Get Updates
Get notified of breaking news, exclusive insights, and must-see stories!

ಬೆಂಗಳೂರಿನ ಈ ಐತಿಹಾಸಿಕ ದೇವಸ್ಥಾನದಲ್ಲಿ ಮದುವೆ ನಡೆಯಲ್ಲ: ದೇವಸ್ಥಾನದ ನಿರ್ಧಾರ ಪ್ರಶ್ನಿಸಿದ ಸಿಎಂ ಕಚೇರಿ!

ಬೆಂಗಳೂರಿನ ಪ್ರಮುಖ ದೇವಾಲಯವೊಂದರಲ್ಲಿ ಮದುವೆಯಾದವರು ಹೆಚ್ಚು ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆಧಾರದ ಮೇಲೆ ದೇವಸ್ಥಾನದಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ಒಂದು ದೇವಸ್ಥಾನದಲ್ಲಿ ದೇವಸ್ಥಾನದ ಆವರಣದಲ್ಲಿ ಯಾವುದೇ ಮದುವೆಗಳನ್ನು ಮಾಡಬಾರದು ಎಂದು ನಿರ್ಧರಿಸಲಾಗಿದೆ. ಈ ವಿಷಯವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅದರ ವಿವರ ನೋಡೋಣ.

ಬೆಂಗಳೂರಿನ ಪ್ರತಿಷ್ಠಿತ ದೇವಾಲಯವೊಂದರಲ್ಲಿ ಮದುವೆಗಳನ್ನು ಮಾಡದೆ ಇರಲು ನಿರ್ಧರಿಸಲಾಗಿದೆ. ದೇವಸ್ಥಾನದ ಅಧಿಕಾರಿಗಳು ತಮ್ಮ ಮದುವೆಯನ್ನು ನಡೆಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕರ್ನಾಟಕ ಮುಖ್ಯಮಂತ್ರಿ ಕಚೇರಿಗೆ (CMO) ದೂರು ನೀಡಿದ ನಂತರ ಅವರ ನಿರ್ಧಾರ ಬೆಳಕಿಗೆ ಬಂದಿದೆ. CMO ವಿವರಣೆಯನ್ನು ಕೇಳಿದಾಗ, ಅರ್ಚಕರು ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ಸುವಿವರವಾಗಿ ವಿವರಿಸಿದ್ದಾರೆ. ಮದುವೆ ವಿಫಲವಾದಾಗ ನ್ಯಾಯಾಲಯಕ್ಕೆ ಸುತ್ತಬೇಕಾದ ಪರಿಸ್ಥಿತಿಗಳು ನಿರ್ಮಾಣವಾಗಿರುವ ಬಗ್ಗೆ ಅವರು ವಿವರಿಸಿದ್ದಾರೆ.

Bengaluru s Historic Temple Stops Marriages CM s Office Questions Big Decision

ಬೆಂಗಳೂರಿನಲ್ಲಿರುವ ಶತಮಾನಗಳಷ್ಟು ಹಳೆಯದಾದ ಹಲಸೂರು ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈಗ ಮದುವೆಗಳು ನಡೆಯುತ್ತಿಲ್ಲ. ಬೆಂಗಳೂರಿನ ಅತ್ಯಂತ ಜನಪ್ರಿಯ ಪಾರಂಪರಿಕ ದೇವಾಲಯಗಳಲ್ಲಿ ಈ ದೇವಾಲಯವು ಒಂದಾಗಿದೆ. ಈ ದೇವಾಲಯವು ಬೆಂಗಳೂರಿನಲ್ಲಿ ದಶಕಗಳಿಂದ ವಿವಾಹಗಳಿಗೆ ಪ್ರಸಿದ್ಧಿ ಗಳಿಸಿದೆ. ಬಹಳ ಹಿಂದಿನಿಂದಲೂ ಮದುವೆಗಳು ಇಲ್ಲಿ ಆಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ದೇವಸ್ಥಾನದಲ್ಲಿ ಮದುವೆ ಮಾಡಲು ಅವಕಾಶ ನೀಡುತ್ತಿಲ್ಲ. ದೇವಸ್ಥಾನದ ಆಡಳಿತ ಮಂಡಳಿಯು ಕಳೆದ ಕೆಲವು ವರ್ಷಗಳಿಂದ ಆವರಣದಲ್ಲಿ ವಿವಾಹವಾದವರು ಕೆಲವೇ ದಿನಗಳಲ್ಲಿ ವಿವಾಹವಾದ ಬಂಧ ಮುಕ್ತರಾಗುತ್ತಿದ್ದಾರೆ. ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರೆ.

ಈ ವಿಚಾರವಾಗಿ ಮದುವೆಯಾದವರು ದೇವಸ್ಥಾನಕ್ಕೆ ಬರುವುದು ಹೆಚ್ಚಾಗಿದೆ. ವಿಚ್ಛೇದನ ಪ್ರಕರಣಗಳ ಕುರಿತು ನ್ಯಾಯಾಲಯಕ್ಕೆ ಬರುವಂತೆ ಒತ್ತಡಗಳು ಹೆಚ್ಚಾದ ನಂತರ ಮದುವೆಗಳನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ! ವಿಚ್ಛೇದನ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯಗಳು ತಮ್ಮ ಮುಂದೆ ಹಾಜರಾಗಲು ಪುರೋಹಿತರಿಗೆ ನಿರ್ದೇಶನ ನೀಡಲಾಗುತ್ತಿದೆ ಎಂದು ದೇವಸ್ಥಾನದ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಹಲವು ಜೋಡಿಗಳು ಮನೆಯಿಂದ ಓಡಿಹೋಗಿ ಮದುವೆಯಾಗಲು ನಕಲಿ ದಾಖಲೆಗಳನ್ನು ನೀಡುತ್ತಾರೆ. ಕೆಲವು ದಿನಗಳ ನಂತರ, ಈ ಜೋಡಿಗಳ ಪೋಷಕರು ಬರುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ನ್ಯಾಯಾಲಯದ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ದೇವಾಲಯ ಸಮಿತಿಯ ಮುಖ್ಯ ಆಡಳಿತ ಅಧಿಕಾರಿ ವಿ. ಗೋವಿಂದರಾಜು ಹೇಳಿದ್ದಾರೆ ಎನ್ನಲಾಗಿದೆ.

ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಾಲಯದ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರುವ ಯಾವುದೇ ಅಹಿತಕರ ಘಟನೆಯನ್ನು ತಡೆಗಟ್ಟಲು ಸುಮಾರು ಆರುರಿಂದ ಏಳು ವರ್ಷಗಳ ಹಿಂದೆ ದೇವಾಲಯವು ಸುಮಾರು 100-150 ವಿವಾಹಗಳನ್ನು ನಡೆಸಿದೆ ಎಂದೂ ಅವರು ಹೇಳಿದ್ದಾರೆ. ದೇವಾಲಯದ ಆವರಣದಲ್ಲಿ ವಿವಾಹಗಳನ್ನು ಹೊರತುಪಡಿಸಿ ಇನ್ನುಳಿದ ಸಮಾರಂಭ ಹಾಗೂ ಪೂಜಾ ಕಾರ್ಯಕ್ರಮಗಳು ಮುಂದುವರಿದಿವೆ.

ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ: ಇನ್ನೂ ಈ ಬೆಳವಣಿಗೆಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಅದಕ್ಕೆ ಮದುವೆಯನ್ನೇ ಮಾಡುವುದಿಲ್ಲ ಎನ್ನುವುದು ತಪ್ಪೂ ಎಂದೂ ಕೆಲವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+