ಟ್ರಾಫಿಕ್ ಪೊಲೀಸು ಕೆಲಸ ಯಾರಿಗೆ ಬೇಕು ಹೇಳಿ?
ಬೆಂಗಳೂರು, ಮೇ.14: ಟ್ರಾಫಿಕ್ ಪೊಲೀಸರು ನಮ್ಮವರೇ ಎಂದು ನಾವೆಷ್ಟು ಅವರ ಬಗ್ಗೆ ಹೊಗಳಿದರೂ ಜನರಿಗೆ ಅವರೆಂದರೆ ಅದ್ಯಾಕೋ ತಿರಸ್ಕಾರ, ವಕ್ರ ದೃಷ್ಟಿಯಿಂದ ನೋಡುತ್ತಿರುತ್ತಾರೆ. ಐದು ನಿಮಿಷ ಸಿಗ್ನಲ್ನಲ್ಲಿ ವಾಹನ ನಿಂತರೇ ಸಾಕು ಟ್ರಾಫಿಕ್ ಪೊಲೀಸರಿಗೆ ಜನ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿರುತ್ತಾರೆ.
ನಿಜವಾಗಿಯೂ ಟ್ರಾಫಿಕ್ ಪೊಲೀಸರ ಸಮಸ್ಯೆ ಏನು ಎಂಬುದು ವಾಹನಗಳಲ್ಲಿ ಪ್ರಯಾಣಿಸುವ ನಮಗೆ ಗೊತ್ತೆ ಇರುವುದಿಲ್ಲ. ಪ್ರತಿದಿನ ವಾಹನಗಳ ಹೊಗೆ ಮತ್ತು ದೂಳು ಸೇವಿಸಿ ವಾಹನಗಳ ಹೊಗೆ ಮತ್ತು ದೂಳು ಸೇವಿಸಿ ಸಂಚಾರ ಪೊಲೀಸರ ಆರೋಗ್ಯ ಹದಗೆಡುತ್ತಿದೆ.[ಈ ಟ್ರಾಫಿಕ್ ಪೊಲೀಸ್ ಅಂದ್ರೆ ಜನರಿಗೆ ಅಚ್ಚುಮೆಚ್ಚು]
ಟ್ರಾಫಿಕ್ ಪೊಲೀಸರ ಆರೋಗ್ಯ ಹದಗೆಡುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಮನವಿಯ ಮೇರೆಗೆ ನ್ಯಾಷನಲ್ ರೆಫರಲ್ ಸೆಂಟರ್ ಫಾರ್ ಲೆಡ್ ಪ್ರೊಜೆಕ್ಟ್ ಇನ್ ಇಂಡಿಯಾ ಸಂಸ್ಥೆ ಟ್ರಾಫಿಕ್ ಪೊಲೀಸರ ಬಗ್ಗೆ ಜೂನ್ ತಿಂಗಳಿನಿಂದ ಅಧ್ಯಯನ ನಡೆಸಲಿದೆ.[ಮಾನವೀಯತೆ ಮೆರೆದ ದೊಡೇಜಾಗೆ ಅಭಿನಂದನೆ]
ಈ ಮಧ್ಯೆ ಒನ್ಇಂಡಿಯಾ ಕನ್ನಡ ಕೆಲವು ಟ್ರಾಫಿಕ್ ಪೊಲೀಸರನ್ನು ಮಾತನಾಡಿಸಿದೆ. ಅವರ ಸಮಸ್ಯೆಗಳು, ಕೆಲಸದ ಒತ್ತಡ, ವಾಹನ ದಟ್ಟನೆ ಸಮಸ್ಯೆಗೆ ನಿವಾರಣೆಗೆ ಅವರ ಪರಿಹಾರ, ಇತ್ಯಾದಿ ವಿಚಾರಗಳನ್ನು ಟ್ರಾಫಿಕ್ ಪೊಲೀಸರು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಅವರ ಅಭಿಪ್ರಾಯಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ಮಂಡಿ ನೋವು:
ಬಹಳಷ್ಟು ಟ್ರಾಫಿಕ್ ಪೊಲೀಸರಿಗೆ ಮಂಡಿ ನೋವು ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ನಿರಂತರವಾಗಿ ಎರಡು ಮೂರು ಗಂಟೆ ನಿಂತರೇ ಸಾಕು ಕಾಲುಗಳು ಉದಿಕೊಳ್ಳುತ್ತಿದೆ. ಕೆಲಸದ ಮಧ್ಯೆ ಕುಳಿತುಕೊಳ್ಳಬಹುದಾದರೂ ಸಿಸಿಟಿವಿಯಲ್ಲಿ ಸೆರೆಯಾಗುತ್ತಿರುತ್ತದೆ. ಹಾಗಾಗಿ ನೋವು ಆದರೂ ಸಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.

ಮಾಸ್ಕ್ ಹಾಕಿದ್ರೂ ಆರೋಗ್ಯ ಕೆಡುತ್ತಿದೆ:
ಇಲಾಖೆ ದೂಳು ಮತ್ತು ಹೊಗೆಯಿಂದ ರಕ್ಷಿಸಿಕೊಳ್ಳಲು ಮಾಸ್ಕ್ ನೀಡುತ್ತಿದೆ. ಆದರೆ ಮಾಸ್ಕ್ ಹಾಕಿದ್ದರೂ ಶ್ವಾಸಕೋಶದ ತೊಂದರೆ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಒನ್ ಇಂಡಿಯಾದ ಜೊತೆ ಮಾತನಾಡಿದ ಪೊಲೀಸರಲ್ಲಿ ಹಲವು ಮಂದಿ ಶ್ವಾಸಕೋಶ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದಾರೆ.

ವಾಹನಗಳ ಶಬ್ಧ ಕೇಳಿ ಕಿವಿಗೆ ಅಪಾಯ:
ಪ್ರತಿ ದಿನ ವಾಹನಗಳ ಶಬ್ಧಗಳನ್ನು ಕೇಳಿ ಕೇಳಿ ಮನೆಗೆ ಹೋಗಿ, ಮನೆಯವರು ಮೆಲ್ಲನೆ ಮಾತನಾಡಿದರೆ ಏನು ಹೇಳಿದ್ದಾರೆ ಎಂಬುದೇ ಗೊತ್ತಾಗುದಿಲ್ಲವಂತೆ. ಈ ಸಮಸ್ಯೆಯೂ ಹಲವರಲ್ಲಿದೆ.

ದೂಳಿನಿಂದ ಕಣ್ಣಿಗೆ ಹಾನಿ :
ನಗರದ ಕೆಲವೇ ಕೆಲ ಏರಿಯಾಗಳಲ್ಲಿ ರಸ್ತೆ ಚೆನ್ನಾಗಿದೆ. ಉಳಿದಂತೆ ರಸ್ತೆಯಲ್ಲೇ ದೊಡ್ಡ ದೊಡ್ಡ ಗುಂಡಿಗಳು ಕಾಣಿಸುತ್ತಿದೆ. ಗುಂಡಿ ಮುಚ್ಚಬಹುದಾದರೂ ರಸ್ತೆ ಬದಿಯಲ್ಲಿ ಸರಿಯಾಗಿ ಡಾಂಬರ್ ಹಾಕುವುದಿಲ್ಲ. ಆ ಬದಿಯ ದೂಳುಗಳನ್ನು ನಾವು ಸೇವಿಸುವುದರ ಜೊತೆಗೆ ಕಣ್ಣಿಗೆ ಹೋಗುತ್ತದೆ. ಇದರಿಂದಾಗಿ ನಮ್ಮ ಕೆಲ ಸಿಬ್ಬಂದಿಗಳಿಗೆ ಕಣ್ಣಿನ ದೋಷ ಬಂದಿದೆ ಅಂತಾರೆ ಕೆಲ ಪೊಲೀಸರು.

ದಿನದಲ್ಲಿ ಎಂಟು ಗಂಟೆ ಕೆಲಸ
ದಿನದಲ್ಲಿ ಎಂಟು ಗಂಟೆ ದುಡಿಯುತ್ತೇವೆ. ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗುತ್ತದೆ.

ಟ್ರಾಫಿಕ್ ಸಿಗ್ನಲ್ ಕೈ ಕೊಟ್ಟರೆ ಕೆಲಸ ಕಷ್ಟ:
ಟ್ರಾಫಿಕ್ ಸಿಗ್ನಲ್ ದೀಪ ಇದ್ದರೂ ಸವಾರರು ನಿಯಮ ಪಾಲಿಸುವುದಿಲ್ಲ. ಇನ್ನು ಸಿಗ್ನಲ್ ದೀಪ ಕೈ ಕೊಟ್ಟರೆ ರಸ್ತೆಯ ಮಧ್ಯದಲ್ಲೇ ನಿಂತು ನಿಯಂತ್ರಣ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಬೈಕಿನಲ್ಲಿ ವೇಗವಾಗಿ ಬರುವುದನ್ನು ನೋಡಿ ನಮಗೆ ಹೆದರಿಕೆಯಾಗುತ್ತದೆ.

ಹೆಚ್ಚಿನ ದಂಡ ಹಾಕಬೇಕು:
ಟ್ರಾಫಿಕ್ ನಿಯಮ ಉಲ್ಲಂಘಿಸುವುದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಅವರಿಗೆ ಹಣದ ಬೆಲೆ ಗೊತ್ತಿಲ್ಲ.ಹೀಗಾಗಿ ದಂಡದ ಪ್ರಮಾಣ ಹೆಚ್ಚಿಸಬೇಕೆಂದು ಕೆಲವರು ಸಲಹೆ ನೀಡಿದ್ದಾರೆ.

ನಿಯಮ ಪಾಲಿಸುವುದಿಲ್ಲ:
ಹೆಲ್ಮೆಟ್ ಹಾಕಿ, ಸೀಟ್ ಬೆಲ್ಟ್ ಹಾಕಿ ಎಂದು ಇಲಾಖೆ ಹೇಳುತ್ತಿದ್ದರೂ ಜನಗಳಿಗೆ ಕ್ಯಾರೇ ಇಲ್ಲ. ಈಗ ಸ್ಮಾರ್ಟ್ಫೋನ್ಲ್ಲಿ ಮಾತನಾಡಿಕೊಂಡು ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಐವತ್ತು ಲಕ್ಷ ದಾಟಿದೆ ವಾಹನಗಳ ಸಂಖ್ಯೆ
ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನ ವಾಹನಗಳ ಸಂಖ್ಯೆ ಐವತ್ತು ಲಕ್ಷ ದಾಟಿದೆ.
ದ್ವಿಚಕ್ರ ವಾಹನಗಳು- 35 ಲಕ್ಷ
ಕಾರು - 12 ಲಕ್ಷ
ಆಟೊ - 1.4 ಲಕ್ಷ
ಬಸ್ಸು/ ಮಿನಿ ಬಸ್ಸು- 1.6 ಲಕ್ಷ
ಲಾರಿ/ ಇತರೆ ವಾಹನ- 1 ಲಕ್ಷ

ಒಂದು ಕುಟುಂಬಕ್ಕೆ ಒಂದು ವಾಹನ:
ಪ್ರತಿದಿನ 30 ಲಕ್ಷಕ್ಕೂ ಅಧಿಕ ವಾಹನಗಳು ಬೆಂಗಳೂರಿನ ರಸ್ತೆಯಲ್ಲಿ ಓಡುತ್ತವೆ. ಒಂದು ಕುಟುಂಬದವರಿಗೆ ಒಂದೇ ವಾಹನ ಎಂದು ಕಡ್ಡಾಯ ಮಾಡಿದರೆ ಬೆಂಗಳೂರಿನ ಮಾಲಿನ್ಯನದ ಜೊತೆಗೆ ಸಂಚಾರ ದಟ್ಟನೆಯೂ ಕಡಿಮೆಯಾಗಬಹುದು. ಇಲ್ಲದಿದ್ದಲ್ಲಿ ಮುಂದಿನ ಐದು ವರ್ಷದಲ್ಲಿ ಒಂದು ಕಿ.ಮೀ ಹೋಗಬೇಕಿದ್ದಲ್ಲಿ ಅರ್ಧಗಂಟೆ ತಗಲಿದರೂ ಸಂದೇಹವಿಲ್ಲ ಎಂದು ಹೇಳುತ್ತಾರೆ ಟ್ರಾಫಿಕ್ ಪೊಲೀಸರು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications