ಆನೇಕಲ್ ಕರಗ: ಪೊರಕೆ ಹೊಡೆತ -ವಿಶಿಷ್ಟ ಆಚರಣೆಯ ಹಿತ
ಬೆಂಗಳೂರು, ಏಪ್ರಿಲ್ 19: ಆನೇಕಲ್ ಕರಗ ವಿಶಿಷ್ಟವಾದದ್ದು. ರಾಜಧಾನಿ ಬೆಂಗಳೂರು ಕರಗ ವಿಶ್ವ ವಿಖ್ಯಾತಿಯನ್ನು ಪಡೆದಿದ್ದರೆ ಆನೇಕಲ್ ಕರಗವೂ ಸಾಕಷ್ಟು ಖ್ಯಾತಿಯನ್ನು ಪಡೆದಿದೆ. ಕರಗ ಉತ್ಸವದ ಎರಡನೇ ದಿನ ನಡೆಯುವ ವಿಭಿನ್ನ ವೈಶಿಷ್ಟ್ಯತೆ ಅಂದರೆ ಕೋಟೆ ಜಗಳ ಮತ್ತು ಪೊರಕೆಯಲ್ಲಿ ಹೊಡೆಸಿಕೊಳ್ಳುವುದು. ಇದು ರಾಜ್ಯದಲ್ಲೇ ಇಲ್ಲದ ವಿಶಿಷ್ಟ ಆಚರಣೆ.
ಬೆಂಗಳೂರು ನಗರಕ್ಕೆ ವಿಖ್ಯಾತಿಯನ್ನ ತಂದುಕೊಟ್ಟ ಧಾರ್ಮಿಕ ಆಚರಣೆಯೇ ಕರಗ ಉತ್ಸವ ಇದೊಂದು ಐತಿಹಾಸಿಕ ಹಿನ್ನಲೆಯುಳ್ಳ ಆಚರಣೆ ಬೆಂಗಳೂರು ನಗರದಲ್ಲಿ ನಡೆಯುದಕ್ಕಿಂತ ವಿಶಿಷ್ಟವಾಗಿ ಆನೇಕಲ್ ಪಟ್ಟಣದಲ್ಲಿ ಕರಗ ಉತ್ಸವ ನಡೆಯುತ್ತದೆ. ದ್ರಾವಿಡ ಶೈಲಿಯಲ್ಲಿ ನಡೆಯುವ ಈ ಉತ್ಸವ ಎಲ್ಲರನ್ನೂ ಆಕರ್ಷಿಸುತ್ತದೆ, ಚೈತ್ರ ಮಾಸದ ಹುಣ್ಣಿಮೆಯಂದು ಬೆಂಗಳೂರು ನಗರದಲ್ಲಿ ಹೂವಿನ ಕರಗ ನಡೆದರೆ ಅಂದು ಆನೇಕಲ್ ಪಟ್ಟಣದಲ್ಲಿ ಹಸಿ ಕರಗ ಅಂದ್ರೇ ಹೂವಿನ ಕರಗದಷ್ಟೇ ವೈಭವಯುತವಾಗಿ ನಡೆದು ಮಾರನೇ ದಿನ ನಡೆಯುವುದೇ ಕೋಟೆ ಜಗಳ ಇದರ ವೈಶಿಷ್ಟ್ಯದ ವಿವರಣೆಗಳಿದೆ.
ಕೆಂಪು ಬಟ್ಟೆ ತೊಟ್ಟು, ಮುಖಕ್ಕೆ ಬಣ್ಣದ ಬಡಿದುಕೊಂಡು ಆವೇಶಭರಿತನಾಗಿ ಪೊರಕೆ ಹಾಗೂ ಮೊರ ಕೈಯಲ್ಲಿ ಹಿಡಿದು ಮನಸೋ ಇಚ್ಚೆ ಜನರನ್ನು ಹೊಡೆಯುವುದು. ಆವೇಶಭರಿತ ವ್ಯಕ್ತಿಯಿಂದ ಏಟು ತಿಂದು ವಿಬಿನ್ನವಾದ ರೀತಿಯಲ್ಲಿ ಹರಕೆ ತೀರಿಸಿಕೊಳ್ಳುತ್ತಿರುವ ಉತ್ಸವಕ್ಕೆ ಸಾವಿರಾರು ಜನ ಸಾಕ್ಷಿಯಾಗುತ್ತಾರೆ.

*ಆವೇಷ ಬರಿತ ವ್ಯಕ್ತಿಯಿಂದ ಬಿತ್ತು ಪೊರಕೆ ಹಾಗೂ ಮೊರದಿಂದ ಏಟು.
*ಹಣ ಕೊಟ್ಟು ಏಟು ತಿಂದರೆ ಇಷ್ಟಾರ್ಥ ಈಡೇರುತ್ತದೆ ಎನ್ನುವ ನಂಬಿಕೆ.
*ಕರಗ ಉತ್ಸವದ ಎರಡನೇ ದಿನ ಆಯೋಜಿಸಲ್ಪಡುವ ಕೋಟೆ ಜಗಳ.
*ಆನೇಕಲ್ ಕರಗ ಉತ್ಸವದ ಎರಡನೇ ದಿನ ನಡೆಯುವ ವಿಭಿನ್ನ ಕಾರ್ಯಕ್ರಮ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ, ಹೆಸರಾಂತ ಪುರಾಣ ಪ್ರಸಿದ್ದ ಧರ್ಮರಾಯ ಸ್ವಾಮಿ ದ್ರೌಪತಮ್ಮ ಹಸಿಕರಗದ ನಂತರ ಎರಡನೇ ದಿನ ನಡೆಯುವ ಕೋಟೆ ಜಗಳ ಆನೇಕಲ್ ಪಟ್ಟಣದ ಸಂತೆ ಮೈದಾನದಲ್ಲಿ ನಡೆಯಿತು. ಪಾಂಡವರು ಹಾಗೂ ಕೌರವರ ಮಧ್ಯೆ ನಡೆದ ಕುರುಕ್ಷೇತ್ರ ಯುದ್ಧದ ಮಾದರಿಯಲ್ಲಿ ಕೋಟೆ ಜಗಳ ಏರ್ಪಡಿಸಲಾಗಿತ್ತು. ಯುದ್ಧದ ಅಂತ್ಯದಲ್ಲಿ ಪ್ರತ್ಯಕ್ಷವಾಗುವ ರಣಕಾಳಿ ದುಷ್ಟರನ್ನು ಸಂಹರಿಸಿ, ಭಕ್ತರನ್ನು ಪಾಲಿಸುವ ಸಂಕೇತವಾಗಿ ಈ ಉತ್ಸವ ನಡೆಯುತ್ತದೆ. ಕೌರವರು ದುಷ್ಟತನದಿಂದ ರಚಿಸಿದ 'ಪದ್ಮವ್ಯೂಹ'ವನ್ನು ಅರ್ಜುನನ ಮಗ ವೀರ ಅಭಿಮನ್ಯು ಭೇದಿಸಿ ವಿಜಯಿಯಾದ ಕಲ್ಪನೆ ಈ ಕೊಟೆ ಜಗಳ ಆಗಿದ್ದು, ಸಂತೆ ಮೈದಾನದ ಮರಗಳಿಂದ ಕೋಟೆ ನಿರ್ಮಾಣ ಮಾಡಿ, ಉತ್ಸವ ಆರಂಭವಾಗುತ್ತಿದ್ದಂತೆ ಪಾಂಡವರು ಹಾಗೂ ಶ್ರೀಕೃಷ್ಣನ ಉತ್ಸವ ಮೂರ್ತಿಗಳನ್ನು ತಂದು ಕೂರಿಸಲಾಗುತ್ತದೆ.

ಕರಗ ಹೊರುವ ಚಂದ್ರಪ್ಪ ಇಲ್ಲಿಗೆ ಬಂದಾಗ ಉತ್ಸವಕ್ಕೆ ಬಂದ ಭಕ್ತರು ಆತನ ಕಾಲಿಗೆ ನಮಸ್ಕರಿಸಿ ಅರಿಶಿನ ಪ್ರಸಾದ ಸ್ವೀಕರಿಸುತ್ತಾರೆ. ರಣ ಕಾಳಿ ವೇಷಧಾರಿ ವ್ಯಕ್ತಿಯೊಬ್ಬ ನೆರೆದ ಭಕ್ತರ ತಲೆಯ ಮೇಲೆ ಪೊರಕೆ ಹಾಗೂ ಮೊರದಿಂದ ಹೊಡೆದು ದಕ್ಷಿಣೆ ಸ್ವೀಕರಿಸುತ್ತಾನೆ. ಕೊಟೆಯೊಳಗೆ ನಾಲ್ಕು ಮೂಲೆಯಲ್ಲಿ ಯುವಕರನ್ನು ಶವಗಳಂತೆ ಮಲಗಿಸಿ ಮೈಮೇಲೆ ಬಿಳಿ ಪಂಚೆ ಹೊದಿಸಲಾಗಿತ್ತೆ. ಆಯುಧ ಹಿಡಿದ ಕೆಲವರು ಕೋಟೆ ಸಂರಕ್ಷಣೆ ಮಾಡಿದರೆ, ಮಕರಂದನ ಪಾತ್ರಧಾರಿ ಹಾಸ್ಯ ಮಾಡುತ್ತಾ ಎಲ್ಲರ ಗಮನ ಸೆಳೆದನು. ಇದಾದ ಕೆಲ ಕ್ಷಣಗಳಲ್ಲಿ ರಣಕಾಳಿಗೆ ಮೇಕೆಯೊಂದನ್ನು ಬಲಿ ನೀಡಿ, ನಂತರ ಅದರ ದೇಹ ಸೀಳಿ ಶ್ವಾಸಕೋಶವನ್ನು ಹೊರತೆಗೆದು ಈ ಸಮಯದಲ್ಲಿ ರಣಕಾಳಿ ವೇಷಧಾರಿ ವ್ಯಕ್ತಿಗೆ ಆವೇಶ ಬಂದು ಆತ ಹೂಂಕರಿಸುತ್ತಾ ಜೋರಾಗಿ ಘರ್ಜಿಸಿ ಬಾಯಿ ತೆಗೆದಾಗ, ಈ ಶ್ವಾಸಕೋಶವನ್ನು ಆತನ ಬಾಯಿಗೆ ತುರುಕಲಾಗುತ್ತದೆ.
ಈ ವೇಳೆ ಆವೇಶ ಬಂದ ಸಮಯದಲ್ಲಿ ಈತನಿಂದ ಪೊರಕೆ ಮತ್ತು ಮೊರದ ಪೆಟ್ಟು ತಿಂದರೆ ಒಳಿತಾಗುತ್ತದೆಂಬ ಭಾವನೆ ಇದೆ. ಇದ್ರಿಂದ ಏಟು ತಿನ್ನಲು ಸಾವಿರಾರು ಜನ ಹಣ ನೀಡಿ ಏಟು ತಿಂದು ತಮ್ಮ ಹರಕೆಯನ್ನು ತೀರಿಸಿದರು. ಆ ಮೂಲಕ ಆನೇಕಲ್ ಕರಗ ವಿಶಿಷ್ಟ ರೀತಿಯಲ್ಲಿ ಕಳೆ ಗಟ್ಟಿದಂತಾಗಿದೆ.
Recommended Video
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications