ಐಎಂಎ ಹಗರಣ: 25 ಕೆಜಿ ಚಿನ್ನ, 13 ಕೋಟಿ ಲಂಚ ಪಡೆದಿದ್ದ ಐಪಿಎಸ್ ಅಧಿಕಾರಿ
ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರು ಪೂರ್ವ ವಲಯದ ಉಪ ಪೊಲೀಸ್ ಆಯುಕ್ತರಾಗಿದ್ದ ಐಪಿಎಸ್ ಅಜೆಯ್ ಲಾಹೊರಿ ಅವರಿಗೆ ಬರೋಬ್ಬರಿ 25 ಕೆಜಿ ಚಿನ್ನ ಮತ್ತು 13 ಕೋಟಿ ಲಂಚ (ಮಾಮೂಲಿ) ನೀಡಲಾಗಿತ್ತು ಎಂದು ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಬೇರೆ-ಬೇರೆ ಅಧಿಕಾರಿಗಳಿಗೆ ಪಾಲು ಕೊಡಬೇಕು ಎಂದು ಹೇಳಿ ಅಜಯ್ ಹಿಲೋರಿ ಅವರು ಒಟ್ಟು 25 ಕೆಜಿ ಚಿನ್ನ ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ ತಿಂಗಳಿಗೆ ಒಂದು ಕೋಟಿಯಂತೆ 13 ಕೋಟಿ ರೂಪಾಯಿ ಲಂಚ ವಸೂಲಿ ಮಾಡಿದ್ದಾರೆ ಎಂದು ಐಎಂಎ ಸಂಸ್ಥಾಪಕ ಮನ್ಸೂರ್ ಖಾವ್ ಸಿಬಿಐ ಮತ್ತು ಕರ್ನಾಟಕ ಪೊಲೀಸ್ ವಿಶೇಷ ತನಿಖಾ ದಳದ ಮುಂದೆ ಬಾಯಿಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮನ್ಸೂರ್ ಖಾನ್ ಅವರ ಹೇಳಿಕೆಗಳನ್ನು ವಿಡಿಯೋ ದಾಖಲು ಮಾಡಿಕೊಳ್ಳಲಾಗಿದ್ದು, ಚಾರ್ಜ್ಶೀಟ್ನಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಲಂಚದ ಹಣ ನೀಡಲಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.

ಆದರೆ ಮನ್ಸೂರ್ ಖಾನ್ ತಪ್ಪೊಪ್ಪಿಗೆಯನ್ನು ಅಲ್ಲಗಳೆದಿರುವ ಅಜೆಯ್ ಹಿಲೋರಿ, 'ನಾನು ಮನ್ಸೂರ್ ಖಾನ್ ನನ್ನು ಹಲವು ಭಾರಿ ಭೇಟಿ ಆಗಿರುವುದು ನಿಜ ಆದರೆ ನಾನು ಚಿನ್ನವನ್ನಾಗಲಿ, ಹಣವನ್ನಾಗಲಿ ಪಡೆದಿಲ್ಲ' ಎಂದು ಎಸ್ಐಟಿ ವಿಚಾರಣೆ ವೇಳೆ ಅಜೆಯ್ ಹಿಲೋರಿ ಹೇಳಿದ್ದರು.












Click it and Unblock the Notifications