Bengaluru-Ayodhya flight: ಬೆಂಗಳೂರು-ಅಯೋಧ್ಯೆ ನಡುವಿನ ವಿಮಾನಕ್ಕೆ ಹೆಚ್ಚಿದ ಬೇಡಿಕೆ, ದರ ಎಷ್ಟಿದೆ?-ಮಾಹಿತಿ, ವಿವರ
ಬೆಂಗಳೂರು, ಫೆಬ್ರವರಿ, 20: ಜನವರಿ 22ರಂದು ರಾಮ ಜನ್ಮಭೂಮಿ ದೇವಾಲಯದ ಉದ್ಘಾಟನೆಯ ನಂತರ ಬೆಂಗಳೂರು ಮತ್ತು ಅಯೋಧ್ಯೆ ನಡುವೆ ವಿಮಾನ ಪ್ರಯಾಣದ ಬೇಡಿಕೆ ಹೆಚ್ಚುತ್ತಲೇ ಇದೆ.
ಈ ಎರಡು ನಗರಗಳ ನಡುವೆ ಪೂರ್ಣ ಪ್ರಯಾಣಿಕರೊಂದಿಗೆ ವಿಮಾನಗಳು ಪ್ರಯಾಣಿಸುತ್ತುವೆ. ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಸ್ಪೈಸ್ಜೆಟ್ ಈ ಮಾರ್ಗದಲ್ಲಿ ಪ್ರತಿದಿನ ನೇರ ವಿಮಾನಗಳನ್ನು ನಿರ್ವಹಿಸುತ್ತಿವೆ . ಕಡಿಮೆ ಸಾಮರ್ಥ್ಯದ ಪ್ರಯಾಣಿಕರ ನಡುವೆಯೂ ಒಂದು ದಿನದ ವೇಳಾಪಟ್ಟಿಯನ್ನು ಬದಲಾಯಿಸಿಕೊಂಡಿಲ್ಲ ಎಂದು ಎರಡೂ ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ಟ್ರಾವೆಲ್ ಏಜೆನ್ಸಿಗಳು ಜನವರಿ 22ರ ಹಿಂದಿನ ಬೇಡಿಕೆಗೆ ಹೋಲಿಸಿದರೆ, ಅಯೋಧ್ಯೆಗೆ ಪ್ರಯಾಣಿಸುವವರ ಸಂಖ್ಯೆ 100%ರಷ್ಟು ಏರಿಕೆಯನ್ನು ಕಂಡಿವೆ. ಏಕಮುಖ ಪ್ರವಾಸಕ್ಕೆ 7,000 ರಿಂದ 11,000 ರೂಪಾಯಿಗಳ ದರವಿದ್ದರೂ, ಕೂಡ ಬೇಡಿಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
"ನಾವು ತೀರ್ಥಯಾತ್ರೆಗಳು ಮತ್ತು ಧಾರ್ಮಿಕ ಪ್ರವಾಸಗಳಲ್ಲಿ ಆಸಕ್ತಿ ಹೊಂದಿರುವ ಪ್ರಯಾಣಿಕರಿಂದ, ವಿಶೇಷವಾಗಿ ಉತ್ತಮ ಬೇಡಿಕೆಯನ್ನು ಗಮನಿಸಿದ್ದೇವೆ. ಈ ಒಂದು ಪ್ರಯಾಣವು ಸ್ಥಿರವಾದ ಬೆಳವಣಿಗೆಯನ್ನು ತೋರಿಸುತ್ತಿದೆ" ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಕ್ತಾರರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇನ್ನು ಜನವರಿ 17ರಂದು ಸೇವೆ ಪ್ರಾರಂಭಿಸಿದ ಈ ವಿಮಾನಯಾನ ಸಂಸ್ಥೆಯು ಹೆಚ್ಚಿನ ಪ್ರಯಾಣಿಕರನ್ನು ಹೊತ್ತೊಯ್ದಿದೆ ಎಂದು ಹೇಳಿದೆ.
"ನೇರ ವಿಮಾನಗಳ ಜೊತೆಗೆ, ನಮ್ಮ ಪ್ರಯಾಣಿಕರು ಲಕ್ನೋಗೆ ವಿಮಾನಗಳನ್ನು ಮತ್ತು ನಂತರ ಅಯೋಧ್ಯೆಗೆ ರಸ್ತೆ ಸಾರಿಗೆಯನ್ನು ಸಹ ಆಯ್ಕೆ ಮಾಡಿಕೊಳ್ಳುತ್ತುದ್ದಾರೆ. ಗಮನಾರ್ಹ ಸಂಗತಿಯೆಂದರೆ, ಬೇಡಿಕೆಯು ಈಗ ಸಾಂಪ್ರದಾಯಿಕವಾಗಿ ಹಿರಿಯರ ವಿಭಾಗಕ್ಕೆ ಸೀಮಿತವಾಗಿಲ್ಲ, ಏಕೆಂದರೆ ನಾವು ಬದಲಾವಣೆಗೆ ಸಾಕ್ಷಿಯಾಗುತ್ತಿದ್ದೇವೆ. ಜೆನ್ ಝಡ್ ಮತ್ತು ಬೆಂಗಳೂರಿನ ಯುವ ಸಹಸ್ರಮಾನದ ಉದ್ಯೋಗಿಗಳ ಆಸಕ್ತಿಯಿಂದ ಹೊರಹೊಮ್ಮುತ್ತಿದೆ," ಎಂದು ಥಾಮಸ್ ಕುಕ್ (ಇಂಡಿಯಾ) ಲಿಮಿಟೆಡ್ನ ಅಧ್ಯಕ್ಷ ಮುಖ್ಯಸ್ಥ ರಾಜೀವ್ ಕಾಳೆ ಹೇಳಿದರು.
ಇನ್ನು ಇತರ ನಗರಗಳಾದ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಬೆಳಗಾವಿ ಮಾರ್ಗಗಳಿಂದಲೂ ಸಹ ಸೇವೆ ಒದಗಿಸಲು ಯೋಜಿಸಲಾಗುತ್ತಿದೆ. ಇನ್ನು ಹಂಪಿ, ರಾಮೇಶ್ವರಂ ಮತ್ತು ಮಧುರೈ ಸೇರಿದಂತೆ ಭಗವಾನ್ ರಾಮನ ಜೀವನಕ್ಕೆ ಸಂಬಂಧಿಸಿದ ಸ್ಥಳಗಳನ್ನು ಅನ್ವೇಷಿಸಲು ಈಗ ಉತ್ಸುಕರಾಗಿರುವ ಗ್ರಾಹಕರಲ್ಲಿ ಪ್ರವೃತ್ತಿಯನ್ನು ಅವರು ಗಮನಿಸುತ್ತಿದ್ದಾರೆ ಎಂದು ಎಸ್ಒಟಿಸಿ ಟ್ರಾವೆಲ್ನ ಅಧ್ಯಕ್ಷ ಡೇನಿಯಲ್ ಡಿಸೋಜಾ ಹೇಳಿದರು.
"ದೇವಾಲಯ ಪ್ರವಾಸೋದ್ಯಮವು ಅಭಿವೃದ್ಧಿಯನ್ನು ಕಾಣುತ್ತಿದೆ. ಆದ್ದರಿಂದ, ರಾಮ ಮಂದಿರವನ್ನು ಅನ್ವೇಷಿಸುವುದರೆ ಜೊತೆಗೆ, ನಾವು ರಾಮಾಯಣದ ಹಾದಿ, ಸೂರ್ಯೋದಯ ಯೋಗ ಅವಧಿಗಳು, ಗಮ್ಯಸ್ಥಾನದಲ್ಲಿನ ಗುಪ್ತ ರತ್ನಗಳ ಅನ್ವೇಷಣೆ, ಸ್ಥಳೀಯ ಕುಶಲಕರ್ಮಿಗಳೊಂದಿಗೆ ತೊಡಗಿಸಿಕೊಳ್ಳುವುದು ಮತ್ತು ಇತರ ಅಂಶಗಳನ್ನು ಸಂಯೋಜಿಸಿದ್ದೇವೆ," ಎಂದು ಅವರು ಹೇಳಿದರು.












Click it and Unblock the Notifications