ಬೇಗೂರು ಕೆರೆ: 81 ಒತ್ತುವರಿ ಪೈಕಿ 33 ತೆರವು!
ಬೆಂಗಳೂರು, ಸೆ.2: ನಗರದ ದಕ್ಷಿಣ ಭಾಗ ಬೇಗೂರು ಹೋಬಳಿಯ ಕೆರೆ ಪ್ರದೇಶದಲ್ಲಿ ಒತ್ತುವರಿ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದ್ದು, ಒಟ್ಟು 81 ಒತ್ತುವರಿ ಪತ್ತೆಯಾಗಿದ್ದು, ಆ ಪೈಕಿ ಈಗಾಗಲೇ 33 ಒತ್ತುವರಿ ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಅಲ್ಲದೆ, ಉಳಿದ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಬೆಂಗಳೂರಿನ ಕೆರೆಗಳ ನಿರ್ವಹಣೆ ಹಾಗೂ ಸಂರಕ್ಷಣೆಗೆ ಸಂಬಂಧ ಸಲ್ಲಿಕೆಯಾಗಿದ್ದ 2014ರಲ್ಲಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಿಬಿಎಂಪಿ ವಕೀಲರು, ಬೇಗೂರು ಮತ್ತು ಸುಬ್ರಹ್ಮಣ್ಯಪುರ ಕೆರೆಗಳ ನಿರ್ವಹಣೆ ಉಸ್ತುವಾರಿ ಹೊತ್ತಿರುವ ಬಿಬಿಎಂಪಿ ದಕ್ಷಿಣ ವಲಯ ಕಾರ್ಯ ನಿರ್ವಾಹಕ ಎಂಜಿನಿಯರ್ ಪರವಾಗಿ ಪ್ರಮಾಣಪತ್ರ ಸಲ್ಲಿಸಿಸಿದರು. ಆ ಪ್ರಮಾಣ ಪತ್ರವನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಬೆಂಗಳೂರು ಮಂದಿಗೆ ಕುಡಿಯುವುದಕ್ಕೆ ಯಾವ ಕೆರೆಯ ನೀರು ಬೆಸ್ಟ್?
ಸರ್ವೇ ಕಾರ್ಯ ಪೂರ್ಣ: ಹೈಕೋರ್ಟ್ ನಿರ್ದೇಶನದಂತೆ ಬೇಗೂರು ಕೆರೆ ಪ್ರದೇಶದ ಸರ್ವೇ ನಡೆಸಲಾಗಿದೆ. ಜುಲೈ 26ರಂದು ಸರ್ವೇ ಪೂರ್ಣಗೊಂಡಿದ್ದು, ಒಟ್ಟು 81 ಒತ್ತುವರಿ ಪತ್ತೆಯಾಗಿವೆ. ಬಳಿಕ ಎಲ್ಲಾ ಒತ್ತುವರಿದಾರರಿಗೆ ಜುಲೈ 27ರಂದು ನೋಟಿಸ್ ಜಾರಿಗೊಳಿಸಲಾಗಿದೆ. 81 ಒತ್ತುವರಿಗಳ ಪೈಕಿ ಈಗಾಗಲೇ 33 ಒತ್ತುವರಿ ತೆರವುಗೊಳಿಸಲಾಗಿದೆ.
ಉಳಿದ
45
ಒತ್ತುವರಿದಾರರು
ಒತ್ತುವರಿ
ತೆರವಿಗೆ
ಸಿವಿಲ್
ಕೋರ್ಟ್ನಿಂದ
ಪ್ರತಿಬಂಧಕಾಜ್ಞೆ
ಪಡೆದುಕೊಂಡಿದ್ದಾರೆ.
ಒತ್ತುವರಿದಾರರ
ಅರ್ಜಿಗಳಿಗೆ
ಈಗಾಗಲೇ
ಆಕ್ಷೇಪಣೆ
ಸಲ್ಲಿಸಲಾಗಿದೆ.
ಅರ್ಜಿಗಳು
ಸೆ.3ರಂದು
ವಿಚಾರಣೆಗೆ
ಬರಲಿದೆ
ಎಂದು
ಪ್ರಮಾಣ
ಪತ್ರದಲ್ಲಿ
ತಿಳಿಸಲಾಗಿದೆ.
ಅಲ್ಲದೇ,
ಒತ್ತುವರಿವೊಂದಕ್ಕೆ
ಸಂಬಂಧಿಸಿದ
ವ್ಯಾಜ್ಯವು
ಹೈಕೋರ್ಟ್ನಲ್ಲಿ
ವಿಚಾರಣೆಗೆ
ಬಾಕಿಯಿದೆ.
ಇನ್ನೂ
ಬೇಗೂರು
ಕೆರೆ
ಪ್ರದೇಶದಲ್ಲಿ
ಅರಳಿ
ಮರವಿದ್ದು,
ಅದರ
ಸುತ್ತ
ಕಲ್ಲಿನ
ಕಟ್ಟೆ
ನಿರ್ಮಿಸಲಾಗಿದೆ.
ಸಮೀಪದಲ್ಲಿ
ದೇವಸ್ಥಾನದಲ್ಲಿದೆ.
ಹಲವು
ವರ್ಷಗಳಿಂದ
ಕಾಲದಿಂದಲೂ
ಈ
ಎರಡೂ
ಇವೆ.
ನಿರ್ದಿಷ್ಟವಾಗಿ
ಯಾವಾಗಿಂದ
ಇವು
ಇವೆ
ಎಂಬ
ಬಗ್ಗೆ
ಕಂದಾಯ
ಇಲಾಖೆಯಿಂದ
ಮಾಹಿತಿ
ಕೋರಲಾಗಿದೆ.
ಅನಧಿಕೃತ ಒತ್ತುವರಿ ತೆರವುಗೊಳಿಸಿದ ನಂತರವೇ ಅದನ್ನು ವಶಕ್ಕೆ ಪಡೆದು ತಂತಿ ಬೇಲಿ ಅಳವಡಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದು, ಒತ್ತುವರಿ ತೆರವು ಕಾರ್ಯಾಚರಣೆ ಮತ್ತು ತಂತಿ ಬೇಲಿ ಅಳವಡಿಸಿರುವುದಕ್ಕೆ ಸಂಬಂಧಿಸಿದ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಅರಕೆರೆಯ ಬಫರ್ ಜೋನ್ನಲ್ಲಿ ಹೆಬಿಟೆಟ್ ಹೆಸರಿನಲ್ಲಿ ವಸತಿ ಸಮುಚ್ಛಯ ನಿರ್ಮಿಸಲಾಗಿದೆ. ಆ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ದಕ್ಷಿಣ ವಲಯದ ಜಂಟಿ ನಿರ್ದೇಶಕ (ನಗರ ಯೋಜನೆ) ನಕ್ಷೆ ಮಂಜೂರಾತಿ ಮಾಡಲಾಗಿದೆ. ಸರ್ವೇ ಮಾಡಿ ಬಫರ್ ಜೋನ್ ಬಗ್ಗೆ ಮಾಹಿತಿ ನೀಡುವಂತೆ ಜಂಟಿ ನಿರ್ದೇಶಕರಿಗೆ ಕೋರಲಾಗಿದೆ. ಕನ್ನಹಳ್ಳಿ ಕೆರೆ ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿದೆ. ಸರ್ಕಾರ ಇತ್ತೀಚೆಗಷ್ಟೆ ಅಭಿವೃದ್ಧಿಗಾಗಿ ಆ ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿದೆ.