ಚಂದ್ರಶೇಖರ್ ಪಾಟೀಲ್ರಿಗೆ ಎಲ್ಲಾ ಬಣ್ಣದ ವಂದನೆಗಳು
ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಸೋಮವಾರ ಬೆಳಗ್ಗೆ ನಿಧನರಾಗಿದ್ದು, ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
"ಈ ಚಾನಲ್ಗಳು ಒಂಥರಾ ಗೋಶಾಲೆಗಳಿದ್ದಂಗೆ, ನಾವು ಮುದಿ ದನಗಳು, ನಮಗೂ ಈ ಗೋಶಾಲೆಗಳೇ ಖಾಯಂ," ಹೀಗೆಂದವರು ಚಂದ್ರಶೇಖರ್ ಪಾಟೀಲ್ (ಚಂಪಾ).
ಅದೊಂದು ದಿನ ಸಮಯ ಟಿವಿ ಲೈವ್ ಕಾರ್ಯಕ್ರಮಕ್ಕೆಂದು ಚಂಪಾ ಅವರನ್ನು ಆಹ್ವಾನಿಸಿದ್ದೆವು. ಕಾರ್ಯಕ್ರಮ ಏನೆಂಬುದು ನೆನಪಿನಲ್ಲಿಲ್ಲ. ಸಮಯ ಟಿವಿ ಕಚೇರಿಗೆ ಬರುವಷ್ಟರಲ್ಲಿ ಜನಶ್ರೀ ಟಿವಿಯ ಕಾರ್ಯಕ್ರಮ ಮುಗಿಸಿ ಬಂದಿದ್ದರು. ನಮ್ಮ ಚಾನಲ್ಗೆ ಬಂದಾಕ್ಷಣ ಅವರನ್ನು ರಿಸೀವ್ ಮಾಡಿದ ನಮ್ಮನ್ನು ನೋಡಿ ಮೇಲಿನಂತೆ ಹೇಳಿದ್ದರು.

ಚಂಪಾ ತಮ್ಮನ್ನು ತಾವು ಮುದಿ ದನ ಎಂದು ಕರೆದುಕೊಂಡಿದ್ದು ಮೇಲ್ನೋಟಕ್ಕೆ ತಮಾಷೆಯಾಗಿ ಕಂಡರೂ ನನಗಂತೂ ಬಹಳ ಇಷ್ಟವಾಗಿತ್ತು. ಮುದಿ ಅಂದರೆ ಅನುಭವ, ಮುದಿ ಎಂದರೆ ಜ್ಞಾನ ಭಂಡಾರ, ಮುದಿ ಎಂದರೆ ಗತಿಸಿಹೋದ ಘಟನೆಗಳ ಕಣ್ ಸಾಕ್ಷಿ. ಅಷ್ಟೇ ಅಲ್ಲ ಮುದಿ ಎಂದರೆ ನಾಡಿನ ಅಸ್ಮಿತೆಯೂ ಹೌದು.
ಹೊಸ ಕಾಲಮಾನದ ಪತ್ರಕರ್ತರಿಗೆ ನಾಡು ನುಡಿ, ನೆಲ, ಜನ, ರಾಜಕೀಯ, ಇತಿಹಾಸ ಪರಂಪರೆಯ ಜ್ಞಾನ ದಾಟಿಸುವ ನಡೆದಾಡುವ ಎನ್ಸೈಕ್ಲೋಪೀಡಿಯಾದಂತಹ ಚಂಪಾರಂಥ ಹಿರಿಯರನ್ನು ಕಳೆದುಕೊಂಡ ನಷ್ಟ ಅವರ ಕುಟುಂಬಕ್ಕಷ್ಟೇ ಅಲ್ಲ. ಅವರ ನಿಧನ ಈ ನಾಡಿನ ಅತಿ ದೊಡ್ಡ ನಷ್ಟ ಎಂದೇ ಹೇಳಬೇಕು.
ಚಂಪಾ ಅವರೊಳಗೆ ಕವಿ ಅಥವಾ ನಾಟಕಕಾರನಷ್ಟೇ ಇರಲಿಲ್ಲ. ಅವರಲ್ಲೊಬ್ಬ ಸಂಘಟಕ, ಹೋರಾಟಗಾರ, ಎದುರು ಕಂಡ ತಪ್ಪನ್ನು ನಿರ್ದಾಕ್ಷಿಣ್ಯವಾಗಿ ಹೇಳುವ "ಗಾಂಧಿ"ಯೂ ಇದ್ದ.
If you don't resist evil you are committing sin ಎಂಬ ಗಾಂಧಿ ಮಾತಿನಂತೆ ಬದುಕಿ ನಡೆದು ಹೋದವರು ಚಂಪಾ. ಚಂಪಾ ನಿಮಗೆ ಲಾಲ್ ಸಲಾಂ ಅಷ್ಟೇ ಸಾಲದು. ನಿಮಗಿದೂ ಹಸಿರು ವಂದನೆಗಳು, ನೀಲಿ ವಂದನೆಗಳು, ಕಪ್ಪು ವಂದನೆಗಳು, ಹರಿಶಿಣ- ಕುಂಕುಮ ವಂದನೆಗಳು.
Recommended Video
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications