗಲಿದೆ.
516: ನೆಲಮಂಗಲದಿಂದ ಕೆಂಗೇರಿ (ಟಿಟಿಎಂಸಿ): ಈ ಬಸ್ ಮಾದನಾಯಕನಹಳ್ಳಿ, ಗಂಗೊಂಡನಹಳ್ಳಿ, ಕಾಚೋಹಳ್ಳಿ, ಗೊಲ್ಲರಹಟ್ಟಿ, ಕನ್ನಳ್ಳಿ ಹಾಗೂ ಸೂಳಿಕೆರೆ ಮಾರ್ಗಗಳಲ್ಲಿ ಸಂಚರಿಸಲಿದೆ.
ನಾಳೆಯಿಂದಲೇ ಹೊಸ ಸೇವೆ ಪ್ರಾರಂಭ
ಇನ್ನು ಬಿಎಂಟಿಸಿಯು ಗಣೇಶ ಚತುರ್ಥಿ ಬೆನ್ನಲ್ಲೇ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡಿದೆ. ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸೇವೆ ಕಲ್ಪಿಸಿದ್ದು. ಈ ಮಾರ್ಗಗಳಲ್ಲಿ ನಾಳೆಯಿಂದಲೇ (ಸೆಪ್ಟೆಂಬ್ 9)ರಿಂದ ಬಿಎಂಟಿಸಿ ಬಸ್ಗಳು ಸಂಚಾರ ಪ್ರಾರಂಭಿಸಲಿವೆ.ಆದರೆ, ಈ ಬಸ್ಗಳು ನಾನ್ ಎಸಿ (ಎಸಿ ರಹಿತ) ಆಗಿರಲಿವೆ. ಇದರಿಂದ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಪ್ರಯಾಣಿಸುವ ಬಸ್ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಲ್ಲದೇ ಎಂಡ್ ಟು ಎಂಡ್ ಕನೆಕ್ಟಿವಿಟಿಗೆ ಸಹಕಾರವಾಗಲಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications