ಬೆಂಗಳೂರಿನ ಯಕ್ಷದಶಾಹಕ್ಕೆ ಹೋಗೋಣ ಬನ್ನಿ

ಬೆಂಗಳೂರು, ಆ. 05: ಬೆಂಗಳೂರಿನ ಸಿರಿಕಲಾಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಗರದಾತ್ಯಂದ 10 ದಿನ ಕಾಲ ವಿವಿಧ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿರ್ದೇಶನದಲ್ಲಿ ಪ್ರದರ್ಶನ ನಡೆಯಲಿದೆ.

ಕೊಳಗಿ ಕೇಶವ ಹೆಗಡೆಯವರ ಗಾಯನಸುಧೆಯನ್ನು ಕೇಳಬಹುದು. ಎಪಿ ಪಾಠಕ್ ಮೃದಂಗ ವಾದನದ ಇಂಪು ಕಿವಿತಣಿಸಲಿದೆ. ಇವರ ಜತೆಗೆ ನಾರಾಯಣ ಹೆಬ್ಬಾರ್, ಅಮೃತದೇವ ಕಟ್ಟಿನಕೆರೆ, ಶ್ರೀನಿವಾಸ್ ಪ್ರಭು, ಶ್ರೀಧರ್ ಭಟ್ ಕಾಸರಗೋಡು, ಪ್ರಶಾಂತ್ ವರ್ಧನ, ಮಂಜು ಹವ್ಯಕ, ಅಭಿಷೇಕ್ ಕುಂಬ್ಳೆ, ವಾಸುದೇವ್ ಪ್ರಭು ಸಹಕರಿಸಲಿದ್ದಾರೆ.[ಸುವರ್ಣ ಸುಯೋಧನನಿಗೆ ತಲೆದೂಗಿದ ಪ್ರಬುದ್ಧ ಪ್ರೇಕ್ಷಕ]

yakshagana

ಕಲಾವಿದರ ಸಂಯೋಜನೆಯನ್ನು ಸುರೇಶ್ ಹೆಗಡೆ ಕಡತೋಕ(9986509511) ನಿರ್ವಹಿಸಲಿದ್ದಾರೆ. ಎಲ್ಲ ಪ್ರದರ್ಶನಗಳಿಗೂ ಪ್ರವೇಶ ಉಚಿತ. ಸೌಮ್ಯ ಅರುಣ್, ಅರ್ಪಿತಾ ಹೆಗಡೆ, ಅಶ್ವಿನಿ ಕೊಂಡದಕುಳಿ, ಸೌಮ್ಯ ಪ್ರದೀಪ, ಕಿರಣ್ ಪೈ, ನೀಹಾರಿಕಾ ಭಟ್, ಮಾನಸಾ ಉಪಾಧ್ಯ, ಅಶ್ವಿನಿ ಹೆಗಡೆ, ಉಷಾ ಕೊಂಡದಕುಳಿ ಮುಂತಾದವರು ರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.[ನಿಜ ಯಕ್ಷ ಪ್ರೇಕ್ಷಕರ ತಲುಪಿದ 'ಪದ ಕೇಳ್ವಾ ಬನ್ನಿ']

ಸಿರಿಕಲಾ ಯಕ್ಷದಶಾಹ -2015
* ಆಗಸ್ಟ್ 23- ರಾಣಿ ಶಶಿಪ್ರಭ-ವರದಾಂಜನೇಯ ದೇವಸ್ಥಾನ, ಆರ್ ಬಿ ಐ ಲೇಔಟ್
* ಆಗಸ್ಟ್ 24- ಪಟ್ಟ್ಆಭಿಷೇಕ-ವಿಘ್ನೇಶ್ವರ ದೇವಸ್ಥಾನ, ಬಿಟಿಎಂ ಲೇಔಟ್
* ಆಗಸ್ಟ್ 25-ಚಕ್ರ ಚಂಡಿಕೆ- ಹೊಟೇಲ್ ಅನ್ನಕುಟೀರ, ಕತ್ರಿಗುಪ್ಪೆ
* ಆಗಸ್ಟ್ 26- ಪಾಂಚಜನ್ಯ-ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯ, ಮಹಾಲಕ್ಷ್ಮೀಪುರ
* ಆಗಸ್ಟ್ 27 -ಚಂದ್ರಹಾಸ ಚರಿತ್ರೆ, ರಾಮಾಶ್ರಮ, ಗಿರಿನಗರ
* ಆಗಸ್ಟ್ 28-ನರಕಾಸುರ ವಧೆ-ಹಂಪಿನಗರ ಗ್ರಂಥಾಗಣ
* ಆಗಸ್ಟ್ 29- ಜ್ವಾಲಾಪ್ರತಾಪ-ಉಲ್ಲಾಳ ಉಪನರ, ಕೆಂಗೇರಿ
* ಆಗಸ್ಟ್ 30- ಭೀಷ್ಮ ಪ್ರತಿಜ್ಞೆ- ಉದಯಭಾನು ಕಲಾಸಂಘ

(ಸಮಯ: ಎಲ್ಲ ಕಡೆ ಸಂಜೆ 5.30, ಗಿರಿನಗರದಲ್ಲಿ ಮಧ್ಯಾಹ್ನ 2 ಗಂಟೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+