2,000 ಕೋಟಿ ರುಪಾಯಿ ಜಿಎಸ್ ಟಿ ವಂಚನೆ ಹಗರಣ ಬೆಂಗ್ಳೂರಲ್ಲಿ ಬಯಲು
ಬೆಂಗಳೂರು, ಸೆಪ್ಟೆಂಬರ್ 26: ಈ ವರೆಗೆ ದೇಶದಲ್ಲಿ ನಡೆದ ಅತಿ ದೊಡ್ಡ ಮಟ್ಟದ ಜಿಎಸ್ ಟಿ ವಂಚನೆ ಹಗರಣ ಯಾವುದು? ಇದೀಗ ಆ ಕುಖ್ಯಾತಿ ಕರ್ನಾಟಕಕ್ಕೆ ಸೇರಿದೆ. ಕರ್ನಾಟಕದ ವಾಣಿಜ್ಯ ತೆರಿಗೆ ಅಧಿಕಾರಿಗಳು ರು. 2,000 ಕೋಟಿ ರುಪಾಯಿಯ ಹಗರಣವನ್ನು ಬಯಲು ಮಾಡಿದ್ದಾರೆ. ಇದರಲ್ಲಿ ಹದಿನಾಲ್ಕು ಸಂಸ್ಥೆಗಳು ಪಾಲ್ಗೊಂಡಿವೆ ಎಂದು ಖಚಿತವಾಗಿದೆ.
ಆ ನಂತರದ ಬೆಳವಣಿಗೆಯಲ್ಲಿ ಹಲವೆಡೆ ದಾಳಿಗಳು ಮುಂದುವರಿದಿವೆ. ತೆರಿಗೆ ಅಧಿಕಾರಿಗಳಿಂದ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ವಂಚನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. 203 ಕೋಟಿ ರುಪಾಯಿ ಬೋಗಸ್ ಜಿಎಸ್ ಟಿ ಇನ್ ವಾಯ್ಸ್ ಗಳನ್ನು ನೂರಾರು ಮಂದಿ ಜಿಎಸ್ ಟಿ ಡೀಲರ್ ಗಳಿಗೆ ನೀಡಿದ ಆರೋಪ ಈ ಮೂವರ ಮೇಲಿದೆ.

ಟಿ ದಾಸರಹಳ್ಳಿ, ಚಿಕ್ಕ ಬಾಣಾವರ ಸೇರಿದಂತೆ ಉತ್ತರ ಬೆಂಗಳೂರಿನ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಲ್ಯಾಪ್ ಟಾಪ್, ಕಂಪ್ಯೂಟರ್, ಡೈರಿಗಳು ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ದಾಳಿಗಳನ್ನು ಮಂಗಳವಾರ ನಡೆಸಲಾಗಿದೆ.












Click it and Unblock the Notifications