ರಾಗಿಹಳ್ಳಿ ಗ್ರಾಪಂ ದತ್ತು ಪಡೆದ ಅನಂತಕುಮಾರ್
ಬೆಂಗಳೂರು, ನ. 19: ಕೇಂದ್ರ ಸರ್ಕಾರದ 'ಸಂಸದ ಆದರ್ಶ ಗ್ರಾಮ ಯೋಜನೆ' ಅಡಿ ಕೇಂದ್ರ ಸಚಿವ ಅನಂತಕುಮಾರ್ ಅವರು ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ರಾಗಿಹಳ್ಳಿ ಗ್ರಾಮ ಪಂಚಾಯಿತಿಯನ್ನು ದತ್ತು ಪಡೆದಿದ್ದಾರೆ. [ಒಂದೊಂದು ಗ್ರಾಮ ದತ್ತು ಪಡೆಯಿರಿ]

ಈ ಕುರಿತು ಅನಂತಕುಮಾರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ರವಿಶಂಕರ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ರಾಗಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಯೋಜನೆ ಜಾರಿಗಾಗಿ ಸಮಯಕ್ಕೆ ತಕ್ಕಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅನಂತಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ. [ಜಯಪುರ ದತ್ತು ಪಡೆದ ಮೋದಿ]
ಈ ಕುರಿತು ಪತ್ರದ ಪ್ರತಿಯೊಂದನ್ನು ನವ ದೆಹಲಿಯ ಕೃಷಿ ಭವನದಲ್ಲಿರುವ ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಅಪರಾಜಿತಾ ಸಾರಂಗಿ ಅವರಿಗೂ ಕಳುಹಿಸಿದ್ದಾರೆ. [ಆದರ್ಶ ಗ್ರಾಮ ಪಟ್ಟಿ ಡಿಸಿಗೆ ನೀಡಲು ಸೂಚನೆ]












Click it and Unblock the Notifications