Get Updates
Get notified of breaking news, exclusive insights, and must-see stories!

ಒಳಚರಂಡಿ ದುರಸ್ತಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವು

ಬೆಂಗಳೂರು, ಏ.27: ಒಳಚರಂಡಿ ದುರಸ್ತಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ.

ಬೆಂಗಳೂರಿನ ಕೆಜಿ ಹಳ್ಳಿ ಸಮೀಪದಲ್ಲಿ ಈ ದುರ್ಘಟನೆ ಸಂಭವಿಸಿದೆ. ಚೋಟು ಮತ್ತು ಗಫೂರ್ ಎಂಬುವವರು ಮೃತಪಟ್ಟಿದ್ದಾರೆ. ಕೆಜಿ ಹಳ್ಳಿ ಸಮೀಪ ಒಂದು ಟೀ ಅಂಗಡಿ ಇದೆ. ಆ ಟೀ ಅಂಗಡಿಯಿಂದ ಬಂದಂತಹ ನೀರು, ಇನ್ನಿತರೆ ಪದಾರ್ಥಗಳು ಹೋಗಿ ಒಂದು ಹೊಂಡದಲ್ಲಿ ಶೇಖರಣೆಯಾಗುತ್ತಿತ್ತು.

ಅದನ್ನು ಸರಿಪಡಿಸಲು ಈ ಇಬ್ಬರು ಕಾರ್ಮಿಕರಿಗೆ ಸ್ವಲ್ಪ ಹಣ ನೀಡಿ ಕರೆಸಿಕೊಳ್ಳಲಾಗಿತ್ತು. ಆದರೆ ಕೆಲಸ ನಡೆಯುತ್ತಿರುವ ವೇಳೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

Another two sanitation workers dies in Drain in Bengaluru

ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟೊಂದು ಮುಂದುವರೆದು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರು ಇನ್ನೂ ಕೂಡ ಇಂತಹ ಸಮಸ್ಯೆಯಿಂದ ಹೊರಬರಲಾಗಿಲ್ಲ.

ಚರಂಡಿ ಶುಚಿಗೊಳಿಸಲು ಮಾನವ ನಿರ್ಮಿತ ಹಲವು ಉಪಕರಣಗಳು ಬಂದಿದೆ ಆದರೆ ಅದನ್ನು ಯಾರೂ ಬಳಕೆ ಮಾಡುತ್ತಿಲ್ಲ, ವರ್ಷಕ್ಕೆ ನೂರಾರ ಕಾರ್ಮಿಕರು ಹೀಗೆ ಸಾವನ್ನಪ್ಪುತ್ತಲೇ ಇದ್ದಾರೆ. ಆದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ, ಕಡಿಮೆ ಖರ್ಚಿನಲ್ಲಿ ಕೆಲಸವಾಗುತ್ತೆ ಎನ್ನುವ ಮನೋಭಾವದಿಂದಲೇ ಮುಗ್ಧ ಜೀವಗಳ ಬಲಿ ಕೊಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+