Bengaluru Weather: ಕಡಿಮೆ ಆಯ್ತು ಬೆಂಗಳೂರಿನ ಚಳಿ, ಹೊಸ ವರ್ಷಾಚರಣೆಗೆ ಇಲ್ಲ ಅಡೆತಡೆ
ಉದ್ಯಾನ ನಗರಿ ಬೆಂಗಳೂರು ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ಡಿಸೆಂಬರ್ ತಿಂಗಳಿಡೀ ತೀವ್ರ ಚಳಿ, ಮಂಜಿನೊಂದಿಗೆ ನಗರವು ಕೂಲ್ ಸಿಟಿಯಾಗಿತ್ತು. ಕ್ರಿಸ್ಮಸ್ ವೇಳೆಯೂ ಚಳಿಗೆ ಜನರ ಮೈನಡುಗಿತ್ತು. ಹೊಸ ವರ್ಷದ ವೇಳೆಯೂ ಇದೇ ರೀತಿ ಚಳಿ ಇದ್ದರೆ ಸಂಭ್ರಮಾಚರಣೆ ಮಾಡೋದು ಹೇಗಪ್ಪಾ? ಎಂಬ ಚಿಂತೆ ಎಲ್ಲರ ತಲೆಯಲ್ಲಿತ್ತು. ಆದರೆ ವರ್ಷದ ಕೊನೆಯ ದಿನದ ವೇಳೆಗೆ ಬೆಂಗಳೂರಿನಾದ್ಯಂತ ಚಳಿ ತಗ್ಗಿದ್ದು, ಗರಿಷ್ಠ ತಾಪಮಾನದಲ್ಲಿ ತುಸು ಏರಿಕೆ ಕಂಡುಬಂದಿದೆ.
ಬೆಂಗಳೂರಿನಲ್ಲಿ ಮಂಗಳವಾರದಿಂದಲೂ ಚಳಿಯ ಪ್ರಮಾಣ ತುಸು ಕಡಿಮೆಯಾಗಿದೆ. ಅಲ್ಪ ಮಟ್ಟಿಗೆ ಮಂಜು ಕವಿದ ವಾತಾವರಣ ಮಾತ್ರ ಮುಂದುವರಿದಿದ್ದು, ಇಂದು ಮತ್ತು ನಾಳೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಕವಿದಿರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತಾಪಮಾನದಲ್ಲಿ ಏರಿಕೆ
ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯ್ ಇರಲಿದೆ. ಕಳೆದ ವಾರಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಕಳೆದ 3 ದಿನಗಳವರೆಗೆ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಾಗಿಲ್ಲ, ನಂತರದ ದಿನಗಳಲ್ಲಿ ರಾಜ್ಯದಾದ್ಯಂತ ಇಳಿಯುವ ಪ್ರವೃತ್ತಿ ಇದೆ. ಹೀಗಾಗಿ ಚಳಿಯ ಪ್ರಮಾಣ ಕ್ರಮೇಣ ಕಡಿಮೆಯಾಗಲಿದೆ.
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದ್ದ ಚಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದು ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಮನೆಯಿಂದ ಹೊರಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ಸುಕರಾಗಿರುವ ಜನರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಹವಾಮಾನ ಸುಧಾರಣೆ ಜನರ ಮನಸ್ಥಿತಿಯ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಚಳಿ ಜಾಸ್ತಿ ಇದ್ದಾಗ ರಾತ್ರಿ ಸಮಯದಲ್ಲಿ ಹೊರಗೆ ಹೋಗಲು ಹಿಂಜರಿಯುವವರು ಹೆಚ್ಚು. ಆದರೆ ಈಗ ಚಳಿ ಕಡಿಮೆಯಾಗಿರುವುದರಿಂದ ಕುಟುಂಬ ಸಮೇತ, ಸ್ನೇಹಿತರ ಜೊತೆ ಪಾರ್ಟಿಗಳು, ಸಂಗೀತ ಕಾರ್ಯಕ್ರಮಗಳು, ಓಪನ್ ಏರ್ ಈವೆಂಟ್ಗಳಲ್ಲಿ ನಿರಾಳವಾಗಿ ಭಾಗವಹಿಸಬಹುದು.
ಸಂಭ್ರಮಾಚರಣೆಗೆ ನಿಶ್ಚಿಂತೆ
ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಚಳಿಯಿಂದ ಉಸಿರಾಟದ ಸಮಸ್ಯೆ, ನೆಗಡಿ-ಜ್ವರದಂತಹ ತೊಂದರೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಚಳಿ ತಗ್ಗಿರುವುದರಿಂದ ವಯೋವೃದ್ಧರು, ಮಕ್ಕಳು ಹಾಗೂ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವವರು ಕೂಡ ಹೊಸ ವರ್ಷದ ಸಂಭ್ರಮದಲ್ಲಿ ಭಾಗವಹಿಸಲು ಧೈರ್ಯ ಮಾಡುತ್ತಾರೆ. ಇನ್ನು ರಾತ್ರಿ ಸಂಚಾರ ಹಾಗೂ ವೀಕ್ಷಣೆಗೂ ಅನುಕೂಲವಾಗಲಿದೆ. ಚಳಿ ಕಡಿಮೆಯಾದಾಗ ರಸ್ತೆಗಳ ಮೇಲೆ ಮಂಜು ಅಥವಾ ತಣ್ಣನೆಯ ಗಾಳಿ ಕಡಿಮೆ ಇರುತ್ತದೆ. ಇದರಿಂದ ನೈಟ್ ಡ್ರೈವ್, ನಗರ ವೀಕ್ಷಣೆ, ಪಬ್-ರೆಸ್ಟೋರೆಂಟ್ಗಳ ಭೇಟಿ ಹೆಚ್ಚು ಸುರಕ್ಷಿತ ಹಾಗೂ ಸುಖಕರವಾಗುತ್ತದೆ.
ಹೆಚ್ಚು ಚಳಿ ಇದ್ದರೆ ಸ್ವೆಟರ್, ಜಾಕೆಟ್ ಧರಿಸಬೇಕಾಗುತ್ತದೆ. ಆದರೆ ಈಗ ತಂಪು ಹವಾಮಾನ ಇರುವುದರಿಂದ ಲೈಟ್ ಜಾಕೆಟ್ ಅಥವಾ ಸಾಮಾನ್ಯ ಉಡುಪಲ್ಲೇ ಹೊಸ ವರ್ಷದ ಸಂಭ್ರಮಕ್ಕೆ ತೆರಳಬಹುದು. ಇದರಿಂದ ಫೋಟೋ ಕ್ಲಿಕ್ಕಿಸುವುದು, ನೃತ್ಯ ಮಾಡುವುದು ಕೂಡ ಸುಲಭವಾಗುತ್ತದೆ. ಬೆಂಗಳೂರಿನಲ್ಲಿ ಚಳಿ ಕಡಿಮೆಯಾಗಿರುವುದು ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಹೊರಡುವವರಿಗೆ ಹವಾಮಾನ, ಆರೋಗ್ಯ, ಸಂಚಾರ ಮತ್ತು ಮನರಂಜನೆ ಎಲ್ಲದರಲ್ಲಿಯೂ ಅನುಕೂಲಕರವಾಗಿದೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ












Click it and Unblock the Notifications