ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್
ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಪ್ರದೇಶವಾದ ಗಾಂಧಿಬಜಾರ್ನ ಡಿವಿಜಿ ರಸ್ತೆಯಲ್ಲಿ ದೆಹಲಿ ಮೂಲದ ಬೈಕ್ ಸವಾರನೊಬ್ಬ ತನ್ನ ಉದ್ಧಟತನದಿಂದ ಭಾರಿ ಸಂಚಾರಿ ದಟ್ಟಣೆ ಉಂಟುಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ವೇಳೆ ಮಧ್ಯಪ್ರವೇಶಿಸಿ ಪ್ರಶ್ನೆ ಮಾಡಿದ ಕನ್ನಡಿಗರ ಮೇಲೂ ಹಿಂದಿ ಯುವಕ ಅವಾಜ್ ಹಾಕಿದ್ದಾನೆ. ಟ್ರಾಫಿಕ್ ಪೊಲೀಸರ ಮೇಲೂ ಕೂಗಾಡಿರುವ ಘಟನೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.
ವೈರಲ್ ವಿಡಿಯೋದಲ್ಲಿ ಇಕ್ಕಟ್ಟಾದ ಮತ್ತು ಜನದಟ್ಟಣೆಯ ಡಿವಿಜಿ ರಸ್ತೆಯಲ್ಲಿ ಈ ಮಹಾಶಯ ತನ್ನ ಬೈಕ್ ಅನ್ನು ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಿದ್ದರಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾರ್ವಜನಿಕರು ಇದನ್ನು ಪ್ರಶ್ನಿಸಿದಾಗ, ಆತ ಕನಿಷ್ಠ ಕ್ಷಮೆ ಕೇಳುವ ಬದಲು, "ಈ ರಸ್ತೆ ನಿಮ್ಮಪ್ಪಂದಾ?" ಎಂದು ಅಹಂಕಾರದಿಂದ ಪ್ರಶ್ನಿಸಿದ್ದಾನೆ.

ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ವಾಹನ ತೆರವುಗೊಳಿಸಲು ಸೂಚಿಸಿದಾಗ, ಅವರ ಮೇಲೂ ಆತ ಕಿರುಚಾಡುತ್ತಾ ಏಕವಚನದಲ್ಲಿ ಮಾತನಾಡಿರುವುದು ಅಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ನೆಲದಲ್ಲಿ ಬಂದು, ನಮ್ಮವರಿಗೇ ಟ್ರಾಫಿಕ್ ಕಿರಿಕಿರಿ ಉಂಟುಮಾಡಿ, ಮತ್ತೆ ನಮ್ಮನ್ನೇ ಪ್ರಶ್ನಿಸುವ ಇಂತಹ ಕಿಡಿಗೇಡಿಗಳ ಅಹಂಕಾರಕ್ಕೆ ಕಡಿವಾಣ ಬೀಳಲೇಬೇಕು ಎಂದು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡುತ್ತಿದ್ದಾರೆ.
ಇದು ಡೆಲ್ಲಿ ಅಲ್ಲ: ಕನ್ನಡಿಗರ ಎಚ್ಚರಿಕೆ
ನಮ್ಮ ಬೆಂಗಳೂರಿನ ರಸ್ತೆಗಳಲ್ಲಿ ಅಕ್ರಮವಾಗಿ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಕೊಡುವುದಲ್ಲದೆ, ಪ್ರಶ್ನಿಸಿದ ಕನ್ನಡಿಗರು ಮತ್ತು ಪೊಲೀಸರ ವಿರುದ್ಧವೇ ದರ್ಪ ತೋರಿದ್ದಾನೆ. ಪೊಲೀಸರು ಆತನ ಭಾಷೆಯಾದ ಹಿಂದಿಯಲ್ಲೇ ಮಾತನಾಡಿ ಬುದ್ಧಿವಾದ ಹೇಳಲು ಹೋದರೂ, ಆತ ಅವರ ಮೇಲೆಯೇ ಕೂಗಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ರಕ್ಷಣೆ ನೀಡಬೇಕಾದ ಪೊಲೀಸರಿಗೇ ಗೌರವ ಕೊಡದ ಈತನ ಮದ ಎಷ್ಟಿರಬಹುದು ಎಂಬುದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
Witnessed a north indian guy with a DL registered bike park illegally and created a massive traffic jam on DVG road.
