ಇಂದಿರಾ ನಾಯಕತ್ವವನ್ನು ದೇಶ ಮತ್ತೊಮ್ಮೆ ನೆನಪಿಸಿಕೊಳ್ಳಲಿದೆ: ಕಾಂಗ್ರೆಸ್
ಬೆಂಗಳೂರು, ಅಕ್ಟೋಬರ್ 31: ಇಂದಿರಾ ನಾಯಕತ್ವವನ್ನು ದೇಶವು ಮತ್ತೊಮ್ಮೆ ನೆನಪಿಸಿಕೊಳ್ಳಲಿದೆ, ಕಾಂಗ್ರೆಸೇತರ ಪಕ್ಷಗಳೂ ಕೂಡ ಇಂದಿರಾಗಾಂಧಿಯನ್ನು ನೆನೆಯುವ ದಿನ ಬರಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಇಂದಿರಾಗಾಂಧಿ ಪುಣ್ಯತಿಥಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿ, ಇಂದು ಬಿಜೆಪಿ ಪಕ್ಷ ಗುಜರಾತ್ ನಲ್ಲಿ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆ ಅನಾವರಣಗೊಳಿಸಿದೆ. ಇದನ್ನು ನಾವು ಬಿಜೆಪಿಯವರು ಮಾಡಿದರು ಎಂದು ತಪ್ಪಾಗಿ ಭಾವಿಸದೇ, ಈ ರೀತಿ ಕಾಂಗ್ರೆಸೇತರರು ಪಟೇಲರ ಸಾಧನೆಯನ್ನು ಗುರುತಿಸಿದ್ದಕ್ಕೆ ಹೆಮ್ಮೆ ಪಡುವ ಕಾರ್ಯ ಮಾಡಬೇಕು ಎಂದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯ ಸ್ಮರಣೆ ಮಾತ್ರವಲ್ಲದೇ ಸರ್ದಾರ್ ವಲ್ಲಭಾಬಾಯಿ ಪಟೇಲರ ಜನ್ಮದಿನ ಆಚರಣೆ ಕೂಡ ಮಾಡಲಾಯಿತು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರ್ ಹಾಗೂ ಮಾಜಿ ಸಚಿವೆ ಮೋಟಮ್ಮ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ಗಾಂಧೀಜಿಯವರನ್ನು ರಾಜಕೀಯ ಎದುರಾಳಿಗಳೇ ಒಪ್ಪಿಕೊಂಡಿದ್ದರು
ಗಾಂಧೀಜಿಯವರನ್ನೇ ರಾಜಕೀಯ ಎದುರಾಳಿಗಳೇ ಮೆಚ್ಚಿ ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸರ್ದಾರ್ ವಲ್ಲಭಬಾಯ್ ಪಟೇಲ್, ಜವಾಹರ ಲಾಲ್ ನೆಹರು ಅವರನ್ನೂ ಒಪ್ಪುವ ಸ್ಥಿತಿ ನಿರ್ಮಾಣವಾಗಿದೆ. ದೇಶದ ವಿಭಜನೆ ಸಂದರ್ಭದಲ್ಲಿ, ಪಂಜಾಬ್ ಕ್ರಾಂತಿ ವೇಳೆ ಕೂಡ ಇಂದಿರಾಗಾಂಧಿ ಶ್ರಮಿಸಿದ್ದರು. ದೇಶ ವಿಭಜನೆ ತಡೆದಿದ್ದರು. ಇವರ ಕೊಡುಗೆಯನ್ನು ಇಂದಿನ ರಾಜಕಾರಣಿಗಳು ನೆನೆಯಬೇಕಿದೆ.

