ಗೋಹತ್ಯೆ ಮಾಡುವುದು ಕೆಂಪೇಗೌಡರನ್ನು ಅವಮಾನಿಸಿದಂತೆ
ಅನೇಕ ಧನಾತ್ಮಕ ವಿಚಾರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ, ಕೆಂಪೇಗೌಡರ ನಾಡು ಬೆಂಗಳೂರು ನಗರವೀಗ ಗೋಹತ್ಯೆ, ಗೋಮಾಂಸ ಭಕ್ಷಣೆಯಂತಹ ಹಿಂಸಾತ್ಮಕ ಕಾರ್ಯಗಳಿಗೆ ಸುದ್ಧಿಯಾಗುತ್ತಿರುವುದು ದುಃಖದ ಸಂಗತಿ.
ಪ್ರಪಂಚದ ಭೂಪಟದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವ ನಗರ ಬೆಂಗಳೂರು, ಐಟಿ-ಬಿಟಿ ಸೇರಿದಂತೆ ಅನೇಕ ಧನಾತ್ಮಕ ವಿಚಾರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಗರವೀಗ ಗೋಹತ್ಯೆ, ಗೋಮಾಂಸ ಭಕ್ಷಣೆಯಂತಹ ಹಿಂಸಾತ್ಮಕ ಕಾರ್ಯಗಳಿಗೆ ಸುದ್ಧಿಯಾಗುತ್ತಿರುವುದು ಮಾತ್ರ ದುಃಖದ ಸಂಗತಿ.
ಕೆಂಪೇಗೌಡರು ಗೋವಿನ ಮೂಲಕ ನಿರ್ಮಿಸಿದ ಬೆಂಗಳೂರು ನಗರದಲ್ಲಿ ಗೋಮಾಂಸ ಭಕ್ಷಣೆಯನ್ನು ವೈಭವೀಕರಿಸುವ, ಗೋಮಾಂಸ ಭಕ್ಷಣೆಗೆ ಪ್ರಚೋದನೆ ನೀಡುವ Beef Festಗಳು ಆಯೋಜನೆಗೊಳ್ಳುತ್ತಿರುವುದು ಗೋಪ್ರೇಮಿಗಳ ಮನನೋಯಿಸುವ ಕಾರ್ಯ ಮಾತ್ರ ಆಗಿರದೇ, ನಾಡಪ್ರಭು ಕೆಂಪೇಗೌಡರನ್ನು ಅವಮಾನಿಸುವ ಕಾರ್ಯವೂ ಹೌದು! [ಬೀಫ್ ಫೆಸ್ಟ್, ಕವಯಿತ್ರಿಗೆ ಮುಸ್ಲಿಂರಿಂದಲೇ ಮಂಗಳಾರತಿ]

ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರು ಎಂಬುದು ಸರ್ವವಿಧಿತವಾದರೂ, ಇತಿಹಾಸದ ಪುಟವನ್ನು ತಿರುವಿ ನೋಡಿದಾಗ "ನಮ್ಮ ಬೆಂಗಳೂರು ಉದಯವಾದದ್ದು ಗೋವಿನಿಂದ" ಎಂಬ ಮಹತ್ತರ ವಿಚಾರವನ್ನು ಕಾಣಬಹುದಾಗಿದೆ.
ಕ್ರಿ.ಶ 1537 ರಲ್ಲಿ ನಾಡಪ್ರಭು ಕೆಂಪೇಗೌಡರು ಗೋವಿಗೆ ಹೊನ್ನಾರು ಕಟ್ಟುವ ಆಚರಣೆಯಿಂದ ಬೆಂಗಳೂರು ನಗರದ ನಿರ್ಮಾಣಕ್ಕೆ ಚಾಲನೆ ನೀಡಿದರು ಮಾತ್ರವಲ್ಲ, ನಾಲ್ಕು ಜೋಡಿ ಎತ್ತುಗಳಿಗೆ ಹೊನ್ನಾರು ಕಟ್ಟಿ ದೊಡ್ಡಪೇಟೆ, ಚಿಕ್ಕಪೇಟೆ ರಸ್ತೆಗಳು ಸಂಧಿಸುವ ಪ್ರದೇಶದಿಂದ ನಾಲ್ಕು ದಿಕ್ಕುಗಳಿಗೆ ಸಾಗುವಂತೆ ಆಜ್ಞೆ ಮಾಡುತ್ತಾರೆ.[ಬೀಫ್ ಫೆಸ್ಟಿವಲ್ ಗೆ ಅನುಮತಿ ನೀಡಿಲ್ಲ: ಬೆಂಗಳೂರು ಪೊಲೀಸ್]
ಅವುಗಳು ನಿಲ್ಲುವ ಜಾಗವನ್ನು ಗುರುತಿಸಿ, ಅಲ್ಲಿಯವರೆಗೆ ಬೆಂಗಳೂರು ನಗರವನ್ನಾಗಿಸುವ ಸಂಕಲ್ಪ ಮಾಡುತ್ತಾರೆ. ಹೀಗೆ ನಾಲ್ಕು ದಿಕ್ಕಿಗೆ ಸಾಗಿದ ಎತ್ತುಗಳು ಪೂರ್ವಕ್ಕೆ ಹಲಸೂರು ಬಾಗಿಲು, ಪಶ್ಚಿಮಕ್ಕೆ ಅರಳೇ ಪೇಟೆ, ಉತ್ತರದಲ್ಲಿ ಯಲಹಂಕ ಹಾಗೂ ದಕ್ಷಿಣದಲ್ಲಿ ಆನೇಕಲ್ ವರೆಗೆ ಸಾಗಿ ನಿಂತವು.
ಅವುಗಳನ್ನೇ ಬೆಂಗಳೂರು ನಗರದ ಗಡಿಯನ್ನಾಗಿಸಿ, ನಗರಕ್ಕೆ ಕೋಟೆ ಕಟ್ಟಲಾಯಿತು. ಹೀಗೆ ಗೋವಿನಿಂದ ಬೆಂಗಳೂರಿನ ಉದಯವಾಯಿತು! ನಾಡಪ್ರಭು ಕೆಂಪೇಗೌಡರಿಗೆ ಗೋವಿನ ಕುರಿತಾಗಿ ಇದ್ದ ಪೂಜ್ಯ ಭಾವ ಇತಿಹಾಸದಲ್ಲಿ ದಾಖಲಾಯಿತು.
ಹಾಗೆಯೇ, ಪ್ರಪಂಚದಲ್ಲಿಯೇ ಅತಿದೊಡ್ಡ ಬಸವನ ಮೂರ್ತಿಯಾದ ನಮ್ಮ ಬೆಂಗಳೂರಿನ 'ದೊಡ್ದ ಬಸವ' ನಗರ ನಿರ್ಮಾತೃ ಕೆಂಪೇಗೌಡರಿಂದಲೇ ಸ್ಥಾಪಿತವಾಗಿದ್ದು, ಬಸವನ ಆ ದೊಡ್ಡ ಮೂರ್ತಿಯೇ ಕೆಂಪೇಗೌಡರಿಗೆ ಗೋಸಂತತಿಯ ಮೇಲಿದ್ದ ಭಾವವನ್ನು ಸೂಚಿಸುತ್ತದೆ. [ಪುಣ್ಯಕೋಟಿ ಭಕ್ಷಕರನ್ನು ಹುರಿದು ಬೆಂಡೆತ್ತಿದ ಟ್ವಿಟ್ಟಿಗರು]
ಈ ಕಾರಣಗಳಿಂದಾಗಿ, ಗೋಮಾಂಸ ಆರೋಗ್ಯಕ್ಕೆ ಮಾರಕ, ಗವ್ಯೋತ್ಪನ್ನಗಳು ಆರೋಗ್ಯಕ್ಕೆ ಪೂರಕ ಎಂಬ ವೈಜ್ಞಾನಿಕ ಅಂಶಗಳನ್ನು ಪಕ್ಕಕ್ಕಿಟ್ಟು ನೋಡಿದರೂ, ಬೆಂಗಳೂರಿನ ಮಟ್ಟಿಗಂತೂ ಗೋಹತ್ಯೆ - ಗೋಮಾಂಸ ಭಕ್ಷಣೆ ಸರ್ವಥಾ ನಿಷಿದ್ಧವೇ ಸರಿ.
ನಾಡಿನ ಜನತೆಯ ಕ್ಷೇಮಕ್ಕಾಗಿ ಸೊಸೆಯನ್ನೇ ಬಲಿದಾನನೀಡಿ ಬೆಂಗಳೂರನ್ನು ಕಟ್ಟಿದವರು ಕೆಂಪೇಗೌಡರು! Beef Fest ಗಳನ್ನು ಆಯೋಜಿಸುವ ಮೂಲಕ ಅಂತಹ ಕೆಂಪೇಗೌಡರ ಭಾವನೆಯನ್ನೇ ಬಲಿಕೊಟ್ಟರೆ..?
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು?












Click it and Unblock the Notifications