ಲೀಲಾ ಪ್ಯಾಲೇಸ್ ನಲ್ಲಿ ಬೆಂಗಳೂರು ಕಾವ್ಯ ಉತ್ಸವ
ಬೆಂಗಳೂರು, ಜುಲೈ 14: ಆಟಾ ಗಲಾಟಾ, ಬೆಂಗಳೂರು ಕಾವ್ಯ ಉತ್ಸವವನ್ನು ಆಯೋಜಿಸುತ್ತಿದೆ. ಆಗಸ್ಟ್ 6 ಮತ್ತು 7ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್ ನಲ್ಲಿ ಉತ್ಸವ ನಡೆಯಲಿದೆ. ಬೆಂಗಳೂರು ಕಾವ್ಯ ಉತ್ಸವ (ಬಿಪಿಎಫ್) ಕವಿತೆಗಾಗಿನ ನಗರದ ಮೊದಲ ಉತ್ಸವವಾಗಿದೆ.
ಭಾರತೀಯ ಕವಿತೆಗಳು ಮತ್ತು ಕವಿಗಳು ವಿಶ್ವದಾದ್ಯಂತ ಖ್ಯಾತಿ ಹೊಂದಿದ್ದರೂ, ಪ್ರಸ್ತುತ ಇರುವ ಸಾಹಿತ್ಯಕ ವೇದಿಕೆಗಳಲ್ಲಿ ಅವರಿಗಿರುವ ಅವಕಾಶಗಳು ಕಡಿಮೆ ಎಂದು ಮನಗಂಡ ಆಟಾ ಗಲಾಟ(Atta Galatta)ದ ಸ್ಥಾಪಕರಾದ ಸುಬೋಧ್ ಮತ್ತು ಲಕ್ಷ್ಮಿ ಹಾಗೂ ಉಳಿದ ಕಾವ್ಯಪ್ರೇಮಿಗಳು ಉತ್ಸವಕ್ಕೆ ಮುಂದಾಗಿದ್ದಾರೆ. ಉತ್ಸವವು ಕವಿತೆ, ಭಾಷಣಗಳು, ಕಾರ್ಯಾಗಾರಗಳನ್ನು ಒಳಗೊಂಡಿದೆ.[ನಮ್ಮ ಕಾವ್ಯಗಳು ಜನರಿಗೆ ಅನುಕೂಲವಾಗುವಂತಿರಲಿ: ಕಂಬಾರ]
ಕವಿಪುಂಗವರ ಉಪಸ್ಥಿತಿ: ಜಾವೇದ್ ಅಖ್ತರ್, ಜಯಂತ್ ಕಾಯ್ಕಿಣಿ, ವರುಣ್ ಗಾಂಧಿ, ಪಿಯೂಷ್ ಮಿಶ್ರಾ, ಸಂಪೂರ್ಣ ಚಟರ್ಜಿ, ಮಮತಾ ಸಾಗರ, ಮನೋಹರ್ ಶೆಟ್ಟಿ ಹಾಗೂ ಸಿಪಿ ಸುರೇಂದ್ರನ್.

ವಿವಿಧ ಭಾಷೆಗಳ ಕವನ ಪ್ರಸ್ತುತಿ: ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು, ಬಂಗಾಳಿ, ಒಡಿಶಾ, ಮೈಥಿಲಿ ಸೇರಿದಂತೆ ವಿವಿಧ ಭಾಷೆಗಳ ಕವಿತೆಗಳನ್ನು ಪ್ರಸ್ತುತಪಡಿಸಲು ಇದು ಪ್ರಮುಖ ವೇದಿಕೆಯಾಗಲಿದೆ.
ಭಾಗವಹಿಸುವುದು ಹೇಗೆ?: ಆಸಕ್ತ ಯುವ ಕವಿ, ಕವಯಿತ್ರಿಯರು www.bengalurupoetryfestival.org ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಅಥವಾ ಕೃತಿ : 96325 10126 ಕರೆ ಮಾಡಿ. ಪ್ರವೇಶ ಉಚಿತ.

ಬಿಪಿಎಫ್ 2016- ಕಮ್ಯೂನಿಟಿ ಎಂಗೇಜ್ಮೆಂಟ್
ಬೆಂಗಳೂರು ಮೂಲದ ಕವಿತಾ ತಂಡಗಳಾದ ಇಂಕ್ ವೀವರ್, ಏರ್ಪ್ಲೇನ್ ಪೋಯೆಟ್ರಿ ಮೂವ್ಮೆಂಟ್, ಓಪನ್ ಸ್ಕೈ ಸ್ಲ್ಯಾಮ್, ಪೋಯೆಟ್ರಿ ಅಟ್ ದಿ ಪಾರ್ಕ್, ಲೆಟ್ ಪೋಯೆಟ್ರಿ ಬಿ, ಅಂಜುಮಾನ್ ಮುಂತಾದ ತಂಡದ ಸಹಯೋಗದೊಂದಿಗೆ ಈ ಉತ್ಸವವು ಸ್ಥಳೀಯ ಕವಿಗಳಿಗೆ ಹಾಗೂ ಆಮಂತ್ರಿತರಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಡಲಿದೆ.[ಅಮೂಲ್ಯ ಆತ್ಮಗಳ ಬಂಧ ಸಾರುವ 'ಪ್ರೀಶಿಯಸ್ ಸೋಲ್ಸ್']
ಇದಕ್ಕೆ ಹೊರತಾಗಿ ಬಿಪಿಎಫ್ನ ಪಬ್ಲಿಷಿಂಗ್ ಪಾರ್ಟ್ನರ್ ಆದ ರೇನ್ಡ್ರಾಪ್ಸ್ ಕಂಪೆನಿ ಕಾವ್ಯ ಸ್ಪರ್ಧೆಯನ್ನೂ ಆಯೋಜಿಸಿದ್ದು ಆಯ್ಕೆಯಾದ ಕವಿತೆಗಳನ್ನು ಬೆಂಗಳೂರು ಪೋಯೆಟ್ರಿ ಫೆಸ್ಟಿವಲ್ 2016 ಆಂಥಾಲಜಿಯಲ್ಲಿ ಪ್ರ್ರಕಟಿಸಲಾಗುವುದಲ್ಲದೆ ಅದನ್ನು ಉತ್ಸವದ ವೇಳೆ ಬಿಡುಗಡೆಗೊಳಿಸಲಾಗುವುದು.
ಫೇಸ್ ಬುಕ್: BengaluruPoetryFestival
ಟ್ವಿಟ್ಟರ್: #BPF2016
Instagram: BengaluruPoetryFestival
ಶೈನಿ ಆಂಟನಿ- ಉತ್ಸವದ ನಿರ್ದೇಶಕರು
ಶೈನಿ ಆಂಟನಿ ಸಣ್ಣ ಕಥೆಗಳ ಸಂಕಲನವಾದ ದಿ ಆರ್ಫನೇಜ್ ಫಾರ್ ವುಡ್ಸ್, ಬೇರ್ಫೂಟ್ ಆಂಡ್ ಪ್ರೆಗ್ನೆಂಟ್ ಹಾಗೂ ವೆನ್ ಮೀರಾ ವಎಂಟ್ ಫೋರ್ತ್ ಆಂಡ್ ಮಲ್ಟಿಪ್ಲೈಡ್ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಇವರು 2001ರಲ್ಲಿ ಕಾಮನ್ವೆಲ್ತ್ ಶಾರ್ಟ್ ಸ್ಟೋರಿ ಏಷ್ಯಾ ರೀಜನ್ ಪ್ರಶಸ್ತಿ ಪಡೆದಿದ್ದಾರೆ. ಬೆಂಗಳೂರು ಲಿಟರೇಚರ್ ಫೆಸ್ಟಿವಲ್(ಬಿಎಲ್ ಎಫ್) ನ ಆಯೋಜಕರಲ್ಲಿ ಒಬ್ಬರು.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications