ಬಿಬಿಎಂಪಿ ಚುನಾವಣೆ ಸ್ಪಷ್ಟನೆ ಕೋರಿದ್ದ ಅರ್ಜಿ ವಾಪಸ್
ಬೆಂಗಳೂರು, ಜುಲೈ 24 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಕಾಲಮಿತಿ ಕುರಿತು ಸ್ಪಷ್ಟನೆ ನೀಡಬೇಕೆಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಾಪಸ್ ಪಡೆಯಲಾಗಿದೆ. ಆದ್ದರಿಂದ ನಿಗದಿಯಂತೆ ಆ.22ರಂದು ಬಿಬಿಎಂಪಿ ಚುನಾವಣೆ ನಡೆಯಲು ಹಾದಿ ಸುಗಮವಾಗಿದೆ.
ನಗರಾಭಿವೃದ್ಧಿ
ಇಲಾಖೆ
ಹೆಚ್ಚುವರಿ
ಮುಖ್ಯ
ಕಾರ್ಯದರ್ಶಿ
ಡಿ.ಸತ್ಯಮೂರ್ತಿ
ಅವರು
ದೆಹಲಿಯಲ್ಲಿರುವ
ರಾಜ್ಯ
ಕಾನೂನು
ಘಟಕದ
ಅಧೀನ
ಕಾರ್ಯದರ್ಶಿಗೆ
ಪತ್ರ
ಬರೆದಿದ್ದು,
ಅರ್ಜಿಯನ್ನು
ವಾಪಸ್
ಪಡೆಯುವಂತೆ
ಸೂಚನೆ
ನೀಡಿದ್ದಾರೆ.
ಪಾಲಿಕೆ
ಚುನಾವಣಾ
ಪ್ರಕ್ರಿಯೆಗೆ
ತಡೆ
ನೀಡಲು
ಸಾಧ್ಯವಿಲ್ಲ
ಎಂದು
ಕೋರ್ಟ್
ಇತ್ತೀಚೆಗೆ
ಸ್ಪಷ್ಟಪಡಿಸಿತ್ತು.
[ಬಿಬಿಎಂಪಿ
ಚುನಾವಣೆಗೆ
ತಡೆಯಾಜ್ಞೆ
ಇಲ್ಲ]
ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅರ್ಜಿಯನ್ನು ವಾಪಸ್ ಪಡೆಯುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಸರ್ಕಾರ ಅರ್ಜಿಯನ್ನು ವಾಪಸ್ ಪಡೆದಿರುವುದರಿಂದ ನಿಗದಿಯಂತೆ ಆ.22ರಂದು ಚುನಾವಣೆ ನಡೆಯಲಿದೆ. [ಬಿಬಿಎಂಪಿ ಚುನಾವಣೆ ವೇಳಾಪಟ್ಟಿ]
ಜುಲೈ 27ರಂದು ವಿಚಾರಣೆ ಇತ್ತು : ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಜುಲೈ 20ರಂದು ನಡೆಸಿತ್ತು ಮತ್ತು ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. 'ಬಿಬಿಎಂಪಿ ಚುನಾವಣೆ ಎದುರಿಸಲು ನಿಮಗೆ ಏನು ತೊಂದರೆ?' ಎಂದು ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಿತ್ತು.
'ಬಿಬಿಎಂಪಿ ಆಡಳಿತ ಆಡಳಿತಾಧಿಕಾರಿ ಕೈಯಲ್ಲಿದೆ. ಬೇಗನೆ ಚುನಾವಣೆಯನ್ನು ನಡೆಸಿ ಜನಪ್ರತಿನಿಧಿಗಳ ಕೈಗೆ ಆಡಳಿತ ಕೊಡಿ ಎಂದು ಸೂಚನೆ ನೀಡಿದ್ದ ಕೋರ್ಟ್, ಅರ್ಜಿಯ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿತ್ತು. ಈಗ ಸರ್ಕಾರವೇ ಅರ್ಜಿಯನ್ನು ವಾಪಸ್ ಪಡೆದಿದೆ.
ಏನಿದು ಅರ್ಜಿ : ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ನೀಡಿದ್ದ 8 ವಾರಗಳ ಕಾಲಾವಕಾಶದ ಬಗ್ಗೆ ಸ್ಪಷ್ಟನೆ ಕೋರಿ ಸರ್ಕಾರ ಈ ಅರ್ಜಿಯನ್ನು ಸಲ್ಲಿಸಿತ್ತು. ಆದರೆ, ಇತ್ತ ಚುನಾವಣಾ ಆಯೋಗ ಪಾಲಿಕೆ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿತ್ತು.