ಸರ್ದಾರ್ ಪಟೇಲ್, ನೆಹರು ಇಬ್ಬರೂ ಅಪ್ರತಿಮ ಹೋರಾಟಗಾರರು
ವಲ್ಲಭಭಾಯಿ ಪಟೇಲ್ ಹಾಗೂ ನೆಹರು ಇಬ್ಬರೂ ದೇಶ ಕಂಡ ಅಪ್ರತಿಮ ಹೋರಾಟಗಾರರು. ಮುಂದೊಂದು ದಿನ ಇಂದಿರಾಗಾಂಧಿ ಕೊಡುಗೆಯನ್ನು ಕಾಂಗ್ರೆಸೇತರ ಪಕ್ಷಗಳು ಕೊಂಡಾಡುವ ದಿನ ಬರಲಿದೆ ಎಂದು ಆಶಿಸಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಇಂದಿರಾ ಭಾಗಿ
ಸ್ವಾತಂತ್ರ್ಯ ಚಳವಳಿಯಲ್ಲಿ ಇಂದಿರಾ ಗಾಂಧಿ ತೊಡಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಸ್ವಾತಂತ್ರ್ಯ ಬಂದ ನಂತರ ಇಡೀ ರಾಜಕಾರಣದ ದಿಕ್ಕನ್ನೇ ಬದಲಿಸಿದರು. ಸಾಮಾನ್ಯರು ಕೂಡ ರಾಜಕೀಯ ದಲ್ಲಿ ಮೆರೆಯಬಹುದು ಎನ್ನುವುದನ್ನು ತೋರಿಸಿ, ರಾಜಕೀಯ ವಿಕೇಂದ್ರೀಕರಣ ಮಾಡಿದರು. ಜಾತಿ, ಹಣ ಬಲ ಇಲ್ಲದೇ ಅಧಿಕಾರ ಹೊಂದಬಹುದು ಎಂಬುದನ್ನು ತೋರಿಸಿದರು. ಹುತಾತ್ಮರಾದ ದಿನ ನೆನೆಯುವ ಸಂದರ್ಭ ಅವರ ಸಾಧನೆಯನ್ನು ಅರಿಯಬೇಕು. ನಮ್ಮ ಸಾಧನೆ ಹೇಳಿಕೊಳ್ಳದಿರುವುದು, ಯಾರಾದರೂ ಅವಮಾನಿಸಿದಾಗ ಹೌದೆಂಬಂತೆ ಮೌನವಹಿಸುವುದು ನಮ್ಮ ದೌರ್ಬಲ್ಯ ಎಂದರು.

ಇಂದಿರಾ ಬಗ್ಗೆ ಎರಡೂ ವಿಧದ ಟೀಕೆ ಇತ್ತು
ಇಂದಿರಾ ಬಗ್ಗೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡೂ ವಿಧದ ಟೀಕೆಗಳಿಗೆ. ಸಾಧನೆ, ಲೋಪ ಒಂದೊಂದು ತಕ್ಕಡಿಯಲ್ಲಿ ಹಾಕಿದಾಗ ಲೋಪ ಕಡಿಮೆ ಇದೆ. ಸಾಧನೆ ದೊಡ್ಡದು. ಪಾಕಿಸ್ತಾನ, ಬಾಂಗ್ಲಾ ದೇಶ ವಿಭಜನೆ ಸಂದರ್ಭ ಇವರು ಕೈಗೊಂಡ ನಿಲುವು ಎಲ್ಲರೂ ಮೆಚ್ಚುವಂತದ್ದು. ಪ್ರತಿಪಕ್ಷಗಳೇ ಮೆಚ್ಚಿ ಹೊಗಳಿದ್ದವು. ಪ್ರಶಂಸೆ ಪಡೆಯುವ ಗುಣ ಇಂದಿರಾಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಇದೆ. ಅಂದು ವಿಷಯಾಧಾರಿತ ರಾಜಕಾರಣ ಇತ್ತು.
ಇಂದು ವ್ಯಕ್ತಿ ಆಧಾರಿತ, ನಿಂದನೆ ಆಧಾರಿತ ರಾಜಕಾರಣ ಇದೆ. ಪಕ್ಷ, ಸಿದ್ಧಾಂತ, ಸಾಧನೆಗೆ ಬೆಲೆ ಸಿಗಬೇಕು. ರಾಜಕೀಯದಲ್ಲಿ ಜಾತಿ, ಪ್ರಭಾವ, ಹಣ, ಮತ ಸೆಳೆಯುವ ಶಕ್ತಿ ಕೆಲಸ ಮಾಡಬಾರದು. ಇಂತವರಿಗೆ ಅವಕಾಶ ಸಿಕ್ಕಾಗ ನಿಷ್ಠರು ಮೂಲೆಗುಂಪಾಗುತ್ತಾರೆ. ಇಂದು ಕಾಂಗ್ರೆಸ್ ಇಂತಹ ಸಮಸ್ಯೆ ಎದುರಿಸುತ್ತಿದೆ. ಇಂದಿರಾಗಾಂಧಿ ಇದನ್ನು ತಡೆದಿದ್ದರು. ಅಂತಹ ಅವಕಾಶ ಮತ್ತೆ ಬಂದು ಅವರ ಆತ್ಮಕ್ಕೆ ಗೌರವ ಸಲ್ಲಿಸುವ ಕಾರ್ಯ ಆಗಬೇಕೆಂದರು.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications