ತಂದೆಯ ಮೃತದೇಹ ದಾನ ಮಾಡಿದ ಶಾಲಿನಿ ರಜನೀಶ್
ಮಾರ್ಚ್ 17 ಶುಕ್ರವಾರದಂದು ಕೊನೆಯುಸಿರೆಳೆದ ತಮ್ಮ ತಂದೆ ನಿವೃತ್ತ ಐಎ ಎಸ್ ಅಧಿಕಾರಿ ಪಿ.ಪಿ. ಛಬ್ರಾ (81) ಅವರ ದೇಹವನ್ನು ಬೆಂಗಳೂರು ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ (BMCRI) ಗೆ ಶಾಲಿನಿ ರಜನೀಶ್ ದಾನ ಮಾಡಿದ್ದಾರೆ.
ಬೆಂಗಳೂರು ಮಾರ್ಚ್ 21: ಆದರ್ಶದ ಕತೆ ಹೇಳುವ ಹಲವು ಐಎ ಎಸ್ ಆಫೀಸರ್ ಗಳನ್ನು ನೋಡಿದ್ದೇವೆ. ಆದರೆ ಆದರ್ಶವನ್ನು ಸ್ವತಃ ಪಾಲಿಸುವವರು ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ. ಅಂಥ ಅಧಿಕಾರಿಗಳಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾದ ಮಹಿಳಾ ಐಎ ಎಸ್ ಅಧಿಕಾರಿ ಶಾಲಿನಿ ರಜನೀಶ್ ಸಹ ಒಬ್ಬರು.
ಮಾರ್ಚ್ 17 ಶುಕ್ರವಾರದಂದು ಕೊನೆಯುಸಿರೆಳೆದ ತಮ್ಮ ತಂದೆ ನಿವೃತ್ತ ಐಎ ಎಸ್ ಅಧಿಕಾರಿ ಪಿ.ಪಿ. ಛಬ್ರಾ (81) ಅವರ ದೇಹವನ್ನು ಬೆಂಗಳೂರು ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ (BMCRI) ಗೆ ಶಾಲಿನಿ ರಜನೀಶ್ ದಾನ ಮಾಡಿದ್ದಾರೆ.[ಶವಚ್ಛೇದ : ಅಪ್ಪನ ಆಸೆ ಈಡೇರಿಸಿದ ಮಗ]

ಪಾಪದ ಭಯ
ಆಯಾ ಮತದ, ಜಾತಿಯ ಸಂಪ್ರದಾಯಕ್ಕನುಸಾರವಾಗಿ ಶವದ ಅಂತ್ಯಕ್ರಿಯೆ ಮಾಡದೇ ಇದ್ದಲ್ಲಿ ಆ ಕುಟುಂಬದ ಜನರು ಪಾಪಕ್ಕೆ ಭಾಜನರಾಗುತ್ತಾರೆ ಎಂಬ ನಂಬಿಕೆ ಬಹುಪಾಲು ಎಲ್ಲ ಮತಗಳಲ್ಲೂ ಇದೆ.[ಬೆಳಗಾವಿ ವೈದ್ಯನಿಂದ ತಂದೆಯ ದೇಹ ಛೇದನ!]

ಶವದ ಕೊರತೆ
ಇದರಿಂದಾಗಿ ಎಲ್ಲ ಮೆಡಿಕಲ್ ಕಾಲೇಜ್ ಗಳೂ ಸಂಶೋಧನೆಗಾಗಿ ಶವದ ಕೊರತೆಯನ್ನು ಎದುರಿಸುತ್ತಿವೆ. 50-60 ಮೆಡಿಕಲ್ ವಿದ್ಯಾರ್ಥಿಗಳಿಗೆ ಸಂಶೋಧನೆಗಾಗಿ ಒಂದು ಶವ ಸಿಕ್ಕುವುದೇ ಕಷ್ಟವಾಗಿದೆ.

ಜಾಗೃತಿ ಕಾರ್ಯಕ್ರಮ
ಸಂಶೋಧನೆಗಾಗಿ ಶವದ ಕೊರತೆಯ ಕುರಿತು ಹಲವು ಮೆಡಿಕಲ್ ಕಾಲೇಜುಗಳು ಈಗಾಗಲೇ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದರೂ, ಇದರಿಂದ ಹೆಚ್ಚೇನೂ ಪ್ರಯೋಜನವಾದಂತಿಲ್ಲ. ಶವ ಸಂಸ್ಕಾರಕ್ಕಿಂತ ದೇಹ ದಾನ ಅತ್ಯಂತ ಪುಣ್ಯದ ಕೆಲಸ ಎಂಬುದು ಜನರಿಗೆ ಅರಿವಾಗಬೇಕಿದೆ ಎಂಬುದು ಶಾಲಿನಿ ರಜನೀಶ್ ಅವರ ಅಭಿಪ್ರಾಯ.

ಕುಟುಂಬಸ್ಥರ ಒತ್ತಡ
ಹಲವರು ಸ್ವ ಇಚ್ಛೆಯಿಂದ ಮುಂದೆ ಬಂದು ತಮ್ಮ ಸಾವಿನ ನಂತರ ತಮ್ಮ ದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ನೀಡಲು ಉತ್ಸುಕತೆ ತೋರಿದರೂ ಅವರ ಕುಟುಂಬಸ್ಥರೇ ತಡೆಯುತ್ತಿರುವ ಪರಿಸ್ಥಿತಿ ಹಲವೆಡೆ ಇದೆ.

ಮಗನಿಂದಲೇ ತಂದೆಯ ಅಂಗಚ್ಛೇದ
2010 ರಲ್ಲಿ ಬೆಳಗಾವಿಯ ಕೆ.ಎಲ್.ಇ. ಕಾಲೇಜಿನ ಅಂಗರಚನಾಶಾಸ್ತ್ರ ಸಹಪ್ರಾದ್ಯಾಪಕ ಡಾ. ಮಹಂತೇಶ್ ರಾಮಣ್ಣನವರ್ ತಮ್ಮ ತಂದೆ ಬೈಲಹೊಂಗಲದ ವಾ.ಬಿ.ಎಸ್.ರಾಮಣ್ಣನವರ ಮೃತದೇಹವನ್ನು ತಮ್ಮ ಕಾಲೇಜಿಗೆ ದಾನ ನೀಡಿ, ಸ್ವತಃ ಅಂಗಚ್ಛೇದ ಮಾಡಿ ದಾಖಲೆ ಬರೆದಿದ್ದರು. ಇದು ಇತಿಹಾಸದ ಪುಟ ಸೇರಿತ್ತು.

ಒಂದು ಶವಕ್ಕೆ 10,000 ರೂ.!
ಇಷ್ಟು ದಿನ ಸರ್ಕಾರಿ ಮೆಡಿಕಲ್ ಕಾಲೇಜುಗಳು ರೂ.10,000 ಕ್ಕೆ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಶವ ಪೂರೈಸುತ್ತಿದ್ದವು. ಆದರೆ ಈಗ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲೇ ಶವದ ಕೊರತೆ ಶುರುವಾಗಿದೆ.
-
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ












Click it and Unblock the Notifications