Bengaluru Racecourse: ಬೆಂಗಳೂರು ರೇಸ್ಕೋರ್ಸ್ ಕುಣಿಗಲ್ಗೆ ಸ್ಥಳಾಂತರ: ರಾಜ್ಯ ಸರ್ಕಾರ ನಿರ್ಧಾರ
Bengaluru Racecourse: ಬೆಂಗಳೂರು ಹೃದಯ ಭಾಗದಲ್ಲಿರುವ ಹೆಸರುವಾಸಿಯಾಗಿದ್ದ ರೇಸ್ಕೋರ್ಸ್ ಅನ್ನು ಸ್ಥಳಾಂತರ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಇರುವ ಈ ಜಾಗವನ್ನು ಮೈಸೂರು ರಾಜರು ಕುದುರೆ ಓಟದ ಸ್ಪರ್ಧೆಗೆಂದು ನೀಡಿದ್ದರು. ಇದೀಗ ಇದನ್ನು ಕುಣಿಗಲ್ಗೆ ಶಿಫ್ಟ್ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಕೇಂದ್ರ ಭಾಗದಲ್ಲಿನ ರೇಸ್ಕೋರ್ಸ್ ಅನ್ನು ಕುಣಿಗಲ್ ಸ್ಟಡ್ ಫಾರಂ ಬಳಿ 101.24 ಎಕರೆ ಜಾಗಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಹತ್ತಿರದ 8.36 ಎಕರೆ ಜಮೀನನ್ನು ಸೇರಿಸಿ ಒಟ್ಟು 110.20 ಎಕರೆ ಬಾಡಿಗೆ ಆಧಾರದ ಮೇಲೆ 29 ವರ್ಷಗಳ ಅವಧಿಗೆ ಟರ್ಫ್ ಕ್ಲಬ್ಗೆ ನೀಡಲಾಗುವುದು. ಹಾಗಾದ್ರೆ ಪ್ರಸ್ತುತ ಇರುವ ಈ ಸ್ಥಳವನ್ನು ಕೊಡುಗೆಯಾಗಿ ನೀಡಿದ್ದು ಯಾಕೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮೈಸೂರು ಮಹಾರಾಜರು ನೀಡಿದ್ದ ಜಾಗ
ರೇಸ್ಕೋರ್ಸ್ ಮಂಡಳಿಯು ಈ ಸ್ಥಳಾಂತರವನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಲು ಒಪ್ಪಿದೆ. ಮೂಲತಃ 1923ರಲ್ಲಿ ಮೈಸೂರಿನ ರಾಜರು 83.14 ಎಕರೆ ಜಾಗವನ್ನು ಕುದುರೆ ಓಟ ಸ್ಪರ್ಧೆ ಮತ್ತು ತರಬೇತಿಗಾಗಿ ನೀಡಿದ್ದರು. ಸ್ಥಳಾಂತರದ ನಂತರ ಈ ಕೇಂದ್ರದ ಜಾಗವನ್ನು ಹಸಿರು ಪ್ರದೇಶವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಸ್ಥಳಾಂತರ ಮಾಡಲು ಪ್ರಮುಖ ಕಾರಣ ಏನು?
ಹೆಚ್ಚುವರಿ ಬಾಡಿಗೆ ಸಂಗ್ರಹದ ನಿರ್ಧಾರ ಕೈಗೊಂಡಿದ್ದು, 2010ರಿಂದ ಜಮೀನು ಬಾಡಿಗೆ ದರವನ್ನು ಪರಿಶೀಲಿಸದೇ ಉಳಿಯುವ ಕಾರಣದಿಂದ ನಷ್ಟ ಆಗಿರುವ ಹಣವನ್ನು ಬರಿಸಲಾಗುವುದು. 2010-2021 ನಡುವಿನ ಸಮಯದಲ್ಲಿ ವಾರ್ಷಿಕ ಆದಾಯದ ಶೇಕಡ 2ರಷ್ಟು ಬಾಡಿಗೆ ವಸೂಲಿ ಮಾಡಲು ತೀರ್ಮಾನಿಸಲಾಗಿದೆ.
ರೇಸ್ಕೋರ್ಟ್ ಸ್ಥಳಾಂತರಕ್ಕೆ ಪ್ರಮುಖ ಕಾರಣವೆಂದರೆ, ಬೆಂಗಳೂರು ಕೇಂದ್ರದ ಸಂಚಾರದಟ್ಟಣೆ. ಕುಣಿಗಲ್ನಲ್ಲಿ ಈಗಾಗಲೇ 1992ರಿಂದ ಖಾಸಗಿ ಸಂಸ್ಥೆಯು ಸ್ಟಡ್ ಫಾರಂ ರೇಸ್ಕೋರ್ಸ್ ನಡೆಸುತ್ತಿದ್ದು, ಮೂಲಸೌಕರ್ಯವಾಗಿದೆ ಮತ್ತು ಸಂಚಾರದ ದಟ್ಟಣೆ ಸಮಸ್ಯೆ ಇಲ್ಲದಿರುವುದರಿಂದ ಸ್ಥಳಾಂತರ ಸೂಕ್ತವಾಗಿದೆ ಎಂದು ಸರ್ಕಾರ ತಿಳಿಸಿದೆ.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications