ಮೆದುಳಿನ ಆಪರೇಷನ್ ವೇಳೆ ಗಿಟಾರ್ ಬಾರಿಸುತ್ತಿದ್ದ ಬೆಂಗಳೂರು ಟೆಕ್ಕಿ!
ತನ್ನ ಮೆದುಳು ಶಸ್ತ್ರಚಿಕಿತ್ಸೆ ವೇಳೆ ಗಿಟಾರ್ ಬಾರಿಸುತ್ತಿದ್ದ ಬೆಂಗಳೂರು ಟೆಕ್ಕಿ. ಎಡಗೈ ಬೆರಳುಗಳ ಸೆಳೆತ ಸಮಸ್ಯೆ ಎದುರಿಸುತ್ತಿದ್ದ ಟೆಕ್ಕಿಯ ಮೆದುಳಿನಲ್ಲಿರುವ ಆ ಬೆರಳುಗಳ ಮೂಲವನ್ನು ಹುಡುಕಲು ವೈದ್ಯರೇ ಹೇಳಿದ್ದ ಸೂಚನೆ. ಈ ಹಿನ್ನೆಲೆಯಲ್ಲಿ
ಬೆಂಗಳೂರು, ಜುಲೈ 20: ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಅತ್ತ ವೈದ್ಯರು ಆತನ ಮೆದುಳಿಗೇ ಅಕ್ಷರಶಃ ಕೈ ಹಾಕಿದ್ದಾಗ, ಆ ಬೆಂಗಳೂರಿನ ಟೆಕ್ಕಿ ಆಪರೇಷನ್ ಥಿಯೇಟರ್ ನ ಆ ಬೆಡ್ ಮೇಲೆ ಮಲಗಿ ಗಿಟಾರ್ ಬಾರಿಸುತ್ತಿದ್ದ!
ಅಚ್ಚರಿಯೆನಿಸುವ ಇಂಥದ್ದೊಂದು ಶಸ್ತ್ರಚಿಕಿತ್ಸೆ ನಡೆದಿರುವುದು ಬೆಂಗಳೂರಿನಲ್ಲೇ. ವಾರದ ಹಿಂದೆ ನಡೆದಿರುವ ವಿಶೇಷ ಆಪರೇಷನ್ ಈಗಷ್ಟೆ ಬೆಳಕಿಗೆ ಬಂದಿದೆ.
ಆ ಆಪರೇಷನ್ ಗೂ, ಗಿಟಾರ್ ವಾದನಕ್ಕೂ ಒಂದು ವೈಜ್ಞಾನಿಕ ನಂಟೂ ಇದೆ. ವಿಷಯ ಇಷ್ಟೆ. ಉದಯ್ (ಹೆಸರು ಬದಲಿಸಲಾಗಿದೆ) ಎಂಬ ಟೆಕ್ಕಿಯು ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿ.
#WATCH: Bengaluru man plays guitar as doctors operate on his brain at a city hospital. pic.twitter.com/F9N2Ifp9lU
— ANI (@ANI_news) July 20, 2017
ಆದರೆ, ಕಳೆದೊಂದು ವರ್ಷದಿಂದ ಆತನ ಎಡಗೈನ ಕೆಲ ಬೆರಳುಗಳು ಸ್ನಾಯು ಸೆಳೆತಕ್ಕೊಳಗಾಗಿದ್ದವು. ಹಲವಾರು ವೈದ್ಯೋಪಚಾರಗಳ ಹೊರತಾಗಿಯೂ ಆ ಬೆರಳುಗಳ ಚಲನ ವಲನದಲ್ಲಿ ಯಾವುದೇ ಸುಧಾರಣೆ ಕಂಡಿರಲಿಲ್ಲ.
ಹಾಗಾಗಿ, ಆತ ನಗರದ ಜೈನ್ ಆಸ್ಪತ್ರೆಗೆ ಭೇಟಿ ನೀಡಿದ್ದ. ಅಲ್ಲಿನ ವೈದ್ಯರು ಈತನ ಸಮಸ್ಯೆನ್ನು ಕೂಲಂಕಷವಾಗಿ ಪರಿಶೀಲಿಸಿ, ಶಸ್ತ್ರಚಿಕಿತ್ಸೆ ಮಾಡುವ ನಿರ್ಧಾರಕ್ಕೆ ಬಂದರು. ಈ ಸಮಸ್ಯೆಯನ್ನು 'ಡಿಸ್ಟೋನಿಯಾ' ಎಂದು ವರ್ಗೀಕರಿಸಿದ ವೈದ್ಯರು, ಈ ಸಮಸ್ಯೆಯ ನಿವಾರಣೆಯ ಭಾರವನ್ನು ಬ್ರಿಟನ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿರುವ ಭಾರತೀಯ ತಜ್ಞ ಸಂಜೀವ್ ಸಿಸಿ ಅವರಿಗೆ ಹೊರಿಸಿದ್ದರು.
ಅದರಂತೆ, ಕಳೆದ ವಾರ ಶಸ್ತ್ರಚಿಕಿತ್ಸೆ ನಡೆದಿದೆ. ಆದರೆ, ಆಪರೇಷನ್ ಗೂ ಮುನ್ನ ಡಾ. ಸಂಜೀವ್ ಅವರು, ಆ ಟೆಕ್ಕಿಗೆ ತನ್ನ ಎಡಗೈ ಬೆರಳುಗಳು ಸತತವಾಗಿ ಚಲನೆಯಲ್ಲಿರುವ ಚಟುವಟಿಯೊಂದನ್ನು ಮಾಡಬೇಕೆಂದು ಸೂಚಿಸಿದ್ದಾರೆ. ಹಾಗಾಗಿ, ಆತ ತನ್ನ ಅಚ್ಚುಮೆಚ್ಚಿನ ಹವ್ಯಾಸವಾಗಿರುವ ಗಿಟಾರ್ ವಾದನ ಮಾಡುವುದಾಗಿ ಹೇಳಿದ್ದಾನೆ.
ಟೆಕ್ಕಿಯು ಸಮಸ್ಯೆಗೆ ಒಳಗಾಗಿರುವ ತನ್ನ ಎಡಗೈ ಬೆರಳುಗಳನ್ನು ಸತತವಾಗಿ ಚಲನೆಗೊಳಿಸುತ್ತಿದ್ದರೆ ಮೆದುಳಿನಲ್ಲಿರುವ ಆ ಬೆರಳುಗಳ ನರಗಳ ನಿಖರ ಮೂಲವನ್ನು ಗುರುತಿಸಲು ಸಾಧ್ಯ ಎಂಬ ಆಲೋಚನೆ ವೈದ್ಯರದ್ದು. ಹಾಗಾಗಿ, ಟೆಕ್ಕಿಗೆ ಗಿಟಾರನ್ನೇ ನುಡಿಸುವಂತೆ ಹೇಳಿದ್ದಾರೆ.
ಅದರಂತೆ, ಆಪರೇಷನ್ ಗೆ ಒಳಗಾದ ಟೆಕ್ಕಿಯು ಗಿಟಾರ್ ನುಡಿಸುತ್ತಿದ್ದರೆ, ಅತ್ತ ವೈದ್ಯರ ಕೆಲಸ ಮತ್ತಷ್ಟು ಸುಲಭವಾಗಿ ಆತನ ಸಮಸ್ಯೆಗೆ ಕಾರಣವಾಗಿದ್ದ ನರಗಳ ತೊಂದರೆಯನ್ನು ನಿವಾರಿಸಿದ್ದಾರೆ. ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದ್ದು ಒಂದು ವಾರದ ವಿಶ್ರಾಂತಿಯ ಬಳಿಕ ಈಗ ಆ ಟೆಕ್ಕಿಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ












Click it and Unblock the Notifications