ತಂದೆಯ ಮೃತದೇಹ ದಾನ ಮಾಡಿದ ಶಾಲಿನಿ ರಜನೀಶ್
ಮಾರ್ಚ್ 17 ಶುಕ್ರವಾರದಂದು ಕೊನೆಯುಸಿರೆಳೆದ ತಮ್ಮ ತಂದೆ ನಿವೃತ್ತ ಐಎ ಎಸ್ ಅಧಿಕಾರಿ ಪಿ.ಪಿ. ಛಬ್ರಾ (81) ಅವರ ದೇಹವನ್ನು ಬೆಂಗಳೂರು ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ (BMCRI) ಗೆ ಶಾಲಿನಿ ರಜನೀಶ್ ದಾನ ಮಾಡಿದ್ದಾರೆ.
ಬೆಂಗಳೂರು ಮಾರ್ಚ್ 21: ಆದರ್ಶದ ಕತೆ ಹೇಳುವ ಹಲವು ಐಎ ಎಸ್ ಆಫೀಸರ್ ಗಳನ್ನು ನೋಡಿದ್ದೇವೆ. ಆದರೆ ಆದರ್ಶವನ್ನು ಸ್ವತಃ ಪಾಲಿಸುವವರು ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ. ಅಂಥ ಅಧಿಕಾರಿಗಳಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾದ ಮಹಿಳಾ ಐಎ ಎಸ್ ಅಧಿಕಾರಿ ಶಾಲಿನಿ ರಜನೀಶ್ ಸಹ ಒಬ್ಬರು.
ಮಾರ್ಚ್ 17 ಶುಕ್ರವಾರದಂದು ಕೊನೆಯುಸಿರೆಳೆದ ತಮ್ಮ ತಂದೆ ನಿವೃತ್ತ ಐಎ ಎಸ್ ಅಧಿಕಾರಿ ಪಿ.ಪಿ. ಛಬ್ರಾ (81) ಅವರ ದೇಹವನ್ನು ಬೆಂಗಳೂರು ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ (BMCRI) ಗೆ ಶಾಲಿನಿ ರಜನೀಶ್ ದಾನ ಮಾಡಿದ್ದಾರೆ.[ಶವಚ್ಛೇದ : ಅಪ್ಪನ ಆಸೆ ಈಡೇರಿಸಿದ ಮಗ]

ಪಾಪದ ಭಯ
ಆಯಾ ಮತದ, ಜಾತಿಯ ಸಂಪ್ರದಾಯಕ್ಕನುಸಾರವಾಗಿ ಶವದ ಅಂತ್ಯಕ್ರಿಯೆ ಮಾಡದೇ ಇದ್ದಲ್ಲಿ ಆ ಕುಟುಂಬದ ಜನರು ಪಾಪಕ್ಕೆ ಭಾಜನರಾಗುತ್ತಾರೆ ಎಂಬ ನಂಬಿಕೆ ಬಹುಪಾಲು ಎಲ್ಲ ಮತಗಳಲ್ಲೂ ಇದೆ.[ಬೆಳಗಾವಿ ವೈದ್ಯನಿಂದ ತಂದೆಯ ದೇಹ ಛೇದನ!]

ಶವದ ಕೊರತೆ
ಇದರಿಂದಾಗಿ ಎಲ್ಲ ಮೆಡಿಕಲ್ ಕಾಲೇಜ್ ಗಳೂ ಸಂಶೋಧನೆಗಾಗಿ ಶವದ ಕೊರತೆಯನ್ನು ಎದುರಿಸುತ್ತಿವೆ. 50-60 ಮೆಡಿಕಲ್ ವಿದ್ಯಾರ್ಥಿಗಳಿಗೆ ಸಂಶೋಧನೆಗಾಗಿ ಒಂದು ಶವ ಸಿಕ್ಕುವುದೇ ಕಷ್ಟವಾಗಿದೆ.

ಜಾಗೃತಿ ಕಾರ್ಯಕ್ರಮ
ಸಂಶೋಧನೆಗಾಗಿ ಶವದ ಕೊರತೆಯ ಕುರಿತು ಹಲವು ಮೆಡಿಕಲ್ ಕಾಲೇಜುಗಳು ಈಗಾಗಲೇ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದರೂ, ಇದರಿಂದ ಹೆಚ್ಚೇನೂ ಪ್ರಯೋಜನವಾದಂತಿಲ್ಲ. ಶವ ಸಂಸ್ಕಾರಕ್ಕಿಂತ ದೇಹ ದಾನ ಅತ್ಯಂತ ಪುಣ್ಯದ ಕೆಲಸ ಎಂಬುದು ಜನರಿಗೆ ಅರಿವಾಗಬೇಕಿದೆ ಎಂಬುದು ಶಾಲಿನಿ ರಜನೀಶ್ ಅವರ ಅಭಿಪ್ರಾಯ.

ಕುಟುಂಬಸ್ಥರ ಒತ್ತಡ
ಹಲವರು ಸ್ವ ಇಚ್ಛೆಯಿಂದ ಮುಂದೆ ಬಂದು ತಮ್ಮ ಸಾವಿನ ನಂತರ ತಮ್ಮ ದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ನೀಡಲು ಉತ್ಸುಕತೆ ತೋರಿದರೂ ಅವರ ಕುಟುಂಬಸ್ಥರೇ ತಡೆಯುತ್ತಿರುವ ಪರಿಸ್ಥಿತಿ ಹಲವೆಡೆ ಇದೆ.

ಮಗನಿಂದಲೇ ತಂದೆಯ ಅಂಗಚ್ಛೇದ
2010 ರಲ್ಲಿ ಬೆಳಗಾವಿಯ ಕೆ.ಎಲ್.ಇ. ಕಾಲೇಜಿನ ಅಂಗರಚನಾಶಾಸ್ತ್ರ ಸಹಪ್ರಾದ್ಯಾಪಕ ಡಾ. ಮಹಂತೇಶ್ ರಾಮಣ್ಣನವರ್ ತಮ್ಮ ತಂದೆ ಬೈಲಹೊಂಗಲದ ವಾ.ಬಿ.ಎಸ್.ರಾಮಣ್ಣನವರ ಮೃತದೇಹವನ್ನು ತಮ್ಮ ಕಾಲೇಜಿಗೆ ದಾನ ನೀಡಿ, ಸ್ವತಃ ಅಂಗಚ್ಛೇದ ಮಾಡಿ ದಾಖಲೆ ಬರೆದಿದ್ದರು. ಇದು ಇತಿಹಾಸದ ಪುಟ ಸೇರಿತ್ತು.

ಒಂದು ಶವಕ್ಕೆ 10,000 ರೂ.!
ಇಷ್ಟು ದಿನ ಸರ್ಕಾರಿ ಮೆಡಿಕಲ್ ಕಾಲೇಜುಗಳು ರೂ.10,000 ಕ್ಕೆ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಶವ ಪೂರೈಸುತ್ತಿದ್ದವು. ಆದರೆ ಈಗ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲೇ ಶವದ ಕೊರತೆ ಶುರುವಾಗಿದೆ.
-
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ












Click it and Unblock the Notifications