ಸಾವಿನ ಕರೆಯೋಲೆ ನೀಡಲು ಸಿದ್ಧವಾಗಿರುವ ವಿಜಯ ನಗರದ ಪಾರ್ಕ್ ಗಳು!
ಮೃತ್ಯುಕೂಪಗಳಾಲಿರುವ ಬೆಂಗಳೂರು ಪಾರ್ಕ್ ಗಳು. ವಿದ್ಯುತ್ ಸಂಪರ್ಕದ ಕಳಪೆ ನಿರ್ವಹಣೆಯಿಂದ ಆಗಬಹುದಾದ ತೊಂದರೆ ಅಷ್ಟಿಷ್ಟಲ್ಲ.
ಬೆಂಗಳೂರು, ಸೆಪ್ಟೆಂಬರ್ 18: ಬೆಂಗಳೂರಿನ ಪಾರ್ಕ್ ಗಳು ಉದ್ಯಾನ ನಗರಿಯ ಮತ್ತೊಂದು ಹೆಗ್ಗಳಿಕೆ. ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಅಚ್ಚುಕಟ್ಟಾದ, ಸುಸಜ್ಜಿತವಾದ, ಆಧುನೀಕರಣಗೊಂಡ ಉದ್ಯಾನವನಗಳನ್ನು ಇಲ್ಲಿನ ನಾಗರಿಕರು ಪ್ರೀತಿಸುತ್ತಾರೆ. ಹಾಗೆಯೇ ವಿಜಯ ನಗರದಲ್ಲಿರುವ ಕೆಲವು ಪಾರ್ಕ್ ಗಳು ತಮ್ಮದೇ ಆದ ಸೌಂದರ್ಯದಿಂದ ಜನಾಕರ್ಷಣೆಯ ಕೇಂದ್ರಗಳಾಗಿವೆ.
ಆದರೆ, ಈ ಪಾರ್ಕ್ ಗಳ ಹಿರಿಮೆಗೆ ಕಪ್ಪುಚುಕ್ಕೆಯೆಂಬಂತೆ, ಕೆಲವಾರು ಪಾರ್ಕ್ ಗಳಲ್ಲಿ ಇರುವ ವಿದ್ಯುತ್ ಕಂಬಗಳು, ವಿದ್ಯುತ್ ಜಂಕ್ಷನ್ ಬಾಕ್ಸ್ ಗಳು ನಿರ್ವಹಣಾ ಲೋಪದಿಂದಾಗಿ ಮಕ್ಕಳನ್ನು, ಹಿರಿಯರನ್ನು ಬಲಿಪಡೆಯಲು ಕಾಯುತ್ತಿವೆ.

ಪಾರ್ಕ್ ಗೆ ವಿದ್ಯುತ್ ಸಂಪರ್ಕ್ ನೀಡಿದರಷ್ಟೇ ಸಾಲದು, ಆ ಸಂಪರ್ಕಗಳನ್ನು ಸೂಕ್ತವಾಗಿ ನಿಭಾಯಿಸಬೇಕು. ಆದರೆ, ಹಲವಾರು ಪಾರ್ಕ್ ಗಳಲ್ಲಿ ಅದು ಆಗುತ್ತಿಲ್ಲ. ಹಲವೆಡೆ, ನೆಲಮಟ್ಟದಲ್ಲಿ ನಿಲ್ಲಿಸಲಾಗಿರುವ ಜಂಕ್ಷನ್ ಬಾಕ್ಸ್ ಗಳಿಂದ ಅಥವಾ ಫ್ಯೂಸ್ ಬಾಕ್ಸ್ ಗಳಿಂದ ಅರ್ದ ತುಂಡಾದ ವೈರುಗಳು ಹೊರಬಿದ್ದಿರುವ ದೃಶ್ಯಗಳು ಹಲವಾರು ಪಾರ್ಕ್ ಗಳಲ್ಲಿ ಮಾಮೂಲಿ ಎನಿಸಿದೆ.
ಅಷ್ಟೇ, ಈ ಜಂಕ್ಷನ್ ಬಾಕ್ಸ್ ಗೆ ಸರಿಯಾದ ಬೀಗವೂ ಇಲ್ಲದಿರುವುದರಿಂದ ಈ ಬಾಕ್ಸ್ ಗಳ ಬಾಗಿಲುಗಳು ತೆರೆದಿದ್ದು ಅಲ್ಲಿನ ಫ್ಯೂಸ್ ಸರ್ಕೀಟ್ ಹಾಗೆಯೇ ಕಣ್ಣಿಗೆ ರಾಚುವಂತಿದೆ. ಅಷ್ಟೇ ಅಲ್ಲ, ಮುಗ್ಧ ಮಕ್ಕಳು ಇದರೊಳಗೆ ಕೈ ಹಾಕುವ ಎಲ್ಲಾ ಅಪಾಯಗಳೂ ಇವೆ. ಹಾಗಾಗಿ, ಇಂಥ ಪಾರ್ಕ್ ಗಳಲ್ಲಿನ ವಿದ್ಯುತ್ ಸಂಪರ್ಕಗಳನ್ನು ಖಂಡಿತವಾಗಿಯೂ ಸಂರಕ್ಷಣೆ ಮಾಡಬೇಕಿದೆ.
ಈಗ ಮಳೆಗಾಲ. ಪಾರ್ಕ್ ಗಳಲ್ಲಿ ಹೇರಳವಾಗಿ ಗಿಡ ಮರ ಬೆಳೆದಿರುವುದರಿಂದ, ಪಾರ್ಕ್ ಗಳಲ್ಲಿ ಹೀಗೆ ವಿದ್ಯುತ್ ಜಂಕ್ಷನ್ ಬಾಕ್ಸ್ ಗಳು, ಮೀಟರ್ ಬಾಕ್ಸ್ ಗಳು ಅಥವಾ ಫ್ಯೂಸ್ ಬಾಕ್ಸ್ ಗಳು ಬಾಯಿ ತೆರೆದುಕೊಂಡು ಮಳೆ ನೀರು ಹಾದುಹೋಗಲು ಅವಕಾಶ ಮಾಡಿಕೊಟ್ಟರೆ, ವಿದ್ಯುತ್ ಗ್ರೌಂಡಿಂಗ್ ಆಗಿ ಅದು ಪಾರ್ಕ್ ಗೆ ಭೇಟಿ ಕೊಡುವ ನಾಗರಿಕರಿಗೆ ಅಪಾಯ ತಂದೊಡ್ಡುವ ಸಾಧ್ಯತೆಗಳನ್ನೂ ತಳ್ಳಿ ಹಾಕಲಾಗದು. ಹಾಗಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಬಗ್ಗೆ ಗಮನ ಹರಿಸುವುದೊಳಿತು.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications