Get Updates
Get notified of breaking news, exclusive insights, and must-see stories!

Bengaluru: 64 ಅಪಾಯಕಾರಿ 'ಬ್ಲ್ಯಾಕ್ ಸ್ಪಾಟ್‌'ಗಳ ಪಟ್ಟಿ ಬಿಡುಗಡೆ: ನಿಮ್ಮ ಏರಿಯಾ ಎಷ್ಟು ಡೇಂಜರ್ ? ಇಲ್ಲಿದೆ ವರದಿ

Bengaluru: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವಾಗ ನೀವು ಎಷ್ಟು ಜಾಗರೂಕರಾಗಿರಬೇಕು ಎಂಬ ಎಚ್ಚರಿಕೆಯ ಗಂಟೆಯನ್ನು ಟ್ರಾಫಿಕ್ ಪೊಲೀಸರು ಬಾರಿಸಿದ್ದಾರೆ. ನಗರದ ಸಂಚಾರ ಪೊಲೀಸ್ ಇಲಾಖೆಯು 2023 ರಿಂದ 2025ರ ಅವಧಿಯಲ್ಲಿ ನಡೆದ ಅಪಘಾತಗಳನ್ನು ವಿಶ್ಲೇಷಿಸಿ, ನಗರದ ಅತ್ಯಂತ ಅಪಾಯಕಾರಿ 64 'ಬ್ಲ್ಯಾಕ್ ಸ್ಪಾಟ್' (Black Spots) ಅಥವಾ ಸಾವಿನ ಸ್ಥಳಗಳನ್ನು ಪಟ್ಟಿ ಮಾಡಿದೆ. ಈ ವರದಿಯ ಪ್ರಕಾರ, ಪೂರ್ವ ಬೆಂಗಳೂರು ನಗರದ ಅತ್ಯಂತ ಅಪಾಯಕಾರಿ ವಲಯವಾಗಿ ಹೊರಹೊಮ್ಮಿದೆ.

ಏನಿದು ಬ್ಲ್ಯಾಕ್ ಸ್ಪಾಟ್ ?

ಸಂಚಾರ ಪೊಲೀಸರ ವ್ಯಾಖ್ಯಾನದ ಪ್ರಕಾರ, ಯಾವುದಾದರೂ ಒಂದು ರಸ್ತೆಯ 500 ಮೀಟರ್ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದರೆ ಅದನ್ನು 'ಬ್ಲ್ಯಾಕ್ ಸ್ಪಾಟ್' ಎಂದು ಕರೆಯಲಾಗುತ್ತದೆ. ಅತಿ ವೇಗದ ಚಾಲನೆ ಮತ್ತು ರಸ್ತೆಗಳ ಅವೈಜ್ಞಾನಿಕ ವಿನ್ಯಾಸ ಅಥವಾ ಎಂಜಿನಿಯರಿಂಗ್ ಲೋಪದೋಷಗಳೇ ಇಷ್ಟು ಸಾವುಗಳಿಗೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ.

Bengaluru

ಪೂರ್ವ ಬೆಂಗಳೂರು ಅತ್ಯಂತ ಅಪಾಯಕಾರಿ

ವರದಿಯ ಪ್ರಕಾರ, ಬಾಣಸವಾಡಿ, ಕೆ.ಆರ್. ಪುರ ಮತ್ತು ಎಚ್‌ಎಎಲ್ (HAL) ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಅತಿ ಹೆಚ್ಚು ಅಪಘಾತ ಸ್ಥಳಗಳಿವೆ. ಬಾಣಸವಾಡಿ ಮತ್ತು ಕೆ.ಆರ್. ಪುರ ಠಾಣಾ ವ್ಯಾಪ್ತಿಯಲ್ಲಿ ತಲಾ ನಾಲ್ಕು ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಹಳೆ ಮದ್ರಾಸ್ ರಸ್ತೆ ಮತ್ತು ಹೊರ ವರ್ತುಲ ರಸ್ತೆಗಳಲ್ಲಿ (Outer Ring Road) ಅತಿ ವೇಗವಾಗಿ ವಾಹನ ಚಲಾಯಿಸುವುದು ಇಲ್ಲಿನ ದೊಡ್ಡ ಸಮಸ್ಯೆಯಾಗಿದೆ.

ನಗರದ 64 ಪ್ರಮುಖ ಬ್ಲ್ಯಾಕ್ ಸ್ಪಾಟ್‌ಗಳು ಪಟ್ಟಿ ಇಲ್ಲಿದೆ

1.ಬಾಣಸವಾಡಿ: ಹೊರ ವರ್ತುಲ ರಸ್ತೆ (ಕ್ರೋಮಾ ಶೋ ರೂಂ ಹತ್ತಿರ), ಬಾಬುಸಾಬ್‌ ಪಾಳ್ಯ ಬಸ್ ನಿಲ್ದಾಣ, ಎಎಸ್‌ಆರ್ ಕಲ್ಯಾಣ ಮಂಟಪದ ಬಳಿ.

2.ಕೆ.ಆರ್. ಪುರ: ಭಟ್ಟರಹಳ್ಳಿ ಜಂಕ್ಷನ್‌ನಿಂದ ಮೇಡಹಳ್ಳಿ ಸೇತುವೆ, ಆವಲಹಳ್ಳಿ ಟೊಯೋಟಾ ಶೋ ರೂಂ ಮುಂಭಾಗ, ಕಾಟಂನಲ್ಲೂರು ಕ್ರಾಸ್.

3.ಎಲೆಕ್ಟ್ರಾನಿಕ್ ಸಿಟಿ: ಕೋನಪ್ಪನ ಅಗ್ರಹಾರ, ವೀರಸಂದ್ರ ಜಂಕ್ಷನ್, ಈಸಿ-1 ಜಂಕ್ಷನ್.

4.ಯಲಹಂಕ: ಬಳ್ಳಾರಿ ರಸ್ತೆಯ ಕೆಫೆ ಕಾಫಿ ಡೇ ಹತ್ತಿರ, ಪಾಲನಹಳ್ಳಿ ಗೇಟ್, ಐಎಎಫ್ (IAF).

5.ಹೆಚ್‌ಎಎಲ್: ಕಾರ್ತಿಕ್ ನಗರ ಕಲಾಮಂದಿರ, ಜೆಪಿ ಮಾರ್ಗನ್‌ನಿಂದ ನ್ಯೂ ಹೊರೈಜನ್ ಕಾಲೇಜ್ ರಸ್ತೆ.

6.ಕೆಂಗೇರಿ: ಮಧು ಪೆಟ್ರೋಲ್ ಬಂಕ್ ಜಂಕ್ಷನ್, ದೊಡ್ಡಬೆಲೆ ಜಂಕ್ಷನ್, ನೈಸ್ ರಸ್ತೆ ಸೇತುವೆ ಪ್ರದೇಶಗಳು.

2025ರಲ್ಲಿ ಹೊಸದಾಗಿ ಸೇರಿದ 6 ತಾಣಗಳು

ಅಪಘಾತಗಳ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ 2025ರ ಅವಧಿಗೆ ಹೊಸದಾಗಿ ಆರು ಸ್ಥಳಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ.

1.ಕೆ.ಆರ್. ಪುರ ವ್ಯಾಪ್ತಿಯ ಆವಲಹಳ್ಳಿಯ ಟೊಯೋಟಾ ಶೋ ರೂಂ ಮುಂಭಾಗ.

2.ಕೆ.ಆರ್. ಪುರದ ಕಾಟಂನಲ್ಲೂರು ಕ್ರಾಸ್.

3.ಮಡಿವಾಳ ವ್ಯಾಪ್ತಿಯ ಹೊಂಗಸಂದ್ರ ಮೆಟ್ರೋ ನಿಲ್ದಾಣದ ರಸ್ತೆ.

4.ಹುಳಿಮಾವು ವ್ಯಾಪ್ತಿಯ ಟಿ. ಜಾನ್ ಕಾಲೇಜ್ ಹತ್ತಿರದ ನೈಸ್ ರಸ್ತೆ.

5.ಹೊಸೂರು ರಸ್ತೆಯ ಚಿಕ್ಕ ಬೇಗೂರು ಗೇಟ್.

6.ಜೆ.ಬಿ. ನಗರ ವ್ಯಾಪ್ತಿಯ ಮುರುಗೇಶಪಾಳ್ಯದ ಎಸ್‌ಎನ್‌ಎಸ್ ಅಪಾರ್ಟ್‌ಮೆಂಟ್ ಬಳಿಯ ಹಳೆ ಏರ್‌ಪೋರ್ಟ್ ರಸ್ತೆ.

ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವೇನು?

ಟ್ರಾಫಿಕ್ ಪೊಲೀಸರ ವಿಶ್ಲೇಷಣೆಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಹೊರ ವರ್ತುಲ ರಸ್ತೆಗಳಲ್ಲಿ ವಾಹನಗಳ ವೇಗ ಅತಿ ಹೆಚ್ಚಾಗಿರುತ್ತದೆ. ಆದರೆ, ರಸ್ತೆ ದಾಟಲು ಪಾದಚಾರಿಗಳಿಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು, ರಸ್ತೆ ತಿರುವುಗಳಲ್ಲಿ ಎಂಜಿನಿಯರಿಂಗ್ ದೋಷ ಮತ್ತು ಅವೈಜ್ಞಾನಿಕವಾಗಿ ನಿರ್ಮಿಸಲಾದ ಸ್ಕೈವಾಕ್‌ಗಳು ಅಪಘಾತಗಳಿಗೆ ಪ್ರಚೋದನೆ ನೀಡುತ್ತಿವೆ. ವಿಶೇಷವಾಗಿ ಪೀಣ್ಯ, ತುಮಕೂರು ರಸ್ತೆ ಮತ್ತು ಬಳ್ಳಾರಿ ರಸ್ತೆಗಳಲ್ಲಿ ಅತಿ ಹೆಚ್ಚು ಪಾದಚಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಪೊಲೀಸ್ ಇಲಾಖೆಯ ಕ್ರಮವೇನು?

ಈ 64 ಸ್ಥಳಗಳಲ್ಲಿ ಅಪಘಾತಗಳನ್ನು ತಡೆಯಲು ಜಿಬಿಎ ಮತ್ತು ಎನ್‌ಹೆಚ್‌ಎಐ (NHAI) ಜೊತೆ ಸೇರಿ ಪೊಲೀಸರು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ರಸ್ತೆ ವಿಭಜಕಗಳ ಎತ್ತರ ಹೆಚ್ಚಿಸುವುದು, ಹೆಚ್ಚಿನ ಬೀದಿ ದೀಪಗಳ ಅಳವಡಿಕೆ, ರಸ್ತೆ ಸೂಚನೆ ಫಲಕಗಳ ಅಳವಡಿಕೆ ಮತ್ತು ರಸ್ತೆ ಉಬ್ಬುಗಳ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ.

ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಅಪಘಾತ ವಲಯಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಈ 'ಬ್ಲ್ಯಾಕ್ ಸ್ಪಾಟ್'ಗಳಲ್ಲಿ ಚಲಿಸುವಾಗ ಸವಾರರು ಅತಿ ವೇಗಕ್ಕೆ ಕಡಿವಾಣ ಹಾಕಬೇಕು ಎಂದು ಪೊಲೀಸ್ ಇಲಾಖೆ ವಿನಂತಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+