Bengaluru: ತ್ಯಾಜ್ಯ ವಿಲೇವಾರಿಗೆ ಚೆನ್ನೈ ಮಾದರಿ ಅಳವಡಿಕೆಗೆ ಮುಂದಾದ ಬಿಬಿಎಂಪಿ
ಬೆಂಗಳೂರು, ಜುಲೈ 24: ಬೆಳೆಯುತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿತ್ಯ ಟನ್ಗಟ್ಟಲೇ ಕಸ ಉತ್ಪತ್ತಿ ಆಗುತ್ತದೆ. ಅದರ ನಿರ್ವಹಣೆಗೆ ಪಾಲಿಕೆ ಏನೆಲ್ಲ ಹರಸಾಹಸ ಪಟ್ಟರು ಸಮರ್ಪಕ ವಿಲೇವಾರಿಯಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ. ಇದೀಗ ಕಸ ವಿಲೇವಾರಿಗೆ, ಮತ್ತು ಕಸ ಮಾಫಿಯಾ ತಡೆಗೆ, ವ್ಯವಸ್ಥಿತ ತ್ಯಾಜ್ಯ ಸಂಗ್ರಹಕ್ಕಾಗಿ ಚೆನ್ನೈ ಮಾದರಿ ಅಳವಡಿಸಿಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಂದಾಗಿದೆ.
ಬೆಂಗಳೂರು ತನ್ನ ಅಸಮರ್ಥ ತ್ಯಾಜ್ಯ ಸಂಗ್ರಹ ವ್ಯವಸ್ಥೆಯನ್ನು ರೀಬೂಟ್ ಮಾಡುವ ಕಲ್ಪನೆಯನ್ನು ಅನ್ವೇಷಿಸುತ್ತಿದೆ. ಕಸ ಮಾಫಿಯಾ ತಡೆಗೆ ದೊಡ್ಡ ಸಂಸ್ಥೆ ಬಳಸಿಕೊಳ್ಳಲು ಮುಂದಾಗಿದೆ. ಬಿಬಿಎಂಪಿ ಅಸ್ತಿತ್ವದಲ್ಲಿರುವ ತ್ಯಾಜ್ಯ ಸಂಗ್ರಹ ವ್ಯವಸ್ಥೆಯು ವರ್ಷಕ್ಕೆ 600 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣೆ ಮಾಡುತ್ತಿದೆ. ಅದಕ್ಕಾಗಿ ಸಮಾರು 100 ಸಣ್ಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಇದರಲ್ಲಿ ಕೆಲವುಗಳು ರಾಜಕೀಯ ನಾಯಕರಿಗೆ ಹತ್ತಿರದ ಸಂಸ್ಥೆಗಳಾಗಿವೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಈ ಕುರಿತು ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದರು. ಕಳೆದ ವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಬೆಂಗಳೂರಿನಲ್ಲಿದ್ದಾಗ ಚೆನ್ನೈ ಮಾದರಿಯ ಬಗ್ಗೆ ಚರ್ಚಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಚೆನ್ನೈನಲ್ಲಿ ಕಸ ಸಂಗ್ರಹ ಸಾಗಾಣೆ ಮಾಡುತ್ತಿರುವ 2 ಸಂಸ್ಥೆ
ಬೆಂಗಳೂರಿನ ನೆರೆಯ ನಗರ ಚೆನ್ನೈ ನಗರದ ಬಹುತೇಕ ಭಾಗಗಳಲ್ಲಿ ಕಸವನ್ನು ಸಂಗ್ರಹಿಸುವ ಮತ್ತು ಸಾಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಕೇವಲ ಎರಡು ಸಂಸ್ಥೆಗಳಿಗೆ ನೀಡಲಾಗಿದೆ. ಹೈದರಾಬಾದ್ ಮೂಲದ ರಾಮ್ಕಿ ಎನ್ವಿರೋ ಲಿಮಿಟೆಡ್ ಮತ್ತು ಸ್ಪ್ಯಾನಿಷ್ ಸಂಸ್ಥೆ ಅರ್ಬಸರ್ ಎಸ್ಎ. ಮೆಕ್ಯಾನಿಕಲ್ ಸ್ವೀಪರ್ಗಳನ್ನು ಬಳಸಿ ರಸ್ತೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗುತ್ತಿದೆ.
ಇತ್ತ ಬೆಂಗಳೂರಿನ ಕಸ ಸಂಗ್ರಹಿಸಲು ಸಾಗಿಸಲು ಬಿಬಿಎಂಪಿ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಸಂಸ್ಥೆಗಳನ್ನು ನಿಯೋಜಿಸಿದೆ, ವಾರ್ಡ್ಗಳ ಆಧಾರದ ಮೇಲೆ ಜವಾಬ್ದಾರಿಯನ್ನು ವಿಭಜಿಸಿದೆ. ಬಿಬಿಎಂಪಿ ಇತ್ತೀಚೆಗೆ ಟೆಂಡರ್ಗಳನ್ನು ನಡೆಸಿತ್ತು. ಒಟ್ಟು 89 ಗುತ್ತಿಗೆಗಳನ್ನು ವಿಂಗಡಿಸಲಾಗಿದೆ. ಆ ಕೆಲಸ ಪಡೆಯಲು 300 ಕ್ಕೂ ಹೆಚ್ಚು ಗುತ್ತಿಗೆದಾರರು ಟೆಂಡರ್ನಲ್ಲಿ ಭಾಗವಹಿಸಿದ್ದರು.

ಚೆನ್ನೈಗೆ ಬೇಟಿ ನೀಡಿರುವ ಪಾಲಿಕೆ ಅಧಿಕಾರಿಗಳು
ತ್ಯಾಜ್ಯ ಸಂಸ್ಕರಣಾ ಘಟಕಗಳು ಮತ್ತು ಭೂಕುಸಿತ ಸ್ಥಳಗಳಿಗೆ ತ್ಯಾಜ್ಯದ ದ್ವಿತೀಯಕ ಸಾಗಣೆಯನ್ನು ಪ್ರಾಥಮಿಕ ಸಂಗ್ರಹಣೆಯಲ್ಲಿ ತೊಡಗಿದ ವಿವಿಧ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುತ್ತದೆ. ನಿರ್ಮಾಣದ ಕಟ್ಟಡಗಳ ತ್ಯಾಜ್ಯಾ ರಾಶಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ ಮತ್ತು ಯಾಂತ್ರಿಕ ಸ್ವೀಪರ್ಗಳ ಕಾರ್ಯಾಚರಣೆಗೂ ಇಲ್ಲಿ ಅವಕಾಶ ನೀಡಲಾಗಿದೆ.
ಕೆಲವು ಬಿಬಿಎಂಪಿ ಅಧಿಕಾರಿಗಳು ಕಸ ಸಂಗ್ರಹಣೆಯಲ್ಲಿ ತೊಡಗಿಸಿಕೊಳ್ಳಲು ದೊಡ್ಡ ಸಂಸ್ಥೆಗಳ ಅರ್ಹತೆ ಮತ್ತು ನ್ಯೂನತೆಗಳನ್ನು ಅಧ್ಯಯನ ಮಾಡಲು ಚೆನ್ನೈಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ತೆರೆದ ಕಸದ ಬ್ಲಾಕ್ಸ್ಪಾಟ್ಗಳು ಕಂಡು ಬಂದಾಗ ಬಿಬಿಎಂಪಿ ದೊಡ್ಡ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡಬಹುದು. ದುಷ್ಪರಿಣಾಮದಲ್ಲಿ, ದೊಡ್ಡ ಸಂಸ್ಥೆಗಳು ಈ ವಲಯದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದೇ ಆದಲ್ಲಿ ಕಸ ಸಂಗ್ರಹಣೆಯಲ್ಲಿ ತೊಡಗಿರುವ ಆರ್ಥಿಕವಾಗಿ ದುರ್ಬಲ ವರ್ಗಗಳ ಬದುಕು ದುಸ್ತರಗೊಳ್ಳುವ ಸಾಧ್ಯತೆ ಇದೆ.
ಹಾಲಿ ವ್ಯವಸ್ಥೆಯಲ್ಲಿ ಸಮಸ್ಯೆ: ಸುಧಾರಣೆ ಬೇಕಿದೆ
ಬೆಂಗಳೂರಿನಲ್ಲಿ ಕಸದ ಅನಿಯಮಿತ ಸಂಗ್ರಹದ ಬಗ್ಗೆ ದೂರು ನೀಡಲು ಯಾಂತ್ರಿಕತೆಯ ಕೊರತೆ ಇರುವುದು ಗೊತ್ತಾಗಿದೆ. ಒಂದು ವಾರ್ಡ್ನಲ್ಲಿ ಪ್ರತಿನಿತ್ಯ ಎಷ್ಟು ಆಟೋ ಟಿಪ್ಪರ್ಗಳನ್ನು ನಿಯೋಜಿಸಲಾಗಿದೆ. ಪೌರಕಾರ್ಮಿಕರು ಗುತ್ತಿಗೆದಾರರಿಗೆ ಮೂರು ನಾಲ್ಕು ತಿಂಗಳುಗಳಿಂದ ತಿಂಗಳಿಂದ ತಡವಾಗಿ ಹಣ ಪಾವತಿಸುತ್ತಿದ್ದಾರೆ.
ಘನತ್ಯಾಜ್ಯ ನಿರ್ವಹಣೆ ಸಂಬಂಧ ನಡೆದ ಸಭೆಯಲ್ಲಿ ಸದಸ್ಯೆ ಸಂಧ್ಯಾ ನಾರಾಯಣ್ ಮಾತನಾಡಿ, ಯಾವುದೇ ಸುಧಾರಣೆ ಸ್ವಾಗತಾರ್ಹ ಆದರೆ ಚೆನ್ನೈ ಮಾದರಿ ಮೂರ್ಖತನವಲ್ಲ ಎಂದು ಪಾಲಿಕೆ ನಡೆ ಸಮರ್ಥಿಸಿಕೊಂಡರು. ದೊಡ್ಡ ಕಂಪನಿಗಳು ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ಉಪ-ಗುತ್ತಿಗೆದಾರರನ್ನಾಗಿ ನೇಮಿಸಿಕೊಳ್ಳುವ ಪ್ರಯತ್ನ ಆಗಬಾರದು" ಎಂದು ಹೇಳುವ ಮೂಲಕ ಅವರು ದಶಕದ ಹಿಂದೆ ಇದೇ ರೀತಿಯ ವಿಫಲ ಪ್ರಯತ್ನ ನಡೆಸಿದ್ದನ್ನು ಸಭೆಯಲ್ಲಿ ಸ್ಮರಿಸಿದರು.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications