ಸಿಎಂ ನಿವಾಸಕ್ಕೆ ಮುತ್ತಿಗೆ, ಬಿಜೆಪಿ ಕಾರ್ಯಕರ್ತರ ಬಂಧನ
ಬೆಂಗಳೂರು, ನ.5 : ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಒಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ಪಟ್ಟ ಮಹಿಳಾ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಬುಧವಾರ
ಮಲ್ಲೇಶ್ವರಂ
ಬಿಜೆಪಿ
ಕಚೇರಿ
ಬಳಿ
ಬಿಜೆಪಿ
ಮಹಿಳಾ
ಮೋರ್ಚಾ
ಕಾರ್ಯಕರ್ತರ
ಪ್ರತಿಭಟನೆ
ಆರಂಭವಾಯಿತು.
ಬಿಜೆಪಿ
ರಾಷ್ಟ್ರೀಯ
ಉಪಾಧ್ಯಕ್ಷ
ಬಿ.ಎಸ್.ಯಡಿಯೂರಪ್ಪ,
ಸಂಸದೆ
ಶೋಭಾ
ಕರಂದ್ಲಾಜೆ,
ಮಹಿಳಾ
ಮೋರ್ಚಾದ
ಅಧ್ಯಕ್ಷೆ
ಶಶಿಕಲಾ
ಜೊಲ್ಲೆ,
ಮಾಳವಿಕಾ
ಅವಿನಾಶ್,
ಮಾಜಿ
ಗೃಹ
ಸಚಿವ
ಆರ್.ಅಶೋಕ್,
ಮಾಜಿ
ಸಿ.ಎಂ
ಜಗದೀಶ್
ಶೆಟ್ಟರ್
ಮುಂತಾದವರು
ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದರು.
ರಾಜ್ಯದಲ್ಲಿ
ಮಹಿಳೆಯರು,
ಮಕ್ಕಳ
ಮೇಲೆ
ಅತ್ಯಾಚಾರ
ನಡೆಯುತ್ತಿದ್ದರೂ
ಸರ್ಕಾರ
ನಿರ್ಲಕ್ಷ್ಯವಹಿಸಿದೆ
ಎಂದು
ಪ್ರತಿಭಟನಾಕಾರರು
ಸರ್ಕಾರದ
ವಿರುದ್ಧ
ಆಕ್ರೋಶ
ವ್ಯಕ್ತಪಡಿಸಿದರು.
ಮುಖ್ಯಮಂತ್ರಿ
ಅವರ
ಗೃಹ
ಕಚೇರಿಗೆ
ಮುತ್ತಿಗೆ
ಹಾಕಲು
ಯತ್ನಿಸಿದ
ಕಾರ್ಯಕರ್ತರನ್ನು
ಶೇಷಾದ್ರಿಪುರಂ
ಕಾಲೇಜಿನ
ಬಳಿ
ಪೊಲೀಸರು
ಬಂಧಿಸಿದರು.
ನೂರಾರು
ಕಾರ್ಯಕರ್ತರನ್ನು
ಪೊಲೀಸರು
ತಡೆದಿದ್ದರಿಂದ
ಆಕ್ರೋಶಗೊಂಡ
ಕಾರ್ಯಕರ್ತರು
ಪೊಲೀಸರ
ಜೊತೆ
ಮಾತಿನ
ಚಕಮಕಿ
ನಡೆಸಿದರು.
ಪರಿಸ್ಥಿತಿ
ನಿಯಂತ್ರಿಸಲು
ಪೊಲೀಸರು
25ಕ್ಕೂ
ಹೆಚ್ಚು
ಪ್ರತಿಭಟನಾಕಾರರನ್ನು
ಬಂಧಿಸಿದರು.
ಪ್ರತಿಭಟನಾನಿರತರನ್ನು
ಉದ್ದೇಶಿಸಿ
ಮಾತನಾಡಿದ
ಸಂಸದೆ
ಶೋಭಾ
ಕರಂದ್ಲಾಜೆ,
ಸಿದ್ದರಾಮಯ್ಯ
ನೇತೃತ್ವದ
ಕಾಂಗ್ರೆಸ್
ಸರ್ಕಾರ
ಅತ್ಯಾಚಾರಿಗಳಿಗೆ
ರಕ್ಷಣೆ
ನೀಡುತ್ತಿದೆ.
ತೀರ್ಥಹಳ್ಳಿಯಲ್ಲಿ
ಬಾಲಕಿ
ನಂದಿತಾ
ಮೇಲೆ
ನಡೆದ
ಅತ್ಯಾಚಾರ
ಪ್ರಕರಣವನ್ನು
ಮುಚ್ಚಿಹಾಕಲು
ಸರ್ಕಾರ
ಯತ್ನಿಸಿತ್ತಿದೆ
ಎಂದು
ಆರೋಪಿಸಿದರು.
ಸಿಐಡಿ
ತನಿಖೆಯಿಂದ
ನ್ಯಾಯ
ಸಿಗುವ
ವಿಶ್ವಾಸವಿಲ್ಲ.
ಆದ್ದರಿಂದ
ಪ್ರಕರಣವನ್ನು
ಸಿಬಿಐ
ತನಿಖೆಗೆ
ವಹಿಸಬೇಕೆಂದು
ಅವರು
ಒತ್ತಾಯಿಸಿದರು.
ಅತ್ಯಾಚಾರದ
ವಿರುದ್ಧ
ಹೋರಾಟವನ್ನು
ಹಕ್ಕಿತ್ತಲು
ರಾಜ್ಯ
ಸರ್ಕಾರ
ಷಡ್ಯಂತ್ರ
ರೂಪಿಸುತ್ತಿದೆ.
ಯಾವುದೇ
ಕಾರಣಕ್ಕೂ
ಹೋರಾಟವನ್ನು
ನಿಲ್ಲಿಸುವುದಿಲ್ಲ
ಎಂದು
ಅವರು
ಘೋಷಿಸಿದರು.