ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಗಿಹಳ್ಳಿ ಗ್ರಾಪಂ ದತ್ತು ಪಡೆದ ಅನಂತಕುಮಾರ್

By Kiran B Hegde
|
Google Oneindia Kannada News

ಬೆಂಗಳೂರು, ನ. 19: ಕೇಂದ್ರ ಸರ್ಕಾರದ 'ಸಂಸದ ಆದರ್ಶ ಗ್ರಾಮ ಯೋಜನೆ' ಅಡಿ ಕೇಂದ್ರ ಸಚಿವ ಅನಂತಕುಮಾರ್ ಅವರು ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ರಾಗಿಹಳ್ಳಿ ಗ್ರಾಮ ಪಂಚಾಯಿತಿಯನ್ನು ದತ್ತು ಪಡೆದಿದ್ದಾರೆ. [ಒಂದೊಂದು ಗ್ರಾಮ ದತ್ತು ಪಡೆಯಿರಿ]

ananth

ಈ ಕುರಿತು ಅನಂತಕುಮಾರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ರವಿಶಂಕರ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ರಾಗಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಯೋಜನೆ ಜಾರಿಗಾಗಿ ಸಮಯಕ್ಕೆ ತಕ್ಕಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅನಂತಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ. [ಜಯಪುರ ದತ್ತು ಪಡೆದ ಮೋದಿ]

ಈ ಕುರಿತು ಪತ್ರದ ಪ್ರತಿಯೊಂದನ್ನು ನವ ದೆಹಲಿಯ ಕೃಷಿ ಭವನದಲ್ಲಿರುವ ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಅಪರಾಜಿತಾ ಸಾರಂಗಿ ಅವರಿಗೂ ಕಳುಹಿಸಿದ್ದಾರೆ. [ಆದರ್ಶ ಗ್ರಾಮ ಪಟ್ಟಿ ಡಿಸಿಗೆ ನೀಡಲು ಸೂಚನೆ]

English summary
Central Minister Ananthkumar adopts Ragihalli under Adarsh Gram Yojana. He wrote a letter to dc of Bengaluru urban regarding necessary action for effective implementation of the scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X