ಬೆಂಗಳೂರಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿವೆ 150ಕ್ಕೂ ಹೆಚ್ಚು ಮರಗಳು
ಬೆಂಗಳೂರು, ಮೇ 24: ನಗರದಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ 150ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.
Recommended Video
ಮಲ್ಲೇಶ್ವರ, ಶ್ರೀನಗರ, ಮೆಜೆಸ್ಟಿಕ್, ಗಿರಿನಗರ, ಕೆಂಗೇರಿ, ಮೈಸೂರು ರಸ್ತೆ, ಜಯನಗರ, ಉತ್ತರಹಳ್ಳಿ, ಪದ್ಮನಾಭನಗರ ಸೇರಿದಂತೆ ಬಹುತೇಕ ಕಡೆ ಭಾರಿ ಮಳೆಯಾಗಿದೆ. ಬಿಬಿಎಂಪಿಗೆ ಸುಮಾರು 150ಕ್ಕೂ ಹೆಚ್ಚು ಮರಗಳು ಬಿದ್ದಿರುವ ಬಗ್ಗೆ ದೂರುಗಳು ಬಂದಿವೆ. ಎನ್ಆರ್ ಕಾಲೊನಿ, ಗವಿಪುರ, ಜೆಪಿನಗರ, ಇಪಿಐಪಿ ರಸ್ತೆ, ಮಹಾದೇವಪುರ, ಪುಲಕೇಶಿನಗರದಲ್ಲಿ ಸಾಕಷ್ಟು ಮರಗಳು ಬಿದ್ದಿವೆ.
ಬೆಂಗಳೂರಲ್ಲಿ ಗಾಳಿ ಸಹಿತ ಮಳೆ: ಬಿಬಿಎಂಪಿ ಸಹಾಯವಾಣಿ ಇಂತಿದೆ
150ಕ್ಕೂ ಹೆಚ್ಚು ದೂರುಗಳು ಬಿಬಿಎಂಪಿಗೆ ಬಂದಿವೆ ಎಂದು ಆಯುಕ್ತರು ಬರೆದುಕೊಂಡಿದ್ದಾರೆ. ನಾಗರಿಕರು ಮಾಡಿರುವ ಎಲ್ಲಾ ಕರೆಗಳಿಗೂ ಬಿಬಿಎಂಪಿ ಸ್ಪಂದಿಸುತ್ತದೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಜೂನ್ ವೇಳೆಗೆ ಮುಂಗಾರು ಪ್ರವೇಶಿಸಲಿದ್ದು ಈ ಬಾರಿ ಸಾಮಾನ್ಯ ಮುಂಗಾರು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ಒಂದು ಮಳೆಗೆ ಇಷ್ಟೆಲ್ಲಾ ಮರಗಳು ಧರೆಗುರುಳಿರುವಾಗ ಬರುವ ಮುಂಗಾರನ್ನು ತಡೆದುಕೊಳ್ಳುವ ಶಕ್ತಿ ಅವುಗಳಿಗಿದೆಯೇ ಎಂಬುದನ್ನು ಆಲೋಚಿಸಬೇಕಿದೆ.
ಮುಂಗಾರು ಆಗಮನಕ್ಕೂ ಮುನ್ನ ಮಳೆಗಾಲದಲ್ಲಿ ಬೀಳಬಹುದಾದ ಮರದ ರೆಂಬೆಗಳನ್ನು ಈಗಿನಿಂದಲೇ ಕಡಿಯಲು ಆರಂಭಿಸಬೇಕು. ಪ್ರತಿ ವರ್ಷವೂ ಮುಂಗಾರು ಆರಂಭಕ್ಕೂ ಮುನ್ನ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಲಾಕ್ಡೌನ್ನಿಂದಾಗಿ ಸ್ವಲ್ಪ ಹಿಂದೆ ಉಳಿದಿದೆ ಎನ್ನಬಹುದಾಗಿದೆ.
ನಗರದಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ 150ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.
ಮಲ್ಲೇಶ್ವರ, ಶ್ರೀನಗರ, ಮೆಜೆಸ್ಟಿಕ್, ಗಿರಿನಗರ, ಕೆಂಗೇರಿ, ಮೈಸೂರು ರಸ್ತೆ, ಜಯನಗರ, ಉತ್ತರಹಳ್ಳಿ, ಪದ್ಮನಾಭನಗರ ಸೇರಿದಂತೆ ಬಹುತೇಕ ಕಡೆ ಭಾರಿ ಮಳೆಯಾಗಿದೆ. ಬಿಬಿಎಂಪಿಗೆ ಸುಮಾರು 150ಕ್ಕೂ ಹೆಚ್ಚು ಮರಗಳು ಬಿದ್ದಿರುವ ಬಗ್ಗೆ ದೂರುಗಳು ಬಂದಿವೆ. ಎನ್ಆರ್ ಕಾಲೊನಿ, ಗವಿಪುರ, ಜೆಪಿನಗರ, ಇಪಿಐಪಿ ರಸ್ತೆ, ಮಹಾದೇವಪುರ, ಪುಲಕೇಶಿನಗರದಲ್ಲಿ ಸಾಕಷ್ಟು ಮರಗಳು ಬಿದ್ದಿವೆ.
150ಕ್ಕೂ ಹೆಚ್ಚು ದೂರುಗಳು ಬಿಬಿಎಂಪಿಗೆ ಬಂದಿವೆ ಎಂದು ಆಯುಕ್ತರು ಬರೆದುಕೊಂಡಿದ್ದಾರೆ. ನಾಗರಿಕರು ಮಾಡಿರುವ ಎಲ್ಲಾ ಕರೆಗಳಿಗೂ ಬಿಬಿಎಂಪಿ ಸ್ಪಂದಿಸುತ್ತದೆ ಎಂದು ಹೇಳಿದ್ದಾರೆ.