Get Updates
Get notified of breaking news, exclusive insights, and must-see stories!

Viral Video: ಬೆಂಗಳೂರಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ: ವ್ಯಕ್ತಿ ಮೇಲೆ ಹಲ್ಲೆ, ದರೋಡೆ ಮಾಡಿ ಪರಾರಿ

Bengaluru Viral Video: ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಹಗಲು ರಾತ್ರಿ ಎನ್ನದೇ ದರೋಡೆ ಮಾಡುತ್ತಾರೆ. ಅಮಾಯಕರನ್ನು ಹೆದರಿಸಿ ಹಣ ಕೀಳುವ ಗುಂಪಿನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕೃತ್ಯ ಜನರಿಗೆ ಆಘಾತ ನೀಡಿದೆ. ದುಷ್ಕರ್ಮಿಗಳಿಗೆ ಕಾನೂನು, ಪೊಲೀಸರ ಭಯ ಇಲ್ಲದಂತೆ ವರ್ತಿಸಿದ್ದು ಕಾಣಿಸುತ್ತದೆ. ದರೋಡೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಂಸದ ಪಿಸಿ ಮೋಹನ್ ಅವರು ಕ್ರಮಕ್ಕೆ ಆಗ್ರಹಿಸಿದ್ದಾರೆ.

ನಗರದಲ್ಲಿ ದರೋಡೆ ಪ್ರಕರಣಗಳು ಸಾಮಾನ್ಯ ಎಂಬತಾಗಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಆಗಾಗ ಇಂತ ಪ್ರಕರಣಗಳು ನಿದರ್ಶನವಾಗುತ್ತಿವೆ. ಬೆಂಗಳೂರಿನ ಶಾಂತಿನಗರ ಗೂಂಡಾಗಳು ಅಟ್ಟಹಾಸ ಮೆರೆದಿದ್ದಾರೆ. ನಡುರಸ್ತೆಯಲ್ಲಿ ದರೋಡೆ ಮಾಡಿದ ಘಟನೆ ನಡೆದಿದೆ. ಶಾಂತಿ ನಗರದ ರಸ್ತೆ ಶಾಂತವಾಗಿದ್ದ ಸಮಯದಲ್ಲಿ ಅಮಾಯಕ ದರೋಡೆ ನಡೆದಿದೆ. ಬೆಳಗ್ಗೆ 4:30 ರ ಹೊತ್ತಿಗೆ ಬೈಕ್‌ನಲ್ಲಿ ಬಂದ್ ಮೂವರು ದರೋಡೆಕೋರರ ಗುಂಪು ಬೆದರಿಸಿ ನಗದು ಇತರ ವಸ್ತು ಕಸಿದು ಪರಾರಿಯಾಗಿದ್ದಾರೆ.

Bengaluru Shocking Video Viral Bike Gang Robs Scooter Rider in Shantinagar MP urges Action

ಈ ವಿಡಿಯೋ ಅನ್ನು ಸಂಸದ ಪಿಸಿ ಮೋಹನ್ ಅವರು ಹಂಚಿಕೊಂಡಿದ್ದಾರೆ. ಸರ್ಕಾರದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನಾಗರಿಕೊಬ್ಬರು ಬೆಳಗ್ಗೆ ಸ್ಕೂಟರ್‌ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳ ಗುಂಪು, ಸ್ಕಟೂರ್ ಪಕ್ಕ ಬಂದು ಗಾಡಿ ಆಫ್ ಮಾಡಿ ಕೀಲಿಯನ್ನು ತೆಗೆದುಕೊಂಡಿದ್ದಾರೆ. ಹಠಾತ್ ಈ ಘಟನೆ ನಡೆಯುತ್ತಿದ್ದಂತೆ ಸ್ಕೂಟರ್ ನಿಲ್ಲಿಸಲು ಪರದಾಡಿದ್ದಾರೆ. ಕಷ್ಟಪಟ್ಟು ನಿಲ್ಲುತ್ತಲೇ ಬೈಕ್ ನಿಲ್ಲಿಸಿ ಬಂದ ಇಬ್ಬರು ನಾಗರಿಕನ ಮೇಲೆ ಹಲ್ಲೆ ಮಾಡಿದ್ದಾರೆ. ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ. ಹಣ ನಗದು, ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ಬೆಂಗಳೂರಲ್ಲಿ ಭಯದ ವಾತವರಣ ಸೃಷ್ಟಿ

ಸ್ವಲ್ಪ ಹೆಚ್ಚು ಕಡಿಮೆ ಆದರೂ ಸಹಿತ ಅವರು ಸ್ಕೂಟರ್ ಸವಾರರ ಕಥೆ ಮುಗಿಯುತ್ತಿತ್ತು. ಇದೊಂದು ಸಂಘಟಿತ ದರೋಡೆ ಆಗಿದೆ. ಬಲಿಪಶು ವ್ಯಕ್ತಿ ಆಘಾತಗೊಂಡಿದ್ದಾರೆ. ಮೊಬೈಲ್ , ಹಣ ಕಳೆದುಕೊಂಡು ಪರಿತಪಿಸಿದ್ದಾರೆ. ಬೆಂಗಳೂರು ಗೂಂಡಾಗಳಿಗೆ ಪ್ರಾಮಾಣಿಕ ಜೀವನ ಸಾಗಿಸುವ ಧೈರ್ಯ ಇಲ್ಲ. ಅಡ್ಡ ದಾರಿಯಲ್ಲಿ, ಜನರ ಹಣ ಲೂಟಿ ಮಾಡಿ ಬದುಕುವವರಿಗೆ ಸಾಮಾಜ, ಪೊಲೀಸ್, ಕಾನೂನಿನ ಭಯ ಇಲ್ಲದಾಗಿದೆ. ಇಂತಹ ಪ್ರಕರಣ ಹೆಚ್ಚಾಗುತ್ತಿದ್ದಂತೆ ಮಕ್ಕಳು, ಮಹಿಳೆಯರು ನಾಗರಿಕರು ರಾತ್ರಿಯಾದರೆ ಮನೆಯಿಂದ ಹೊರ ಹೋಗಲು ಭಯಪಡುವ ವಾತಾವರಣ ನಿರ್ಮಾಣವಾಗುತ್ತಿದೆ. ಜನರಿಗೆ ಪೊಲೀಸರ ಮೇಲೆ ಆತ್ಮವಿಶ್ವಾಸ ದಿನದಿಂದ ದಿನಕ್ಕೆ ಕಡಿಮೆ ಆಗುವಂತೆ ಇಂತಹ ಘಟನೆಗಳು ಮಾಡುತ್ತಿವೆ.

ಬೆಂಗಳೂರಿನ ನಿವಾಸಿಗಳಿಗೆ ಧೈರ್ಯ ನೀಡುವ ನಿಟ್ಟಿನಲ್ಲಿ ಬೆಳಗಿನ ಜಾವ ಪೊಲೀಸ್ ಗಸ್ತು ಹೆಚ್ಚಿಸಬೇಕು. ಸಾಮಾನ್ಯ ಜನರು ಯಾವುದೇ ಭಯ, ಅಂಜಿಕೆ ಇಲ್ಲದೇ ಓಡಾಡುವ ಸ್ಥಿತಿ ನಿರ್ಮಿಸಬೇಕೆಂಬ ಆಗ್ರಹ ಜೋರಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+