Bengaluru Water Crisis: ಅಂತರ್ಜಲ ಕೊರತೆಯಿಂದ ಬಿಕ್ಕಟ್ಟು, ಜುಲೈವರೆಗೆ ಬೆಂಗಳೂರಿಗೆ ಕಾವೇರಿ ನೀರು ಸಿಗಲಿದೆ!
ಬೆಂಗಳೂರು, ಮಾರ್ಚ್ 10: ರಾಜ್ಯದಲ್ಲಿನ ಬರದ ಪರಿಣಾಮ ತೀವ್ರವಾಗಿ ಬೀಳುತ್ತಿರುವುದು ಬೆಂಗಳೂರಿನ ಮೇಲೆ ಎಂದರೆ ಅದು ಅತಿಶಿಯೋಕ್ತಿಯಲ್ಲ. ರಾಜಧಾನಿಯ ನೀರಿನ ಬಿಕ್ಕಟ್ಟಿನ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ ವಿ ರಾಮ್ ಪ್ರಸಾತ್ ಮನೋಹರ್ ಮಾತನಾಡಿದ್ದಾರೆ.
ಬೆಂಗಳೂರಿನ ಜನತೆಗೆ ಹಾಗೂ ಜಾಗತಿಕ ನಾಗರಿಕರಿಗೆ ಬೆಂಗಳೂರಿನ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದ ಅವರು, ನಗರದಲ್ಲಿ 1 ಕೋಟಿ 40 ಲಕ್ಷ ಜನಸಂಖ್ಯೆಯಿದ್ದು, ಪ್ರತಿ ವ್ಯಕ್ತಿಗೆ ದಿನಕ್ಕೆ 150 ಲೀಟರ್ ನೀರು ಬೇಕಾಗುತ್ತದೆ. ಇದಕ್ಕೆ ಬೇಕಾಗುವ ಒಟ್ಟು ಪ್ರಮಾಣ ಬೆಂಗಳೂರು 200000 ಎಂಎಲ್ಡಿ (ದಿನಕ್ಕೆ ಮಿಲಿಯನ್ ಲೀಟರ್) ಎಂದು ಹೇಳಿದ್ದಾರೆ.

'ಕಾವೇರಿಯಿಂದ ಇದೀಗ 10450 ಎಂಎಲ್ಡಿ ನೀರು ಪಡೆಯಲಾಗುತ್ತಿದೆ, ಪ್ರಸ್ತುತ ಜಲಾಶಯವು 34 ಸಾವಿರ ಮಿಲಿಯನ್ ಘನ ಅಡಿ (ಟಿಎಂಸಿ) ನೀರನ್ನು ಒದಗಿಸುತ್ತದೆ. ಮುಂದಿನ ಐದು ತಿಂಗಳಿಗೆ ಬೆಂಗಳೂರಿಗೆ ಬೇಕಾಗಿರುವುದು ಎಂಟು ಟಿಎಂಸಿ ನೀರು ಮಾತ್ರ. ಜುಲೈವರೆಗೆ ಕಾವೇರಿ ನೀರು ಸಾಕಾಗುತ್ತದೆ. ಅಂತರ್ಜಲ ಕೊರತೆಯಿಂದ ಬಿಕ್ಕಟ್ಟು ಉಂಟಾಗಿದೆ' ಎಂದು ರಾಮ್ ಪ್ರಸಾತ್ ಮನೋಹರ್ ಸ್ಪಷ್ಟಪಡಿಸಿದ್ದಾರೆ.
"ಕಡಿಮೆ ಮಳೆ ಮತ್ತು ಬರಗಾಲದಂತಹ ಪರಿಸ್ಥಿತಿಗಳಿಂದಾಗಿ, ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ನೀರಿನ ಕೊರತೆಯಿದೆ. ಇದು ನೈಸರ್ಗಿಕ ವಿಕೋಪವಾಗಿದೆ. ಮಾನವ ನಿರ್ಮಿತವಲ್ಲ. ಬೆಂಗಳೂರಿನ ಬ್ರ್ಯಾಂಡ್ ಇಮೇಜ್ ಅಥವಾ ಬಿಡಬ್ಲೂಎಸ್ಎಸ್ಬಿಗೂ ಏನೂ ಸಂಬಂಧವಿಲ್ಲ" ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ತಿಳಿಸಿದ್ದಾರೆ.

ಅಂತರ್ಜಲ ಮರುಪೂರಣಕ್ಕೆ ಮಂಡಳಿ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನೂ ವಿವರಿಸಿರುವ ಅವರು, ಬೋರ್ವೆಲ್ನಿಂದ ಬರುವ ನೀರು ಕಡಿಮೆಯಾದರೂ ಕೊರತೆ ನೀಗಿಸಬಹುದು. ತೊಟ್ಟಿಗಳಲ್ಲಿ ಉತ್ತಮ ನೀರು ತುಂಬಿಸಬೇಕು ಇದರಿಂದ ಅಂತರ್ಜಲ ಮರುಪೂರಣವಾಗುತ್ತದೆ. ಸಂಸ್ಕರಿಸಿದ ದೇಶೀಯ ನೀರನ್ನು ಟ್ಯಾಂಕ್ಗಳನ್ನು ತುಂಬಲು ಸಹ ಬಳಸಬಹುದು ಎಂದಿದ್ದಾರೆ.
ಅಂತರ್ಜಲ ಹದಗೆಟ್ಟ ಕಾರಣ ಕೊಳವೆಬಾವಿ ಕೊರೆಸಿದ ಕೊಳವೆಬಾವಿಯಿಂದ ನೀರು ಪಡೆಯುತ್ತಿರುವುದರಿಂದ ಬೆಂಗಳೂರು ನಗರದ ಕೆಲವು ಬಡಾವಣೆಗಳು ಮತ್ತು ಅಪಾರ್ಟ್ಮೆಂಟ್ಗಳು ನೀರಿನ ಕೊರತೆಯನ್ನು ಅನುಭವಿಸುತ್ತಿವೆ. ಕಾವೇರಿಯಿಂದ ಪೂರೈಕೆ ಮತ್ತು ನೀರಿನ ಕೊರತೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಆದರೂ, ನಾನು ಅಲ್ಲಿ ವಾಸಿಸುವ ಸಮುದಾಯದ ಕಷ್ಟಗಳನ್ನು ಅರ್ಥಮಾಡಿಕೊಳ್ಳುತ್ತೇನೆ. ಕಾವೇರಿ 5 ನೇ ಹಂತದ ನೀರು ಮೇ 15 ರೊಳಗೆ ಈ ಅಪಾರ್ಟ್ಮೆಂಟ್ಗಳಿಗೆ ತಲುಪುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಅಲ್ಲಿಯವರೆಗೆ ಜನರು ಸಂಸ್ಕರಿಸಿದ ನೀರನ್ನು ಬಳಸಬೇಕೆಂದು ನಾನು ವಿನಂತಿಸುತ್ತೇನೆ" ಎಂದು ಮನವಿ ಮಾಡಿದ್ದಾರೆ.












Click it and Unblock the Notifications