— DK (@captionthistoo) April 13, 2026
Upon questioning, he asks if the road belongs to your father.
He even went on to be rude towards traffic policemen.@blrcitytraffic @3rdEyeDude @karavekendra pic.twitter.com/chHw9vcgou
ಪ್ರಶ್ನಿಸಿದ ಕನ್ನಡಿಗರಿಗೆ "ಜಾಬ್ಲೆಸ್" ಪಟ್ಟ
ಟ್ರಾಫಿಕ್ ಜಾಮ್ನಿಂದ ಹೈರಾಣಾಗಿ ಪ್ರಶ್ನೆ ಮಾಡಲು ಬಂದ ಕನ್ನಡಿಗರನ್ನು ಕಂಡ ಈತ, "ಹೋಗಿ ನಿನ್ನ ಕೆಲಸ ನೋಡ್ಕೋ, ನೀವೆಲ್ಲಾ ಜಾಬ್ಲೆಸ್ (ಕೆಲಸವಿಲ್ಲದವರು)" ಎಂದು ಹೀಯಾಳಿಸಿದ್ದಾನೆ. ನಮ್ಮೂರಲ್ಲೇ ಬಂದು ನಮಗೇ ಕೆಲಸವಿಲ್ಲ ಎಂದು ನಿಂದಿಸಿದ್ದಾನೆ. ಪೊಲೀಸರ ಜೊತೆ ವಾಗ್ವಾದ ಮಾಡಬೇಡ ಎಂದು ಬುದ್ಧಿ ಹೇಳಿದರೂ, "ವಿಡಿಯೋ ಮಾಡ್ತೀಯಾ? ಮಾಡ್ಕೋ" ಎಂದು ಕ್ಯಾಮೆರಾ ಮುಂದೆಯೇ ಧಮ್ಕಿ ಹಾಕಿದ್ದಾನೆ.
ಬೆಂಗಳೂರನ್ನು ಅತಿಥಿ ಸತ್ಕಾರದ ಊರು ಎಂದು ಭಾವಿಸಿ ಇಲ್ಲಿಗೆ ಬರುವವರು, ನಮ್ಮ ಮೌನವನ್ನೇ ದೌರ್ಬಲ್ಯ ಎಂದು ಭಾವಿಸಿದಂತಿದೆ. ಇದು ಡೆಲ್ಲಿ ಅಲ್ಲ, ಇಲ್ಲಿ ನಿಮ್ಮ ದರ್ಪ ನಡೆಯಲ್ಲ ಎಂದು ಸ್ಥಳೀಯರು ಆತನಿಗೆ ಸರಿಯಾದ ಭಾಷೆಯಲ್ಲೇ ಎಚ್ಚರಿಕೆ ಕೊಟ್ಟಿದ್ದಾರೆ. ಕಾನೂನು ಪಾಲಿಸುವುದು ಬಿಟ್ಟು, ಸಾರ್ವಜನಿಕರನ್ನು ನಿಂದಿಸುವ ಇಂತಹ ಪ್ರವೃತ್ತಿಯವರಿಗೆ ಪೊಲೀಸರು ಕಠಿಣ ದಂಡದ ಜೊತೆಗೆ ಜೈಲು ಶಿಕ್ಷೆಯನ್ನೂ ನೀಡಬೇಕು ಎಂಬ ಒತ್ತಾಯ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿದೆ.
-
Cabinet Reshuffle: ಶಾಸಕರ ದೆಹಲಿಗೆ ಭೇಟಿ ತಪ್ಪಿಲ್ಲ, ಸಂಪುಟ ಪುನರ್ರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಿದ್ದರಾಮಯ್ಯ -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
ಬೆಂಗಳೂರಿನಲ್ಲಿ ಒಂದು ದಿನದ ಖರ್ಚಿಗೆ ಕೇವಲ 300 ರೂಪಾಯಿ ಇದ್ರೆ ಸಾಕು: ಉಳಿತಾಯದ ಪಾಠ ಹೇಳಿಕೊಟ್ಟ ಯುವತಿ -
Yuzvendra Chahal: ಯುಜ್ವೇಂದ್ರ ಚಹಾಲ್ 'ಕ್ಯೂಟ್' ಕಾಮೆಂಟ್, ತಾನಿಯಾ ಚಟರ್ಜಿ ವಿಡಿಯೋ ವೈರಲ್ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ












Click it and Unblock the Notifications