ಊಬರ್-ಓಲಾ ಟ್ಯಾಕ್ಸಿಗಳ ದರ ಬದಲಾವಣೆಗೆ ಬೇಕು ಒಂದೆರೆಡು ದಿನ
ಬೆಂಗಳೂರು, ಜನವರಿ 12 : ಮೊಬೈಲ್ ಅಪ್ಲಿಕೇಷನ್ ಆಧಾರಿತ ಓಲಾ, ಉಬರ್ ಸೇರಿದಂತೆ ಹಲವು ಕಂಪನಿಗಳ ಟ್ಯಾಕ್ಸಿಗಳ ಕನಿಷ್ಟ ಪ್ರಯಾಣ ದರವನ್ನು ಸಾರಿಗೆ ಇಲಾಖೆಯು ನಿಗದಿ ಮಾಡಿದ್ದು, ಪೂರ್ಣಪಟ್ಟಿ ಪ್ರಕಟಿಸಲಾಗಿದೆ.
ಜನವರಿ9 ರಿಂದ ಅನ್ವಯವಾಗುವಂತೆ ನಗರದಲ್ಲಿ ಸಂಚರಿಸುವ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿಗಳ ದರ ಪರಿಷ್ಕೃತಗೊಳಿಸಲು ಆದೇಶಿಸಲಾಗಿದೆ. ಆದೇಶವಾಗಿ 2 ದಿನ ಕಳೆದರೂ ಪ್ರಮುಖ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿಗಳಾದ ಓಲಾ ಮತ್ತು ಊಬರ್ ನಲ್ಲಿ ಹೊಸ ದರ ಅನುಷ್ಠಾನವಾಗಿಲ್ಲ.
ಈ ಹಿಂದೆ ಮೂಲ ದರ, ಪ್ರತಿ ಕಿ,ಮೀ, ದರ ಪ್ರತಿ ನಿಮಿಷದ ಪ್ರಯಾಣ ದರ, ತೆರಿಗೆ ಹೀಗೆ ಹಲವು ದರ ವಿಧಿಸುತ್ತಿದ್ದ ಸಂಸ್ಥೆಗಳು ಇದೀಗ ಕೇವಲ 2 ವಿಭಾಗದಲ್ಲಿ ದರ ನಿಗದಿಪಡಿಸಬೇಕಿದೆ. ಪರಿಷ್ಕೃತ ದರಕ್ಕೆ ಪೂರ್ಣ ವ್ಯವರ್ಸಥೆ ಬದಲಾಯಿಸಬೇಕಿದ್ದು, ಪರೀಕ್ಷಾರ್ಥವಾಗಿ ಪ್ರಾರಂಭಿಸಬೇಕಿದೆ. ಪೂರ್ಣ ಅನುಷ್ಠಾನವಾಗಲು ಒಂದೆರೆಡು ದಿನ ಹಿಡಿಯಲಿದೆ ಎಂದು ಊಬರ್ ಸಂಸ್ಥೆ ತಿಳಿಸಿದೆ.

ಸಾರಿಗೆ ಇಲಾಖೆ ವಾಹನದ ಬೆಲೆ ಆಧಾರದಲ್ಲಿ 4 ವಿಭಾಗದಲ್ಲಿ ಕಾರುಗಳನ್ನು ವಿಂಗಡಿಸಿದೆ. ಅವುಗಳಲ್ಲಿ 4 ಕಿ.ಮೀವರೆಗೆ ಕನಿಷ್ಠ ದರ 44-80ರೂ. ನಿಗದಿಪಡಿಸಲಾಗಿದ್ದು, ನಂತರದ ಪ್ರತಿ ಕಿ.ಮೀಗೆ ಪ್ರಯಾಣಿಕರು 11ರಿಂದ 45ರೂ ವರೆಗೆ ಪಡೆಯಬಹುದು ಎಂದು ಆದೇಶಿಸಿದೆ.
ಹೀಗಾಗಿ 4.ಕಿ.ಮೀ ಕನಿಷ್ಠ ದರ ಹಾಗೂ ತದನಂತರ ಪ್ರತಿ ಕಿ.ಮೀ ದರವನ್ನಷ್ಟೇ ಪ್ರಯಾಣಿಕರಿಂದ ಅಪ್ಲಿಕೇಷನ್ ಟ್ಯಾಕ್ಸಿಗಳು ಪಡೆಯಬಹುದು.
ಅನಧಿಕೃತ ದರದಿಂದ ಮುಕ್ತಿ: ಇನ್ನುಮುಂದೆ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿಗಳು ರೈಡ್ ಟೈಂ ಚಾರ್ಜ್ ಹಾಗೂ ಯಾವುದೇ ಇತರೆ ಸಬ್ ಚಾರ್ಜ್ ವಿಧಿಸುವಂತಿಲ್ಲ. ಇದು ಪ್ರಯಾಣಿಕರಿಗೆ ಕೊಂಚ ಸಮಾಧಾನದ ವಿಚಾರವಾಗಿದೆ. ಇಲ್ಲವಾದಲ್ಲಿ ಬೆಂಗಳೂರಿನ ಟ್ರಾಫಿಕ್ ನಡುವೆ ಸಿಲುಕಿಕೊಂಡರೆ 5 ಕಿ. ಮೀ ಕ್ರಮಿಸಲು ಅರ್ಧಗಂಟೆ ಹಿಡಿಯುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿ ನಿಮಿಷಕ್ಕೆ 1.50 ರೂ ವರೆಗೆ ಸರವನ್ನು ಪ್ರಯಾಣಿಕರ ಮೇಲೆ ಹೇರುತ್ತಿತ್ತು.
-
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications