ಗೋಮಾಂಸ ಭಕ್ಷಕರ ವಿರುದ್ಧ ಟ್ವಿಟ್ಟಿಗರ ತೀವ್ರ ಆಕ್ಷೇಪ
ಕಣ್ಣೂರಿನಲ್ಲಿ ಪ್ರತಿಭಟನೆಯ ವೇಳೆ ದನವನ್ನು ಹತ್ಯೆಗೈದು ಮಾಂಸವನ್ನು ಹಂಚಿದ ಯುವ ಕಾಂಗ್ರೆಸ್ ಮುಖಂಡರ ಕ್ರಮ ವ್ಯಾಪಕ ಟೀಕೆಗೊಳಗಾಗಿದೆ.
ದೇವರನಾಡು ಕೇರಳದ ಕಣ್ಣೂರಿನಲ್ಲಿ ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವುದನ್ನು ಪ್ರತಿಭಟಿಸುವ ವೇಳೆ, ದನವನ್ನು ಹತ್ಯೆಗೈದು ಮಾಂಸವನ್ನು ಹಂಚಿದ ಯುವ ಕಾಂಗ್ರೆಸ್ ಮುಖಂಡರ ಕ್ರಮ ವ್ಯಾಪಕ ಟೀಕೆಗೊಳಗಾಗಿದೆ.
ಗೋಹತ್ಯೆ ನಿಷೇಧವಿಲ್ಲದ ರಾಜ್ಯಗಳಲ್ಲಿ ಕೇರಳ ಕೂಡ ಒಂದಾಗಿದ್ದರೂ, ಪ್ರತಿಭಟನೆಯ ನೆಪದಲ್ಲಿ ಅನಾಗರೀಕರಂತೆ ವರ್ತಿಸಿದ ಕಾಂಗ್ರೆಸ್ ಯುವ ಮುಖಂಡರನ್ನು ಟ್ವಿಟ್ಟಿಗರು ಹಿಗ್ಗಾಮುಗ್ಗ ಜಾಲಾಡಿಸುತ್ತಿದ್ದಾರೆ. (ಬೀಫ್ ಫೆಸ್ಟಿವಲ್ ವಿರುದ್ಧ ಗೋರಕ್ಷಕರ ಪ್ರತಿಭಟನೆ)
ಖುದ್ದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ತಮ್ಮ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಶೈಲಿಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಆದರೆ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ನಾವು ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವ ಪಾಠವನ್ನು ದೆಹಲಿ ಅಥವಾ ನಾಗಪುರದಿಂದ ಕಲಿಯಬೇಕಾಗಿಲ್ಲ ಎನ್ನುವ ಮೂಲಕ ಕಣ್ಣೂರಿನ ಘಟನೆಯನ್ನು ಸಮರ್ಥಿಸಿಕೊಂಡಂತೆ ಹೇಳಿಕೆ ನೀಡಿದ್ದಾರೆ.
#StopBeefFest ಮತ್ತು #Congress ಹ್ಯಾಷ್ ಟ್ಯಾಗ್ ನಲ್ಲಿ ಟ್ವಿಟ್ಟಿಗರು ಯುವ ಕಾಂಗ್ರೆಸ್ ಮತ್ತು ಕಣ್ಣೂರಿನಲ್ಲಿ ನಡೆದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ಕೆಲವೊಂದು ಸ್ಯಾಂಪಲ್..
|
ಬೀಫ್ ಫೆಸ್ಟ್ ಗೆ ಅವಕಾಶ ನೀಡಬಾರದು
ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಬೀಫ್ ಫೆಸ್ಟ್ ನಡೆಯಲು ಅವಕಾಶ ನೀಡಬಾರದು. ಪುಣ್ಯಕೋಟಿಯ ಮೇಲೆ ಇದೆಂಥಾ ನಾಚಿಕೆಗೇಡಿನ ಕ್ರಮ.
|
ಕೇರಳದಲ್ಲಿ ನಡೆದದ್ದು ಇಲ್ಲಿ ನಡೆಯಬಾರದು
ನಮ್ಮ ದೇಶ ಬೀಫ್ ಫೆಸ್ಟ್ ವಿರೋಧಿಸುತ್ತದೆ. ಕೇರಳದಲ್ಲಿ ನಡೆದ ದೇಶದ ಇತರ ಭಾಗಗಳಲ್ಲಿ ನಡೆಯಬಾರದು.
|
ದೇವರ ನಾಡು, ದೆವ್ವಗಳ ನಾಡಾಗಿದೆ
ದೇವರ ನಾಡು, ದೆವ್ವಗಳ ನಾಡಾಗಿದೆ, ನಮ್ಮ ಬೆಂಗಳೂರು ನಿಮ್ಮ ಕ್ರೂರತೆ ತೋರಿಸುವ ನಗರವಲ್ಲ.
|
ಮುಂದೆ ಮನುಷ್ಯರನ್ನೂ ಕೊಲ್ಲುತ್ತಾರೆ
ಇವತ್ತು ದನವನ್ನು ಕೊಲ್ಲುವವರು ನಾಳೆ ಮನುಷ್ಯನನ್ನೂ ಕೊಲ್ಲುತ್ತಾರೆ.
|
ಬೆಂಗಳೂರು ಪೊಲೀಸರು ಮಧ್ಯಪ್ರವೇಶಿಸಬೇಕು
ದಯವಿಟ್ಟು ಬೆಂಗಳೂರು ಪೊಲೀಸರು ಈ ಕಾರ್ಯಕ್ರಮವನ್ನು ತಡೆಹಿಡಿಯಿರಿ, ನಮ್ಮ ಬೆಂಗಳೂರಿನಲ್ಲಿ ಇಂತಹಾ ಕ್ರೂರ ಘಟನೆ ನಡೆಯುವುದು ಬೇಡ.
|
ಮೋದಿಯವರನ್ನು ವಿರೋಧಿಸುವ ಸಲುವಾಗಿ ದನ ಸಾಯಿಸಬೇಡಿ
ಮೋದಿಯವರನ್ನು ವಿರೋಧಿಸ ಬೇಕು ಎನ್ನುವ ಕಾರಣಕ್ಕಾಗಿ ಇಂತಹ ಕಾರ್ಯಕ್ರಮವನ್ನು ಬೆಂಗಳೂರಿಗೆ ತರಬೇಡಿ.
|
ಕರ್ನಾಟಕದಲ್ಲಿ ಇಂತಹ ಘಟನೆ ನಡೆಯಲು ಬಿಡುವುದಿಲ್ಲ
ನಮ್ಮ ಕಣ್ಣಮುಂದೆ ಇಂತಹ ಯಾವುದೇ ಘಟನೆ ನಡೆಯಲು ಬಿಡುವುದಿಲ್ಲ. ಕೇರಳದಲ್ಲಿ ನಡೆದ ಘಟನೆ ಕರ್ನಾಟಕದಲ್ಲಿ ನಡೆಯಲು ಬಿಡುವುದಿಲ್ಲ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications