ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಥಳಿತ ಪ್ರಕರಣ: ಒಡಿಶಾ ಡಿಎಸ್ಪಿ ಪುತ್ರರು ಸೇರಿ ಮೂವರ ಬಂಧನ
ಬೆಂಗಳೂರು ಏಪ್ರಿಲ್ 7: ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ನೆರೆಯ ವ್ಯಕ್ತಿಗೆ ಥಳಿಸಿ ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಡಿಎಸ್ಪಿ ಪುತ್ರ ಹಾಗೂ ಆತನ ಸಹಚರರನ್ನು ಬಂಧಿಸಲಾಗಿದೆ.
ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಲ್ ಡೇವಿಡ್ ನೆಹೆಮಿಯಾ ಅವರ ಸಹೋದರ ಮತ್ತು ಬೆಂಗಳೂರಿನ ವಿಜ್ಞಾನ್ ನಗರದ ನಿವಾಸಿ ಲಾಯ್ಡ್ ನೆಹೆಮಿಯಾ (54) ಅವರ ಮೇಲೆ ನೆರೆಯ ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೆ ಥಳಿಸಿದ್ದರು. ತೀವ್ರ ಹಲ್ಲೆಗೊಳಗಾದ ಲಾಯ್ಡ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಸಾವನ್ನಪ್ಪಿದ್ದಾರೆ.

ಲಾಯ್ಡ ಸಾವಿಗೆ ಕಾರಣರಾದ ಮೂವರು ಯುವಕರಲ್ಲಿ ಇಬ್ಬರು ಭುವನೇಶ್ವರ ರಾಜ್ಯ ಅಪರಾಧ ದಾಖಲೆಗಳ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಕೇಶಬ್ ಕುಮಾರ್ ಸಾಮಂತರಾಯರ ಪುತ್ರರಾಗಿದ್ದಾರೆ ಎಂದು ಎಚ್ಎಎಲ್ ಪೊಲೀಸರು ತನಿಖೆ ನಡೆಸಿ ತಿಳಿಸಿದ್ದಾರೆ.
ಒಡಿಶಾ ಡಿಎಸ್ಪಿ ಪುತ್ರ ವಿರುದ್ಧ ಕೇಸ್
ಡಿಎಸ್ಪಿ ಅವರ ಕಿರಿಯ ಪುತ್ರ ಅನಿರುದ್ಧ ಸಾಮಂರಾಯ್ (28) ಅವರನ್ನು ಗುರುವಾರ ದೆಹಲಿಯಿಂದ ಬೆಂಗಳೂರಿಗೆ ಕರೆತರಲಾಗಿದೆ. ಜೊತೆಗೆ ಅವರ ಹಿರಿಯ ಮಗ ಬಸುದೇವ್ ಸಾಮಂತ್ರಾಯ (34) ನಿರ್ಮಾಣ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದು, ಈವರನ್ನೂ ಬಂಧಿಸಲಾಗಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಬಸುದೇವ್ ಸ್ನೇಹಿತ ಅಭಿಷೇಕ್ ಸಿಂಗ್ (31) ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಸುದೇವ್ ಮತ್ತು ಅಭಿಷೇಕ್ ಅವರನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ವಿಜ್ಞಾನ್ ನಗರದ ನಿವಾಸಿ ಲಾಯ್ಡ್ ಜೋರಾಗಿ ಸಂಗೀತವನ್ನು ಆಕ್ಷೇಪಿಸಿದಕ್ಕಾಗಿ ಮೂವರು ನೆರೆಹೊರೆಯವರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಬಳಿಕ ಸಾವನ್ನಪ್ಪಿದ ಲಾಯ್ಡ ಅವರನ್ನು ಗುರುವಾರ ಅಂತ್ಯಕ್ರಿಯೆ ನಡೆಸಲಾಯಿತು.

ಡಿಸಿಪಿ (ವೈಟ್ಫೀಲ್ಡ್) ಎಸ್ ಗಿರೀಶ್ ಅವರು ಡಿಎಸ್ಪಿಯ ಪುತ್ರರು ಎಂದು TOI ಗೆ ಖಚಿತಪಡಿಸಿದ್ದಾರೆ. ದೆಹಲಿಯಿಂದ ಕರೆದುಕೊಂಡು ಬಂದಿರುವ ಅನಿರುದ್ಧ್ ರಾಷ್ಟ್ರ ರಾಜಧಾನಿಯಲ್ಲಿ MNC ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ವಕೀಲರಾಗಿದ್ದಾರೆ ಎಂದು ಗಿರೀಶ್ ಅವರು ಹೇಳಿದರು.
ಒಡಿಶಾ ಡಿಎಸ್ಪಿ ಪುತ್ರರು ಬೆಂಗಳೂರು ಬಂದಿದ್ದು ಯಾಕೆ?
ಅನಿರುದ್ಧ ರಜೆಯ ಮೇಲೆ ಬೆಂಗಳೂರಿಗೆ ಬಂದಿದ್ದು, ತನ್ನ ಸಹೋದರನ ಮಗುವಿಗೆ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಅವರು ಪಾರ್ಟಿ ಮಾಡಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ ಕಾರಿನಲ್ಲಿ ಜೋರಾಗಿ ಸಂಗೀತ ನುಡಿಸಿದ್ದಾರೆ. ಇದು ನೆರೆಯವರಿಗೆ ಕಿರಿಕಿರಿಯನ್ನುಂಟು ಮಾಡಿತ್ತು. ಇದರಿಂದ ಲಾಯ್ಡ್ ನೆಹೆಮಿಯಾ ಸೌಂಡ್ ಕಡಿಮೆ ಮಾಡುವಂತೆ ಕೇಳಿದ್ದಾರೆ.
ಆದರೆ ಇದಕ್ಕೆ ನಿರಾಕರಿಸಿದ ಗುಂಪು ಲಾಯ್ಡ್ ನೆಹೆಮಿಯಾ ಅವರ ಮೇಲೆ ಹಲ್ಲೆ ಮಾಡಿದೆ. ತೀವ್ರ ಹಲ್ಲೆಗೊಳಗಾಗಿದ್ದ ಲಾಯ್ಡ್ ನೆಹೆಮಿಯಾ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಮೃತಪಟ್ಟಿದ್ದಾರೆ. ಗುರುವಾರ ಅವರ ಅಂತ್ಯಕ್ರಿಯೆ ನಡೆದಿದೆ. ಜಗಳದಲ್ಲಿ ಅನಿರುದ್ಧ್ ಕೂಡ ಗಾಯಗೊಂಡಿದ್ದಾರೆ ಮತ್ತು ಅವರ ಬೆರಳನ್ನು ಲಾಯ್ಡ್ ಕಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಮ್ಮ ಬಗ್ಗೆ ಸುಳ್ಳು ಸುದ್ದಿ- ಒಡಿಶಾ ಡಿಎಸ್ಪಿ ಸಮರ್ಥನೆ
ಆದರೆ ಡಿಎಸ್ಪಿ ಕೇಶಬ್ ಕುಮಾರ್ ಸಾಮಂತರಾಯರ ನನ್ನ ಮಕ್ಕಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಡಿಎಸ್ಪಿ ಕೇಶಬ್ ಕುಮಾರ್ ಸಾಮಂತ್ರಾಯ್ ಅವರು ತಮ್ಮ ಪುತ್ರರ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು TOI ಗೆ ತಿಳಿಸಿದ್ದಾರೆ. "ವಾಸ್ತವವಾಗಿ, ಲಾಯ್ಡ್ ಅವರ ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿ ಸಂಗೀತದ ವಿಷಯವಾಗಿ ಜಗಳವನ್ನು ಪ್ರಾರಂಭಿಸಿದರು. ಅವರು ಅನಿರುದ್ಧ್ ಅವರನ್ನು ನಿಂದಿಸಲು ಪ್ರಾರಂಭಿಸಿದರು. ಅವರು ಮೊದಲು ನನ್ನ ಮಕ್ಕಳಿಗೆ ಹೊಡೆದರು. ನನ್ನ ಮಕ್ಕಳು ಅವರ ಮೇಲೆ ಮೊದಲು ಕೈ ಮಾಡಿಲ್ಲ. ನಮ್ಮ ಮಕ್ಕಳು ಅವರ ವಿರುದ್ಧ ಪ್ರತಿ-ದೂರು ದಾಖಲಿಸಿದ್ದಾರೆ. ಎಚ್ಎಎಲ್ ಪೊಲೀಸ್ ಠಾಣೆ ಹಾಗೂ ಎಫ್ಐಆರ್ ದಾಖಲಿಸಲಾಗಿದೆ'' ಎಂದರು.
ಎರಡು ದಿನಗಳ ಹಿಂದೆ ಸಂಭವಿಸಿದ ಘಟನೆಗೂ ಲಾಯ್ಡ್ನ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಶಬ್ ಕುಮಾರ್ ಸಾಮಂತ್ರಾಯ್ ಹೇಳಿದ್ದಾರೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications