ಬಿಬಿಎಂಪಿ ಮಾರ್ಗಸೂಚಿ: ಬೆಂಗಳೂರಿನಲ್ಲಿ ಹೇಗಿರಬೇಕು ಗಣೇಶ ಚತುರ್ಥಿ ಹಬ್ಬ?
ಬೆಂಗಳೂರು, ಆಗಸ್ಟ್ 20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಹಾಗೂ ಪಾಲಿಕೆ ವತಿಯಿಂದ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಯಿತು.
ಸಿಲಿಕಾನ್ ಸಿಟಿಯಲ್ಲಿ ಗಣೇಶ ಹಬ್ಬದ ಹಿನ್ನೆಲೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾಲಿಕೆ 63 ಉಪ ವಿಭಾಗ ಕಛೇರಿಗಳಲ್ಲಿ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಗಣೇಶ ಹಬ್ಬ ಸನಿಹ: ಆಚರಣೆ ಬಗ್ಗೆ ಬಿಬಿಎಂಪಿ ಸಷ್ಟತೆ ನೀಡಲಿ, ಉತ್ಸವ ಸಮಿತಿಗಳ ನಡೆ ಏನು?
ಪ್ರತಿ ವರ್ಷದಂತೆ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ನಗರದ ಕೇಂದ್ರ ಭಾಗದಲ್ಲಿರುವ ಸ್ಯಾಂಕಿ, ಹಲಸೂರು, ಯಡಿಯೂರು, ಹೆಬ್ಬಾಳ ಕೆರೆ ಹಾಗೂ ಇತರೆ ಪ್ರಮುಖ ಕೆರೆ ಹಾಗೂ ಕಲ್ಯಾಣಿಗಳಲ್ಲಿ ಕೂಡಾ ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ.
ಗಣೇಶ ಮೂರ್ತಿ ವಿಸರ್ಜನೆಗೆ ಮೊಬೈಲ್ ಟ್ಯಾಂಕ್ ವ್ಯವಸ್ಥೆ
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕೆರೆಗಳು ವಸತಿ ಪ್ರದೇಶದಿಂದ ದೂರವಿರುತ್ತದೆ. ಸಾರ್ವಜನಿಕರು ಚಿಕ್ಕಚಿಕ್ಕ ಮೂರ್ತಿಗಳನ್ನು ವಿಸರ್ಜನೆ ಮಾಡುವುದಕ್ಕಾಗಿ ಪ್ರತಿ ವಲಯಗಳ ಪ್ರಮುಖ ಸ್ಥಳ/ ಜಂಕ್ಷನ್ ಮತ್ತು ಅವಶ್ಯಕತೆ ಇರುವ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಬಿಎಂಪಿಯು ವಾರ್ಡ್ ವಾರು ಸಂಚಾರಿ ವಿಸರ್ಜನಾ ಘಟಕ(ಮೊಬೈಲ್ ಟ್ಯಾಂಕ್)ಗಳನ್ನು ಹಾಗೂ ತಾತ್ಕಾಲಿಕ ಟ್ಯಾಂಕ್ಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ.
ಮೂರ್ತಿ ವಿಸರ್ಜನೆ ಕಡೆಗಳಲ್ಲಿ ಹೇಗಿರುತ್ತೆ ಭದ್ರತೆ?
ಗಣೇಶ ಮೂರ್ತಿ ವಿಸರ್ಜನೆಗೆ ಗುರುತಿಸಿರುವ ಕೆರೆಗಳ ಸುತ್ತಮುತ್ತ ಹಾಗೂ ಕಲ್ಯಾಣಿ ಆವರಣದಲ್ಲಿ ವ್ಯವಸ್ಥಿತ ಬ್ಯಾರಿಕೇಡಿಂಗ್ಗಳನ್ನು ಹಾಕಲಾಗುತ್ತದೆ. ಪ್ರತಿಯೊಂದು ವಿಸರ್ಜನಾ ಕೇಂದ್ರಗಳಲ್ಲೂ ಪಾಳಿಯೊಂದರಲ್ಲಿ 10 ಮಂದಿ ನುರಿತ ಈಜುಗಾರರನ್ನು ಮತ್ತು ಅಗತ್ಯ ಸಿಬ್ಬಂದಿ ವರ್ಗದವರನ್ನು ನೇಮಿಸಲಾಗುತ್ತದೆ. ಅಲ್ಲದೆ ಆಯಾ ಸ್ಥಳಗಳಲ್ಲಿ ಸೂಕ್ತ ಧ್ವನಿವರ್ಧಕಗಳನ್ನು ಅಳವಡಿಸಿ ಜಾಗೃತಿ ಸಂದೇಶದ ಮೂಲಕ ಅರಿವು ಮೂಡಿಸಲಾಗುತ್ತದೆ. ಅಗತ್ಯವಾದ ವಿದ್ಯುತ್ ದ್ವೀಪಗಳ ಸೌಲಭ್ಯಗಳನ್ನು ತಪ್ಪದೇ ಅಳವಡಿಸಲು ಸೂಚನೆ ನೀಡಲಾಗಿದೆ.
ತ್ಯಾಜ್ಯ ವಿಲೇವಾರಿಗೆ ಶಿಸ್ತುಕ್ರಮ
ವಿಸರ್ಜನಾ
ಕೇಂದ್ರಗಳಲ್ಲಿ
ಸಂಗ್ರಹವಾಗುವ
ಪೂಜಾ
ಸಾಮಗ್ರಿಗಳಾದ
ಹೂವು,
ಬಾಳೆಯ
ಕಂದು,
ತಳಿರು
ತೋರಣ,
ಮತ್ತಿತರ
ತ್ಯಾಜ್ಯ
ವಸ್ತುಗಳನ್ನು
ಸಂಗ್ರಹಿಸಿ
ನಿಗದಿತ
ಕಂಟೈನರ್ಗಳ
ಮೂಲಕ
ತೆರವುಗೊಳಿಸಲು
ಅಗತ್ಯ
ಸ್ವಚ್ಛತಾ
ಸಿಬ್ಬಂದಿ
ಹಾಗೂ
ಸಾಗಣೆ
ವಾಹನಗಳನ್ನು
ಸಜ್ಜುಗೊಳಿಸಲು
ತಿಳಿಸಲಾಗಿದೆ.
ಮೂರ್ತಿಗಳ
ವಿಸರ್ಜನೆಗೆ
ಅನುಕೂಲವಾಗುವಂತೆ
ಅಗತ್ಯವಿದ್ದಲ್ಲಿ
ದೋಣಿಗಳ
ವ್ಯವಸ್ಥೆ,
ನೀರೆತ್ತುವ
ಪಂಪ್ಗಳ
ವ್ಯವಸ್ಥೆ,
ಕ್ರೇನ್ಗಳ
ವ್ಯವಸ್ಥೆಗಳನ್ನು
ಕೂಡ
ಸಿದ್ದಪಡಿಸಿರಬೇಕು.
ಜೊತೆಗೆ
ಪೊಲೀಸ್
ಬಂದೋಬಸ್ತ್
ವ್ಯವಸ್ಥೆಗೆ
ಸೂಕ್ತ
ಏರ್ಪಾಡುಗಳನ್ನು
ಮಾಡಿಕೊಳ್ಳಲು
ಸೂಚಿಸಲಾಗಿದೆ.
ವಿಸರ್ಜನಾ
ಮೆರವಣಿಗೆ
ಕೊಂಡೊಯ್ಯುವ
ವೇಳೆ
ಪಟಾಕಿ,
ಸಿಡಿಮದ್ದು
ಸಿಡಿಸುವುದು
ಹಾಗೂ
ನಾಗರಿಕರಿಗೆ
ತೊಂದರೆಯಾಗದಂತೆ
ಕಡ್ಡಾಯವಾಗಿ
ಅಗತ್ಯಕ್ರಮ
ಕೈಗೊಳ್ಳಲಾಗುತ್ತದೆ.
ನಿಗದಿತ ಪ್ರದೇಶಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ
ಬಿಬಿಎಂಪಿ
ವ್ಯಾಪ್ತಿಯ
ಕೆರೆಗಳು
ಕಲುಷಿತಗೊಳ್ಳದಂತೆ
ತಡೆಗಟ್ಟಲು
ಗಣೇಶ
ವಿಸರ್ಜನೆಗೆ
ಪರ್ಯಾಯ
ವ್ಯವಸ್ಥೆ
ಕಲ್ಪಿಸಲಾಗಿದೆ.
ಸಾರ್ವಜನಿಕರಿಗೆ
ನಿಗದಿ
ಪಡಿಸಿದ
ಸ್ಥಳಗಳಲ್ಲೇ
ಗಣೇಶ
ಮೂರ್ತಿ
ವಿಸರ್ಜಿಸಬೇಕೆಂದು
ಹಾಗೂ
ಬಣ್ಣದ,
ಪಿಒಪಿ
ಗಣಪತಿ
ಮೂರ್ತಿಗಳನ್ನು
ಪ್ರತಿಷ್ಠಾಪಿಸುವುದನ್ನು
ನಿಲ್ಲಿಸಿ
ಪರಿಸರ
ಸ್ನೇಹಿ
ಮೂರ್ತಿಗಳನ್ನು
ಇಟ್ಟು
ಪೂಜಿಸಲು
ಸಾರ್ವಜನಿಕರಲ್ಲಿ
ಆಯುಕ್ತರು
ಮನವಿ
ಮಾಡಿಕೊಂಡಿದ್ದಾರೆ.
ಬಿಬಿಎಂಪಿ
ವ್ಯಾಪ್ತಿಯಲ್ಲಿ
ರಾಸಾಯನಿಕ
ಬಣ್ಣಗಳು,
ಥರ್ಮಾಕೊಲ್
ಹಾಗೂ
ಪ್ಲಾಸ್ಟರ್
ಆಫ್
ಪ್ಯಾರೀಸ್
ಗಣೇಶ
ಮೂರ್ತಿ
ತಯಾರಿಕೆಯನ್ನು
ಸಂಪೂರ್ಣವಾಗಿ
ನಿಷೇಧಿಸಿಲಾಗಿದೆ.
ಸದರಿ
ವಸ್ತುಗಳನ್ನು
ಬಳಸಿ
ತಯಾರಿಸುವ,
ಮಾರಾಟ
ಮಾಡುವ
ಪ್ರದೇಶಗಳನ್ನು
ಸಂಬಂಧಪಟ್ಟ
ವಲಯದ
ಜಂಟಿ
ಆಯುಕ್ತರು,
ಆರೋಗ್ಯ
ವೈದ್ಯಾಧಿಕಾರಿಗಳು,
ಸಹಾಯಕ
ಕಾರ್ಯಪಾಲಕ
ಅಭಿಯಂತರರು
ಶಿಸ್ತುಕ್ರಮ
ತೆಗೆದುಕೊಳ್ಳಲಿದ್ದಾರೆ.
ಸಂಪೂರ್ಣ ಪ್ಲಾಸ್ಟಿಕ್ ಬಳಕೆ ನಿಷೇಧ
ಗಣೇಶ
ಮೂರ್ತಿಯ
ಪ್ರತಿಷ್ಠಾಪನೆ,
ವಿಸರ್ಜನೆ,
ಸ್ವಚ್ಛತೆ
ಕಾಪಾಡುವ
ಹಾಗೂ
ಇನ್ನಿತರೆ
ಸೂಚನೆಗಳನ್ನು
ಕಡ್ಡಾಯವಾಗಿ
ಅನುಮತಿ
ಆದೇಶದಲ್ಲಿ
ಉಲ್ಲೇಖಿಸಲಾಗಿದೆ.
ಸಾರ್ವಜನಿಕ
ಸ್ಥಳಗಳಲ್ಲಿ
ಫೆಕ್ಸ್,
ಬ್ಯಾನರ್
ಅಳವಡಿಸುವುದು,
ಪ್ಲಾಸ್ಟಿಕ್
ಬಳಕೆಯನ್ನು
ಸಂಪೂರ್ಣವಾಗಿ
ನಿಷೇಧಿಸಿದ್ದು
ಸಾರ್ವಜನಿಕರು
ಸಹ
ಸಹಕರಿಸಲು
ಕೋರಲಾಗಿದೆ.
ಈ
ಸಭೆಯಲ್ಲಿ
ಬಿಬಿಎಂಪಿಯ
ಎಲ್ಲಾ
ವಿಶೇಷ
ವಲಯ
ಆಯುಕ್ತರು,
ಪೊಲೀಸ್
ಅಧಿಕಾರಿಗಳು,
ವಲಯ
ಜಂಟಿ
ಆಯುಕ್ತರು,
ಅಗ್ನಿಶಾಮಕ
ಅಧಿಕಾರಿಗಳು,
ಬೆಸ್ಕಾಂ
ಅಧಿಕಾರಿಗಳು,
ಕರ್ನಾಟಕ
ಪರಿಸರ
ಮಾಲಿನ್ಯ
ನಿಯಂತ್ರಣ
ಮಂಡಳಿಯ
ಪರಿಸರ
ಅಧಿಕಾರಿಗಳು
ಹಾಗೂ
ಇನ್ನಿತರೆ
ಸಂಬಂಧಪಟ್ಟ
ಅಧಿಕಾರಿಗಳು
ಉಪಸ್ಥಿತರಿದ್ದರು.