Get Updates
Get notified of breaking news, exclusive insights, and must-see stories!

Bengaluru Kambala: ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ: ಮುಹೂರ್ತ ನಿಗದಿ

ಇದೇ ಮೊದಲ ಬಾರಿಗೆ ಕರ್ನಾಟಕ ಕರಾವಳಿ ಸಂಸ್ಕೃತಿಯ ಭಾಗವಾಗಿರುವ ಕಂಬಳ ಬೆಂಗಳೂರಿನಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದ್ದು ನವೆಂಬರ್ 25 ಮತ್ತು 26ರಂದು ಕಂಬಳ ನಡೆಯಲಿದೆ.

ಪುತ್ತೂರು ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿಯ ಸಂಚಾಲಕ ಅಶೋಕ್ ಕುಮಾರ್ ರೈ ಈ ಬಗ್ಗೆ ಮಾಹಿತಿ ನೀಡಿದ್ದು, ನವೆಂಬರ್ 25 ಮತ್ತು 26 ರಂದು ಅರಮನೆ ಮೈದಾನದಲ್ಲಿ ಅಹೋರಾತ್ರಿ ಕಂಬಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

Bengaluru to Host First Day and Night Kambala Event on November 25-26

ಮಂಗಳೂರಿನಲ್ಲಿ ಕಂಬಳ ಎಮ್ಮೆ ಮಾಲೀಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ರೈ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಟ ರಜನಿಕಾಂತ್, ಐಶ್ವರ್ಯ ರೈ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

7-8 ಲಕ್ಷ ಆಗಮಿಸುವ ನಿರೀಕ್ಷೆ

ಬೆಂಗಳೂರಿನಲ್ಲಿ ನಡೆಯುವ ಕಂಬಳ ಕಾರ್ಯಕ್ರಮದಲ್ಲಿ 7 ರಿಂದ 8 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಇತರ ಜಿಲ್ಲೆಗಳಿಂದ ಸುಮಾರು 130 ಜೋಡಿ ಎಮ್ಮೆಗಳು ಭಾಗವಹಿಸಲಿವೆ. ಅರಮನೆ ಮೈದಾನದಲ್ಲಿ 125 ಸ್ಟಾಲ್‌ಗಳನ್ನು ಹಾಕಲಿದ್ದು ಕರಾವಳಿ ಭಾಗದ ವಿವಿಧ ಖಾದ್ಯಗಳನ್ನು ಮಾರಾಟ ಮಾಡಲಾಗುವುದು ಎಂದು ಹೇಳಿದರು.

ನವೆಂಬರ್ 23 ರಂದು ಬೆಳಗ್ಗೆ 9 ಗಂಟೆಗೆ ಮಂಗಳೂರಿನಿಂದ ಬೆಂಗಳೂರಿಗೆ ಲಾರಿಗಳಲ್ಲಿ ಎಮ್ಮೆಗಳನ್ನು ಕೊಂಡೊಯ್ಯಲಾಗುವುದು, ಮಂಗಳೂರು ನಗರದಲ್ಲಿ ಬೃಹತ್ ರ್‍ಯಾಲಿ ಮೂಲಕ ಬೀಳ್ಕೊಡಲಾಗುವುದು, ಹಾಸನದಲ್ಲಿ ಎಮ್ಮೆಗಳಿಗೆ ವಿಶ್ರಾಂತಿ ವ್ಯವಸ್ಥೆ ಮಾಡಿದ್ದೇವೆ ಮತ್ತು ಪಶುವೈದ್ಯಕೀಯ ಆಂಬ್ಯುಲೆನ್ಸ್‌ಗಳು ಹಾಗೂ ಪಶುವೈದ್ಯರು ಕೂಡ ಜೊತೆಗಿರುತ್ತಾರೆ. ಬೆಂಗಳೂರು ತಲುಪಿದ ಮೇಲೆ ಎಮ್ಮೆಗಳಿಗೆ ಒಂದು ದಿನ ವಿಶ್ರಾಂತಿ ನೀಡಲಾಗುವುದು ಮತ್ತು ಪ್ರತ್ಯೇಕ ಟೆಂಟ್ ಮತ್ತು ನೀರಿನ ಸೌಲಭ್ಯವನ್ನು ಮಾಡಲಾಗಿದೆ ಎಂದರು.

ಕಂಬಳ ಎಮ್ಮೆ ಮಾಲೀಕರಿಗೆ ನಾವು 150 ಕೊಠಡಿಗಳನ್ನು ಕಾಯ್ದಿರಿಸಿದ್ದೇವೆ ಮತ್ತು ಎಮ್ಮೆಗಳಿಗೆ ಕುಡಿಯುವ ನೀರನ್ನು ದಕ್ಷಿಣ ಕನ್ನಡದಿಂದಲೇ ಸರಬರಾಜು ಮಾಡಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಟ್ರ್ಯಾಕ್ ನಿರ್ಮಿಸಲಾಗುವುದು ಎಂದು ಹೇಳಿದರು.

6 ಕೋಟಿ ರೂಪಾಯಿ ವೆಚ್ಚ

ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸದೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು. ನಮ್ಮ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಪಸರಿಸುವುದು ನಮ್ಮ ಗುರಿಯಾಗಿದೆ. ಕಾರ್ಯಕ್ರಮಕ್ಕೆ 6 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ, ನಾವು ಸರ್ಕಾರದ ಬೆಂಬಲವನ್ನು ಸಹ ಪಡೆಯುತ್ತೇವೆ ಎಂದರು.

ಕೆಲವು ವಿಐಪಿಗಳು ಮತ್ತು ಮಂತ್ರಿಗಳು ತಮ್ಮ ಹೆಸರಿನಲ್ಲಿ ರೇಸ್ ನಡೆಸಲು ಒತ್ತಾಯಿಸಿದರು ಆದರೆ ಕಂಬಳ ಎಮ್ಮೆ ಮಾಲೀಕರು ಅದಕ್ಕೆ ಒಪ್ಪಲಿಲ್ಲ. ಕನ್ನಡ ಮತ್ತು ತುಳುವಿನಲ್ಲಿ ಕಾಮೆಂಟರಿ ಇರುತ್ತದೆ ಮತ್ತು ಎಲ್ಲಾ ಎಮ್ಮೆಗಳು ಪದಕವನ್ನು ಪಡೆಯುತ್ತವೆ. ಪ್ರಥಮ ಬಹುಮಾನ 2 ಸವರಿನ್ ಚಿನ್ನ ಮತ್ತು ದ್ವಿತೀಯ ಬಹುಮಾನ ಒಂದು ಸವರಿನ್ ಚಿನ್ನ ಸಿಗಲಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ, ಉಡುಪಿ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಬೆಂಗಳೂರಿನಲ್ಲಿ ಕಂಬಳ ಕಾರ್ಯಕ್ರಮ ಆಯೋಜಿಸಲು ನಮ್ಮ ಸಂಪೂರ್ಣ ಬೆಂಬಲವಿದ್ದು, ಬೆಂಗಳೂರಿಗೆ ಎಮ್ಮೆಗಳನ್ನು ಕರೆದೊಯ್ಯುವಾಗ ಎಮ್ಮೆಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಎಮ್ಮೆ ಮಾಲೀಕರು ಹೇಳಿದ್ದಾರೆ. ಕಂಬಳ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಗಬೇಕಿದ್ದು, ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+