ಬೆಂಗಳೂರು ಪ್ರವಾಹ: ಸಾವಿರ ಕೆರೆಗಳ ನಗರದಲ್ಲಿ 126 ಕೆರೆಗಳು ಭರ್ತಿ
ಬೆಂಗಳೂರು ಸೆಪ್ಟೆಂಬರ್ 12: ಭಾರಿ ಮಳೆಯಿಂದಾಗಿ ಸೆಪ್ಟೆಂಬರ್ ಆರಂಭದಿಂದ ಬೆಂಗಳೂರಿನಾದ್ಯಂತ 126 ಕೆರೆಗಳು ತುಂಬಿ ಹರಿದಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ.
ಅತಿ ಹೆಚ್ಚು ಬಾಧಿತವಾದ ಮಹದೇವಪುರ ಪ್ರದೇಶವೊಂದರಲ್ಲೇ 42 ಕೆರೆಗಳು ತುಂಬಿ ಹರಿದು ಭಾರಿ ಪ್ರವಾಹಕ್ಕೆ ಕಾರಣವಾಗಿತ್ತು. ಬೊಮ್ಮನಹಳ್ಳಿ ವಲಯದಲ್ಲಿ 30 ಕೆರೆಗಳು ತುಂಬಿ ಹರಿದರೆ, ಆರ್ಆರ್ ನಗರ ವಲಯದ 22, ಯಲಹಂಕ ರಸ್ತೆಯಲ್ಲಿ 19, ದಕ್ಷಿಣ ವಲಯದಲ್ಲಿ 4, ಪೂರ್ವ ವಲಯದಲ್ಲಿ 2 ಹಾಗೂ ಪಶ್ಚಿಮ ವಲಯದಲ್ಲಿ ಒಂದು ಕೆರೆಗಳು ತುಂಬಿ ಹರಿದಿವೆ. ಹಲವು ದಶಕಗಳಲ್ಲಿ ಇಷ್ಟೊಂದು ಕೆರೆಗಳು ತುಂಬಿ ಹರಿಯುತ್ತಿರುವುದು ಇದೇ ಮೊದಲು. ನಗರ ಯೋಜನಾ ತಜ್ಞರ ಪ್ರಕಾರ, ಅತಿಕ್ರಮಣ ಮತ್ತು ಹೂಳು ತೆಗೆಯದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಬೆಂಗಳೂರಿನ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಗಣನೀಯವಾಗಿ ಕಡಿಮೆಯಾಗಿದೆ.
ನಗರದಲ್ಲಿನ ಈ ಜಲಮೂಲಗಳು ಮೂಲತಃ ಪರಸ್ಪರ ಸಂಪರ್ಕ ಹೊಂದಿದ್ದವು. ಆದಾಗ್ಯೂ, ಅತಿಕ್ರಮಣಗಳು, ಯೋಜಿತವಲ್ಲದ ನಿರ್ಮಾಣ ಮತ್ತು ಇತರ ಅಡೆತಡೆಗಳಿಂದಾಗಿ ಈ ಅಂತರ್ ಸಂಪರ್ಕದ ನಷ್ಟವು ಪ್ರಾಥಮಿಕವಾಗಿ ಇತ್ತೀಚಿನ ಪ್ರವಾಹಗಳಿಗೆ ಕಾರಣವಾಯಿತು. ಕೆರೆಗಳು ಮತ್ತು ಅವುಗಳ ಹಾಸುಗಳು ಕೂಡ ಅತಿಕ್ರಮಣಗೊಳ್ಳುತ್ತಿವೆ. ಕೆರೆಗಳಲ್ಲಿ ಹೂಳು ತುಂಬುವುದರಿಂದ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪರಿಸರ ತಜ್ಞ ಡಾ ಟಿ ವಿ ರಾಮಚಂದ್ರ ಹೇಳಿದ್ದಾರೆ.

ಬೆಂಗಳೂರು ಕೆರೆಗಳ ನಾಶಕ್ಕೆ ಕಾರಣವೇನು?
ವರ್ಷಗಳ ಹಿಂದೆ, ನಗರವು 1452 ಜಲಮೂಲಗಳನ್ನು ಹೊಂದಿದ್ದು, 35 ಟಿಎಂಸಿ (ಸಾವಿರ ಮಿಲಿಯನ್ ಘನ ಅಡಿಗಳು) ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿತ್ತು. ಇದು ಮಳೆನೀರನ್ನು ಅತ್ಯುತ್ತಮವಾಗಿ ಕೊಯ್ಲು ಮಾಡಲು ಸಹಾಯ ಮಾಡಿತ್ತು ಮತ್ತು ಪ್ರವಾಹವನ್ನು ತಗ್ಗಿಸಿತು. ಈಗ ಆ ಕೆರೆಗಳ ಸಂಖ್ಯೆಯನ್ನು 193ಕ್ಕೆ ಇಳಿಸಲಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ 500ಕ್ಕೂ ಹೆಚ್ಚು ಒತ್ತುವರಿಗಳನ್ನು ಬಿಬಿಎಂಪಿ ಗುರುತಿಸಿದ್ದು, ಇನ್ನೆರಡು ತಿಂಗಳಲ್ಲಿ ಅವುಗಳನ್ನು ತೆರವುಗೊಳಿಸುವುದಾಗಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಪೌರಕಾರ್ಮಿಕ ಸಂಸ್ಥೆ ಈ ಹಿಂದೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ನಗರದಲ್ಲಿ ಕೇವಲ 20 ಕೆರೆಗಳನ್ನು ಒತ್ತುವರಿ ಇಲ್ಲದೇ ಗುರುತಿಸಲಾಗಿದೆ. ಪ್ರಮುಖವಾಗಿ, 28 ಕೆರೆಗಳು ರಸ್ತೆಗಳು ಮತ್ತು ರೈಲು ಮಾರ್ಗಗಳಂತಹ ಸರ್ಕಾರದ ಯೋಜನೆಗಳಿಂದ ಅತಿಕ್ರಮಿಸಲ್ಪಟ್ಟಿವೆ. ಬೆಂಗಳೂರು ಒಂದು ವಾರದೊಳಗೆ ಎರಡು ಭಾರಿ ಪ್ರವಾಹಕ್ಕೆ ಸಾಕ್ಷಿಯಾಗಿದ್ದು ಇನ್ನೂ ಚೇತರಿಸಿಕೊಳ್ಳಲು ಹೆಣಗಾಡುತ್ತಿದೆ.

ಮಳೆಯಾದರೂ ತುಂಬದ ಕೆರೆಗಳು
ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಮನೆ, ಕಚೇರಿಗಳಿಗೆ ನೀರು ನುಗ್ಗಿ ರಸ್ತೆಗಳನ್ನು ನದಿಗಳಾಗಿವೆ. ಆದರೂ ಬಹುತೇಕ ಕೆರೆಗಳು ತುಂಬಿಸಲು ಸಾಧ್ಯವಾಗಿಲ್ಲ. ಈ ಜಲಮೂಲಗಳು ಕಾಲುವೆಗಳು ಹಾಗೂ ಚರಂಡಿಗಳಾಗಿ ಪರಿವರ್ತಿಸಿದ್ದೇ ಇದಕ್ಕೆ ಕಾರಣ. ಭೂಮಾಫಿಯಾ ಮಾಡಲಾಗಿದೆ ಎಂದು ಪರಿಸರವಾದಿಗಳು ಆಕ್ರೋಶ ಹೊರಹಾಕಿದ್ದಾರೆ. ಕೇವಲ 15 ವರ್ಷಗಳ ಹಿಂದೆ ಜನರು ಅದರ ನೀರನ್ನು ಕುಡಿಯಲು ಬಳಸುತ್ತಿದ್ದರು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ವಿವಿಧ ನಾಗರಿಕ ಸಂಸ್ಥೆಗಳು ಮತ್ತು ಸರ್ಕಾರದಲ್ಲಿನ ಕೆಲವು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ನಡೆಸಿದ ಈ ಕಿಡಿಗೇಡಿತನದಿಂದಾಗಿ ನಗರದ ಕೆರೆಗಳ ಸಾವಿಗೆ ಕಾರಣವಾಗಿದೆ ಎಂದು ಪರಿಸರ ಬೆಂಬಲ ಗುಂಪಿನ ಸಂಯೋಜಕ ಲಿಯೋ ಸಲ್ಡಾನ್ಹಾ ಆರೋಪಿಸಿದ್ದಾರೆ.
ಬ್ರಿಟಿಷ್ ಆಡಳಿತ 'ಸಾವಿರ ಕೆರೆಗಳ ನಗರ' ಎಂದು ಕರೆದಿತ್ತು. ಬೆಂಗಳೂರು ಮಹಾನಗರ ಪ್ರದೇಶದಲ್ಲಿ ಸುಮಾರು 400 ಜಲಮೂಲಗಳನ್ನು ಹೊಂದಿದೆ. ಕಣ್ಮರೆಯಾದ ಆ ಕೆರೆಗಳು ವಸತಿ ಬಡಾವಣೆಗಳು, ಬಸ್ ನಿಲ್ದಾಣಗಳು, ಬಸ್ ಟರ್ಮಿನಲ್ಗಳು ಮತ್ತು ಟೆಕ್ ಪಾರ್ಕ್ಗಳಿಗೆ ದಾರಿ ಮಾಡಿಕೊಟ್ಟಿವೆ. ದುಃಖಕರವೆಂದರೆ ಆ 400 ಕೆರೆಗಳು ಸಹ ವಿನಾಶದ ಅಂಚಿನಲ್ಲಿವೆ ಎಂದು ಸಲ್ಡಾನ್ಹಾ ತಿಳಿಸಿದರು.

ನಾಶವಾದ ಕೆರೆಗಳು
ದಕ್ಷಿಣ ಬೆಂಗಳೂರಿನ ಸುಬ್ರಹ್ಮಣ್ಯಪುರ ಕೆರೆಯ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಅದು ಮೋರಿಯಾಗಿ ಕುಸಿದಿದೆ ಮತ್ತು ಕಳೆಗಳಿಂದ ಕೊಚ್ಚಿಹೋಗಿದೆ ಎಂದಿದ್ದಾರೆ. ಕೇವಲ 15 ವರ್ಷಗಳ ಹಿಂದೆ ಜನರು ಅದರ ನೀರನ್ನು ಕುಡಿಯಲು ಬಳಸುತ್ತಿದ್ದರು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
"ವಿಪರ್ಯಾಸವೆಂದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸುಬ್ರಹ್ಮಣ್ಯಪುರ ಕೆರೆಯ ಮೇಲ್ಭಾಗದಲ್ಲಿರುವ 'ವೆಂಕಟರಾಯನ ಕೆರೆ' ಎಂಬ ಇನ್ನೊಂದು ಕೆರೆಯ ಮೇಲೆ ಲೇಔಟ್ ಅನ್ನು ಅಭಿವೃದ್ಧಿಪಡಿಸಿದೆ, ಆದರೆ ಪ್ರಬಲ ಬಿಲ್ಡರ್ ಸುಬ್ರಹ್ಮಣ್ಯಪುರ ಮತ್ತು ವೆಂಕಟರಾಯನ ಕೆರೆಗಳ ಫೀಡರ್ ಕಾಲುವೆಗಳ ಮೇಲೆ ಎರಡು ಬೃಹತ್ ವಸತಿ ಸಂಕೀರ್ಣಗಳನ್ನು ನಿರ್ಮಿಸಿದ್ದಾರೆ" ಸಲ್ಡಾನ್ಹಾ ಹೇಳಿಕೊಂಡಿದ್ದಾರೆ.

ತಗ್ಗು ಪ್ರದೇಶಗಳು ಜಲಾವೃತ
ಸಿಲಿಕಾನ್ ಸಿಟಿಯ ಪೂರ್ವ, ಪಶ್ಚಿಮ ಹಾಗೂ ಉತ್ತರ ದಿಕ್ಕಿನ ಬಹುತೇಕ ಕೆರೆಗಳು ಬೆಳ್ಳಂದೂರು, ವರ್ತೂರು ಕೆರೆ ಮಾರ್ಗವಾಗಿ ತಮಿಳುನಾಡಿನತ್ತ ಹರಿಯುತ್ತವೆ. ಅನೇಕ ಕೆರೆಗಳು ಒಳಚರಂಡಿ ಕೊಳಚೆ ಸೇರ್ಪಡೆಯಿಂದ ಸಂಪೂರ್ಣವಾಗಿ ಮಲಿನಗೊಂಡಿದ್ದು, ವರ್ಷ ಪೂರ್ತಿ ತುಂಬಿ ಹರಿಯುತ್ತಿವೆ. ಹೀಗಾಗಿ, ಜೋರು ಮಳೆ ಬಂದಾಗ ಆ ನೀರಿನ್ನೆಲ್ಲ ಒಡಲಲ್ಲಿ ತುಂಬಿಕೊಳ್ಳುವಷ್ಟು ಸಾಮರ್ಥ್ಯವನ್ನು ಕೆರೆಗಳು ಹೊಂದಿಲ್ಲ. ಬಿದ್ದ ನೀರು ನಿಲ್ಲದೆ ಹರಿದು ಹೋಗುತ್ತದೆ. ರಾಜಕಾಲುವೆಗಳೂ ಕಿರಿದಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಳ್ಳುವಂತಾಗಿದೆ.
-
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications