ಪರಾಜಿತ ನಂದನ್ ನಿಲೇಕಣಿ ಹೊರಟರೆಲ್ಲಿಗೆ?
ಬೆಂಗಳೂರು, ಮೇ 20: ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಬಲಾಢ್ಯ ಅಭ್ಯರ್ಥಿ ಅನಂತಕುಮಾರ್ ಅವರೆದುರು ಪರಾಜಿತರಾದ ಕಾಂಗ್ರೆಸ್ಸಿನ ನಂದನ್ ನಿಲೇಕಣಿ ಅವರ ಮುಂದಿನ ನಡೆಯೇನು?
'ಸೋತರೂ ಕ್ಷೇತ್ರದ ಜನತೆಯ ಸೇವೆಯಲ್ಲಿ ತೊಡಗುವೆ. ರಾಜಕೀಯ ಬಿಡೋಲ್ಲ' ಎಂದು ಚುನಾವಣೆಗೆ ಮುನ್ನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು. ಆದರೆ ಈಗ ಪಕ್ಷವೂ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ನಿಲೇಕಣಿ ಅವರ ಸೋಲಿನ ತೂಕವೂ ಬಲು ಭಾರವಾಗಿದೆ.
ಹಾಗಾಗಿ ಭಾರಿ ಅಪಜಯದ ನಂತರ ನಿಲೇಕಣಿ ಮುಂದೇನು ಮಾಡಬಹುದು? ಎಂಬ ಕುತೂಹಲ ಮೂಡಿದೆ. ಜತೆಗೆ, ಚುನಾವಣಾ ಸಂದರ್ಭದಲ್ಲಿ ಬರಾಕ್ ಒಬಾಮಾ ಅವರಿಗಾಗಿ ದುಡಿದ ಟೆಕ್ಕಿಗಳ ತಂಡದಂತೆ ನಿಲೇಕಣಿ ಅವರಿಗಾಗಿಯೂ ದುಡಿದ ಟೆಕ್ಕಿಗಳ ತಂಡ ಮುಂದೇನು ನಿರುದ್ಯೋಗದ ಸುಳಿಗೆ ಸಿಲುಕುತ್ತಾರಾ? ಎಂಬ ಪ್ರಶ್ನೆಗಳು ಕಾಡತೊಡಗಿವೆ.

ಆದರೆ ತಕ್ಷಣಕ್ಕೆ ಇತ್ತ ಅನಂತಕುಮಾರ್ ಅವರು ಇದೇ ವಾರಾಂತ್ಯ ಕೇಂದ್ರ ಸಚಿವ ಸ್ಥಾನ ಅಲಕಂರಿಸುವ ಸಮಯದಲ್ಲೇ ಅತ್ತ ನಂದನ್ ನಿಲೇಕಣಿ ಅವರು ಬೋಸ್ಟನಿಗೆ ಪ್ರಯಾಣ ಬೆಳಸಲಿದ್ದಾರೆ. ಅಲ್ಲಿರುವ ತಮ್ಮ ಮಕ್ಕಳ ಜತೆ ಒಂದಷ್ಟು ಕಾಲ ಇದ್ದು ಬರುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇತ್ತ 7,700 ಕೋಟಿ ರೂ ಆಸ್ತಿಯ ಒಡೆಯನಿಗೆ ನಿಷ್ಠರಾಗಿದ್ದ ಅವರ ಪರಮಾಪ್ತ ಟೆಕ್ಕಿ ತಂಡದವರು ಮುಂದೆ 5 ವರ್ಷ ಸುದೀರ್ಘ ಕಾಲ ಸುಮ್ಮನೆ ಕುಳಿತಿರುವುದು ಅಸಾಧ್ಯದ ಮಾತು. ಆದರೂ ಅವರೆಲ್ಲಾ ಚಿಂತಕರ ಚಾವಡಿಯಾಗಿ (think tank) ಕೆಲಸ ಮುಂದುವರಿಸುತ್ತಾರೆ. ಇನ್ನು, ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನತೆಯಲ್ಲಿ ಒಳ್ಳೆಯ ಹೆಸರು ಗಳಿಸಿದ ನಂದನ್ ನಿಲೇಕಣಿ ಅವರಿಗೆ ಶುಭವಾಗಲಿ!
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications