Bengaluru Infra Issue: ನಾನು ಭಾರತ ತೊರೆಯಬೇಕೆ? ಬೆಂಗಳೂರು ಉದ್ಯಮಿ ಪೋಸ್ಟ್ ವೈರಲ್
ಬೆಂಗಳೂರು, ಮೇ 07: ಉದ್ಯಾನ ನಗರಿ ಎಂದು ಹೆಸರಾದ ಬೆಂಗಳೂರು ಒಂದು ಕಾಲದಲ್ಲಿ ಅತ್ಯುತ್ತಮ, ಆಹ್ಲಾದಕರ ವಾತಾವರಣಕ್ಕೆ ಹೆಸರಾಗಿತ್ತು. ಆದರೆ ಇಂದು ನೀರಿನ ಸಮಸ್ಯೆ, ತೀವ್ರ ಬೇಸಿಗೆ ಎದುರಿಸುತ್ತಿದೆ. ಈ ಪರಿಸ್ಥಿತಿ ಟೀಕಿಸಿ ನಗರದ ಉದ್ಯಮಿಯೊಬ್ಬರು ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗಿದೆ. ಚರ್ಚೆ ಹುಟ್ಟು ಹಾಕಿದೆ.
ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಕೆಟ್ಟ ಹವಾಮಾನ, ಮೂಲಸೌಕರ್ಯಗಳ ಸಮಸ್ಯೆ ಕುರಿತು ವಾಣಿಜ್ಯೋದ್ಯಮಿ ಅನಂತ್ ಶರ್ಮಾ (Anant Sharma) ಅವರು ಟ್ವೀಟ್ (X) ಪೋಸ್ಟ್ ಮಾಡಿದ್ದಾರೆ. ಇದು ಬೆಂಗಳೂರಿನ ಸಮಸ್ಯೆಗಳ ಚರ್ಚೆಗೂ ಕಾರಣವಾಗಿದೆ. ಕೆಲವರು ಇದನ್ನು ಸಾಮಾನ್ಯ ವಿಷಯ ಎಂದು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನ ಈ ಕೆಟ್ಟ ಪರಿಸ್ಥಿತಿಯಿಂದ ಮುಕ್ತವಾಗಲು ನಗರ ತೊರೆಯಬೇಕೆ? ಮುಂಬೈ ಮತ್ತು ಪುಣೆ ನಗರಕ್ಕೆ ಸ್ಥಳಾಂತರವಾಗಲು ಯೋಗ್ಯವಾಗಿದೆಯೇ?. ಭಾರತ ತೊರೆಯಬೇಕೆ? ಎಂದು ಅವರು ಕೇಳಿದ್ದಾರೆ. ಈ ಮೂಲಕ ನಗರದ ಸ್ಥಿತಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಬೆಂಗಳೂರು ಇನ್ನಷ್ಟು ಹದಗೆಡಲಿದೆ
ರಾಜಧಾನಿ ಬೆಂಗಳೂರು ಮುಂದಿನ 5 ವರ್ಷಗಳಲ್ಲಿ ಕೆಟ್ಟ ವಾತಾವರಣ ಮತ್ತು ಕೆಟ್ಟ ನೀರಿನಿಂದ ಮತ್ತಷ್ಟು ಹಾಳಾಗಲಿದೆ. ನಾನು ಬೆಂಗಳೂರಿನಿಂದ ಸ್ಥಳಾಂತರವಾಗಬೇಕೆ? ಎಂದು ಟ್ವೀಟ್ ನಲ್ಲಿ ಕೇಳಿದ್ದಾರೆ.
ಶಾರ್ಮ ಅವರ ಟ್ವೀಟ್ ನೆಟ್ಟಿಗರಲ್ಲಿ ಚರ್ಚೆ ಸೃಷ್ಟಿಸಿದೆ. ಅವರ ಈ ಪೋಸ್ಟ್ಗೆ ಅನೇಕ ಕಾಮೆಂಟ್ಗಳು ಬಂದಿವೆ. ನಗರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬೆಂಗಳೂರಿನ ಸಮಸ್ಯೆಯನ್ನು ಕೆಲವು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವು ಇದರೊಂದಿಗೆ ಬದುಕು ನಿಭಾಯಿಸಲು ಆಗದಿದ್ದರೆ ಭಾರತ ಬಿಟ್ಟು ಹೊರ ಹೋಗುವ ಬಗ್ಗೆ ಯೋಚಿಸಿ ಎಂದಿದ್ದಾರೆ.
Bangalore looks like it's gonna go to the dogs in another 5 years with bad infra bad weather and bad water. Is Mumbai or Pune worth shifting to or should I just leave India?
— Anant (@AnantNoFilter) May 3, 2024
ಎಲ್ಲ ನಗರಳಂತೆ ಇಲ್ಲೂ ಅನೇಕ ಸಮಸ್ಯೆಗಳಿವೆ
ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಅಭಿವೃದ್ಧಿಯಂತಹ ಸಕಾರಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದರು. ಮತ್ತೊಬ್ಬರು ಕಾಮೆಂಟ್ ಮಾಡಿ, ಪ್ರತಿ ನಗರಗಳಲ್ಲೂ ಈ ರೀತಿಯ ಸಮಸ್ಯೆಗಳು ಇವೆ. ಇನ್ನೊಬ್ಬ ನೆಟ್ಟಿಗರು, ಇದೇನು ಹೊಸ ವಿಷಯವಲ್ಲ. ಸಾಮಾನ್ಯ ಸಂಗತಿಯಾಗಿದೆ. ಕೇವಲ ನೀರು, ಹವಾಮಾನ ಸಮಸ್ಯೆ ಮಾತ್ರವಲ್ಲ ಇಲ್ಲಿ ಇನ್ನೂ ಅನೇಕ ಸಮಸ್ಯೆಗಳು ಇವೆ. ಇಲ್ಲಿ ನಿಮಗೆ ಸರಿ ಹೊಂದದಿದ್ದರೆ, ಜಾಗ ಖಾಲಿ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.
ಕೆಲವರು ಸಮಸ್ಯೆಗಳನ್ನು ಕಂಡು ವಲಸೆ ನಗರ ಎಂದು ಭಾವಿಸುತ್ತಾರೆ. ವೋಟ್ ಬ್ಯಾಂಕ್ ರಾಜಕಾರಣ ಇರುವವರೆಗೂ ನಗರವನ್ನು ಬದಲಾಯಿಸಲು ಸಾಧ್ಯವಿಲ್ಲ. ಇಲ್ಲಿನ ಶೇಕಡಾ 80ರಷ್ಟು ಮತದಾರರು ನಗರದ ಮೂಲಭೂತ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸುತ್ತಾರೆ. ನಾವು ಸರ್ಕಾರವನ್ನು ಒತ್ತಾಯಿಸುವುದಿಲ್ಲ. ಹೀಗಾಗಿ ಸರ್ಕಾರವನ್ನು ದ್ವೇಷಿಸಿದರೆ ಉಪಯೋಗವಿಲ್ಲ ಎಂದು ರಾಜಕಾರಣಿಗಳ ಬಗ್ಗೆ ಮತ್ತೊಬ್ಬರು ಅಸಮಾಧಾನ ಹೊರ ಹಾಕಿದ್ದಾರೆ.
ಈ ಉದ್ಯಮಿಯ ಪೋಸ್ಟ್ಗೆ ಅನೇಕ ಮಂದಿ ಪ್ರತಿಕ್ರಿಯಿಸಿ ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಕೆಲವು ಕಾಮೆಂಟ್ ಗಳಿಗೆ ಅವರು ಕೂಲ್ ಆಗಿಯೇ ಉತ್ತರಿಸಿದ್ದಾರೆ. ಒಟ್ಟಾರೆ ಬೆಂಗಳೂರಿನ ಮೂಲಭೂರ್ತ ಸೌಕರ್ಯಗಳ ಬಗ್ಗೆ ಈ ಉದ್ಯಮಿ ಚರ್ಚೆ ಹುಟ್ಟುಹಾಕುವ ಮೂಲಕ ಸುದ್ದಿಯಾಗಿದ್ದಾರೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಸರ್ಕಾರಿ PU ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಬರೋಬ್ಬರಿ 9,383 ರೂ. ಲಕ್ಷ ಅನುದಾನ ಮಂಜೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ










Click it and Unblock the Notifications