ಬಿಜೆಪಿ ಶಾಸಕ ವಿ ಸೋಮಣ್ಣ ಈ ಸದನದ ಸರ್ವಜ್ಞ: ಕಾಲೆಳೆದ ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಫೆ 12: ಸ್ಪೀಕರ್ ರಮೇಶ್ ಕುಮಾರ್ ಹೆಸರು ಆಡಿಯೋದಲ್ಲಿ ಪ್ರಸ್ತಾವನೆಯಾದ ವಿಚಾರ, ಸದನದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಎಸ್ಐಟಿ ತನಿಖೆ ಬೇಡ. ಸದನ ಸಮಿತಿ ರಚಿಸಿ ಅಥವಾ ನ್ಯಾಯಾಂಗ ತನಿಖೆ ಮೂಲಕ ವಿಚಾರಣೆ ನಡೆಸಲಿ ಎಂದು ಬಿಜೆಪಿ ಪಟ್ಟು ಹಿಡಿದಿದ್ದರೆ, ರಮೇಶ್ ಕುಮಾರ್ ಅದಕ್ಕೆ ನೋ ಎಂದಿದ್ದಾರೆ.
ಆದರೆ, ಪ್ರಸಕ್ತ ವಿಚಾರವನ್ನು ಬಿಟ್ಟು, ಸದನದಲ್ಲಿ ಚರ್ಚೆಗಳು ಬೇರೆ ದಾರೀನೇ ಹಿಡಿಯುತ್ತಿದೆ. ಹಿಂದಿನ ರಾಜಕೀಯ ಕಥೆಗಳನ್ನು ಕೆದಕುತ್ತಾ, ಮೂರೂ ಪಕ್ಷಗಳ ಸದಸ್ಯರು ಚರ್ಚೆಗಿಂತ ಜಾಸ್ತಿ, ಗಲಾಟೆಯನ್ನೇ ಮಾಡುತ್ತಿದ್ದಾರೆ. ಇದರ ನಡುವೆ, ಬಿಜೆಪಿ ಶಾಸಕ ವಿ ಸೋಮಣ್ಣ, ಈ ಸದನದ ಸರ್ವಜ್ಞ ಎಂದು ಸ್ಪೀಕರ್ ರಮೇಶ್ ಕುಮಾರ್ ಕಾಲೆಳೆದಿದ್ದಾರೆ.
ಮೊದಲು ನೀವು ಕೂತುಕೊಳ್ಳಿ, ನೀವ್ಯಾರು ನಮಗೆ ಹೇಳುವುದಕ್ಕೆ, ಸ್ಪೀಕರ್ ಹೇಳಲಿ ಎಂದು ಸಚಿವ ಸಾ. ರಾ ಮಹೇಶ್ ಮತ್ತು ಬಿಜೆಪಿ ಶಾಸಕ ರೇಣುಕಾಚಾರ್ಯ ನಡುವೆ ವಾಗ್ಯುದ್ದವೇ ನಡೆಯುತ್ತಿತ್ತು. ಆಗ ಮಧ್ಯಪ್ರವೇಶಿಸಿದ ಸಚಿವ ಕೆ ಜೆ ಜಾರ್ಜ್, ಇನ್ನೊಬ್ಬ ಶಾಸಕರನ್ನು ಕೂತುಕೊಳ್ಳುವಂತೆ ಹೇಳುವುದು ನಿಮಗಿರುವ ಅಧಿಕಾರ, ಅವರು ಯಾರು ಪ್ರಶ್ನಿಸಲು ಎಂದು ಜಾರ್ಜ್, ಸ್ಪೀಕರ್ ಬಳಿ ಮನವಿ ಮಾಡುತ್ತಿದ್ದರು.

ಆಗ ಎದ್ದು ನಿಂತ ಗೋವಿಂದರಾಜ ನಗರ (ಬೆಂಗಳೂರು) ಕ್ಷೇತ್ರದ ಬಿಜೆಪಿ ಶಾಸಕ ವಿ ಸೋಮಣ್ಣ, ಸಿಎಂ ಸದನದಲ್ಲಿದ್ದಾರೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡುತ್ತಿದ್ದರೆ, ಹಿರಿಯ ನಾಯಕರು, ಸಚಿವರೂ ಆಗಿರುವ ಜಾರ್ಜ್ ಅವರಿಗೆ ಕುಳಿತುಕೊಳ್ಳುವ ವ್ಯವಧಾನ ಇಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ನಮಗೆ ಸೋಮಣ್ಣ ಅವರಿಂದ ಯಾವ ಸರ್ಟಿಫಿಕೇಟ್ ಕೂಡಾ ಬೇಕಾಗಿಲ್ಲ ಎಂದು ಜಾರ್ಜ್ ಮತ್ತೆ ಎದ್ದುನಿಂತರು.
ಜಾರ್ಜ್ ಅವರೇ ಸ್ವಲ್ಪ ಗಾಂಭೀರ್ಯತೆಯಿಂದ ಇರಿ ಎಂದು ಸೋಮಣ್ಣ ಮತ್ತೆ ಮನವಿ ಮಾಡಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ಸೋಮಣ್ಣ ಅವರಿಗೆ ಈ ಸದನದಲ್ಲಿ ವಿಶೇಷವಾದ ಅಧಿಕಾರವಿದೆ. ಈ ಸದನದ ಎಲ್ಲಾ ಸದಸ್ಯರು ವಿ ಸೋಮಣ್ಣನವರ ಮಾತಿಗೆ ಬೆಲೆಕೊಡಬೇಕಾಗುತ್ತದೆ.
ಯಾಕೆಂದರೆ ಅವರು, ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೂರೂ ಪಕ್ಷವನ್ನು ಬಲ್ಲವರು, ಸೋಮಣ್ಣ ಈ ಸದನದ ಸರ್ವಜ್ಞ. ಅವರು ಹೇಳಿದ್ದನ್ನು ನಗುನಗುತ್ತಾ ತೆಗೆದುಕೊಳ್ಳಬೇಕು ಎಂದು ಸ್ಪೀಕರ್ ಕಾಲೆಳೆದಾಗ, ಇಡೀ ಸದನ ನಗೆಗಡಲಲ್ಲಿ ತೇಲಿತು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications