ಬೆಂಕಿ, ಗಾಳಿ, ಜಲ ರಕ್ಷಿತ ಅಂಕ ಪಟ್ಟಿ ಬೇಕೇ?
ಬೆಂಗಳೂರು, ಫೆ.28: ಭಾರತದ ಅತಿ ದೊಡ್ಡ ವಿಶ್ವವಿದ್ಯಾಲಯ ಹೋಳಾಗಲಿದೆ ಎಂಬ ಕೊರಗಿನ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯ ಹೊಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದೆ. ತನ್ನ ವಿದ್ಯಾರ್ಥಿಗಳಿಗೆ ಹೊಸ ಬಗೆಯ ದೀರ್ಘಬಾಳಿಕಯ 'ಮಾರ್ಕ್ಸ್ ಕಾರ್ಡ್' ಗಳನ್ನು ವಿತರಿಸಲು ಮುಂದಾಗಿದೆ.
ಬೆಂಕಿಯಲ್ಲಿ ನಂದದ, ನೀರಿನಲ್ಲಿಟ್ಟರೂ ಕೊಳೆಯದ, ಕ್ರಿಮಿ ಕೀಟಗಳ ಬಾಧೆಯಿಂದ ಮುಕ್ತವಾದ ಸದೃಢವಾದ ಮಾರ್ಕ್ಸ್ ಕಾರ್ಡ್ ನೀಡಲು ಬೆಂಗಳೂರು ವಿಶ್ವವಿದ್ಯಾಲಯಗಳು ಯೋಜಿಸಿದೆ.
'ಮಲ್ಟಿ ಫ್ರೂಫ್ ಮಾರ್ಕ್ಸ್ ಕಾರ್ಡ್' ಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಈ ಬಹು ಭೀತಿ ಸಂರಕ್ಷಿತ ಅಂಕ ಪಟ್ಟಿ ಸ್ವರೂಪ ಹೇಗಿರುತ್ತೆ ಎಂಬುದರ ಬಗ್ಗೆ ವಿಶ್ವ ವಿದ್ಯಾಲಯದ ಅಧಿಕಾರಿಗಳು ಸುಳಿವು ನೀಡಿಲ್ಲ. ಆದರೆ, ಈ ರೀತಿ ಮಾರ್ಕ್ಸ್ ಕಾರ್ಡ್ ನೀಡುತ್ತೇವೆ ನಿರೀಕ್ಷಿಸಿ ಎಂದಿದ್ದಾರೆ.

ಇಂಥದ್ದೊಂದು ಉತ್ತಮ ಅಂಕ ಪಟ್ಟಿ ತಯಾರಿಸಿಕೊಡಲು ಐಟಿ ಕಂಪನಿಗಳ ಜತೆ ವಿಶ್ವವಿದ್ಯಾಲಯ ಮಾತುಕತೆ ನಡೆಸುತ್ತಿದೆ. ಹೊಸ ಅಂಕ ಪಟ್ಟಿಯನ್ನು ಪ್ಲಾಸ್ಟಿಕ್, ಸಿಲ್ವರ್ ಫಾಯಿಲ್, ಬಿದಿರು ಹಾಗೂ ಅಗ್ನಿ ನಿರೋಧಕ ಕಚ್ಚಾವಸ್ತುಗಳಿಂದ ತಯಾರಿಸಲಾಗುತ್ತದೆ. ಈ ಅಂಕಪಟ್ಟಿಗೆ ನೀಡುವ ಶುಲ್ಕದ ಜತೆಗೆ ಹೊಸ ಅಂಕಪಟ್ಟಿಯ ಬೆಲೆ 15 ರು ಹೆಚ್ಚಳವಾಗಲಿದೆ. ಹೊಸ ಮಾದರಿ ಅಂಕಪಟ್ಟಿಯ ಕಾಗದ ಬೆಲೆ 3.50 ರು ನಷ್ಟಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳಿದ್ದಾರೆ.
ಈ ಹೊಸ ಪ್ರಯೋಗದಿಂದ ನಕಲಿ ಅಂಕಪಟ್ಟಿಯ ಹಾವಳಿಯನ್ನು ತಪ್ಪಿಸಬಹುದಾಗಿದೆ. ಪ್ರತಿ ಅಂಕಪಟ್ಟಿಯೂ ವಿಶಿಷ್ಟವಾಗಿದ್ದು, ಬಾರ್ ಕೋಡ್ ಹೊಂದಲಿದೆ. ವಿದ್ಯಾರ್ಥಿಗಳು ಒಮ್ಮೆ ಹೆಚ್ಚಿನ ಶುಲ್ಕ ನೀಡುವುದು ಅನಿವಾರ್ಯವಾದರೂ ಅದರ ಉಪಯೋಗ ಶಾಶ್ವತವಾಗಿದೆ ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆರ್ ಕೆ ಸೋಮಶೇಖರ್ ಹೇಳಿದ್ದಾರೆ.
ಬಾರ್ ಕೋಡ್ ಹೊಂದಿರುವುದರಿಂದ ಅಂಕಪಟ್ಟಿಯ ನೈಜತೆ, ದೃಢತೆ ಇನ್ನಷ್ಟು ಹೆಚ್ಚಲಿದ್ದು, ಉನ್ನತ ವ್ಯಾಸಂಗಕ್ಕೆ ವಿದೇಶಿ ವಿವಿಗೆ ತೆರಳುವವರಿಗೆ ಕಂಪನಿಗೆ ಸೇರುವವರಿಗೆ ಅಂಕಪಟ್ಟಿ ಪರಿಶೀಲನೆ ಸುಲಭವಾಗಲಿದೆ ಎಂದು ಸೋಮಶೇಖರ್ ತಿಳಿಸಿದರು.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications