ಬಿಬಿಎಂಪಿ: ಕೆ.ಆರ್.ವೃತ್ತದ ಅಂಡರ್ಪಾಸ್ ದುರಂತದ ಬಳಿಕವೂ ಏನು ಬದಲಾಗಿಲ್ಲ
ಬೆಂಗಳೂರು, ಅಕ್ಟೋಬರ್ 17: ಸಂಚಾರ ದಟ್ಟಣೆ, ಕಸ ವಿಲೇವಾರಿ, ಮಳೆ ಕುರಿತು ಸಮಸ್ಯೆಗಳಿಗೆ ಸುದ್ದಿಯಾಗುತ್ತಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಐದು ತಿಂಗಳ ಹಿಂದೆ ಮಳೆ ನೀರಿಗೆ ಯುವತಿ ಸಿಲುಕಿ ಮೃತಪಟ್ಟಿದ್ದ ಘಟನೆಯಿಂದ ಭಾರೀ ಸುದ್ದಿ ಆಗಿತ್ತು. ಕಾರಣ ಬಿಬಿಎಂಪಿ ನಿರ್ವಹಣೆಯ ವೈಫಲ್ಯದಿಂದ ನಗರದ ಕೆ.ಆರ್ ವೃತ್ತದಲ್ಲಿ ರಸ್ತೆ ಅಂಡರ್ ಪಾಸ್ನಲ್ಲಿ ಕಾರು ಸಿಲುಕಿ ಯುವತಿಯೊಬ್ಬರು (22) ಮೃತಪಟ್ಟಿದ್ದರು. ಆದರೆ ಈ ದುರಂತರದ ಬಳಿವೂ ಯಾವುದೂ ಬದಲಾಗಿಲ್ಲ. ಪಾಲಿಕೆ ಕೈಗೊಂಡ ಯಾವ ಕನಿಷ್ಠ ಕ್ರಮಗಳು ಪೂರ್ಣಗೊಂಡಿಲ್ಲ.
ಸುಮಾರು ಐದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕೆಲವೇ ನಿಮಿಗಳಲ್ಲಿ ಸುರಿದ ಭಾರಿ ಮಳೆಗೆ ಕೆ.ಆರ್.ವೃತ್ತದಲ್ಲಿನ ರಸ್ತೆ ಅಂಡರ್ಪಾಸ್ ನಲ್ಲಿ ನೀರು ತುಂಬಿಕೊಂಡಿತ್ತು. ಅಂಧ್ರಪ್ರದೇಶ ಮೂಲದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಯುವತಿ ಇದ್ದ ಕಾರು ಇದೇ ಅಂಡರ್ಪಾಸ್ನಲ್ಲಿ ಸಿಲುಕಿತ್ತು.

ಕಾರಿನೋಳಗೆ ನೀರು ತುಂಬಿದ ಪರಿಣಾಮ ಯುವತಿ ಬಿಟ್ಟು ಬೇರೆಲ್ಲರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು. ಆದರೆ ಯುವತಿ ಉಸಿರುಚೆಲ್ಲಿದರಯ. ಈ ದುರಂತದಿದ್ದಾಗಿ ಪಾಲಿಕೆ ಆಡಳಿತ ವೈಖರಿ ಮೇಲೆ ಹಲವು ಅನುಮಾನ ಸೃಷ್ಟಿಸಿತ್ತು. ಘಟನೆ ಸಾಕಷ್ಟು ಚರ್ಚೆ ಆಗಿತ್ತು ಎಂದು TOI ವರದಿ ಮಾಡಿದೆ.
71 ಅಂಡರ್ಪಾಸ್ ತಪಾಸಣೆ, ಕೆಲಸ ಆಗಿದ್ದೆಷ್ಟು?
ಇದಾದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದ ಬಿಬಿಎಂಪಿ 71 ಅಂಡರ್ಪಾಸ್ ಪರಿಶೀಲನೆ ಮಾಡಿತು. ಆದರೆ ಐದು ತಿಂಗಳಾದರೂ ಯಾವುದು ಬದಲಾಗದೇ ಹಾಗೇಯೇ ಇದೆ. ಪಾಲಿಕೆಯ ನಿರ್ಲಕ್ಷ್ ಮತ್ತೆ ಮುಂದುವರಿದಿದೆ.
71 ಅಂಡರ್ಪಾಸ್ಗಳಲ್ಲಿ 03 ಅಂಡರ್ ಪಾಸ್ಗಳಿಗೆ ಮಳೆ ನೀರು ನುಗ್ಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿ ಎರಡು ಕೆಳ ಸೇತುವೆಗಳ ಕೆಲಸ ಆರಂಭಿಸಲಾಯಿತು. ಕೆ.ಆರ್ ಸರ್ಕಲ್ ಮತ್ತು ಲೆ ಮೆರಿಡಿಯನ್ ಬಳಿ, ಒಂದು ತಿಂಗಳ ಗಡುವು ನಿಗದಿ ಮಾಡಿದ್ದರೂ ಸಹಿತಿ ಈವರೆಗೆ ಅದು ಪೂರ್ಣಗೊಂಡಿಲ್ಲ.
ಶೀಘ್ರವೇ ಕೆಲಸ ಪೂರ್ಣದ ಭರವಸೆ
ಇನ್ನು ನಗರದ ಕನ್ನಿಂಗ್ಹ್ಯಾಮ್ ರಸ್ತೆಯಿಂದ ಸ್ಯಾಂಕಿ ರಸ್ತೆಗೆ ಸಂಪರ್ಕ ಸಾಧಿಸುವ ಲೆ ಮೆರಿಡಿಯನ್ ರಸ್ತೆ ಅಂಡರ್ಪಾಸ್ ಪ್ರವಾಹ ತಡೆಗೆ ಮೇಲ್ಛಾವಣಿ ಸರಿಪಡಿಸಬೇಕಿತ್ತು. ಕನ್ನಿಂಗ್ಹ್ಯಾಮ್ ರಸ್ತೆ ಬದಿಯಲ್ಲಿ ಮೇಲ್ಛಾವಣಿಯ ಕವರ್ ಶೀಟ್ಗಳನ್ನು ಸರಿಪಡಿಸಲಾಗಿದೆ. ಸ್ಯಾಂಕಿ ರಸ್ತೆ ಬದಿಯಲ್ಲಿ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಹೇಳಿದರು.

ಮೂಲಗಳ ಪ್ರಕಾರ, ಲೆ ಮೆರಿಡಿಯನ್ ಅಂಡರ್ಪಾಸ್ನಲ್ಲಿನ ಮಳೆ ನೀರು ಪ್ರವೇಶಿಸದಂತೆ ತಡೆಯಲು ಮೇಲಕ್ಕೆ ಮತ್ತು ಕೆಳಕ್ಕೆ ಎರಡೂ ರಾಂಪ್ಗಳಲ್ಲಿ ಕಲಾಯಿ ಬಣ್ಣದ ಹಾಳೆಗಳನ್ನು ಬಳಸಿ ಛಾವಣಿ ಸಿದ್ಧಪಡಿಸಲಾಗಿದೆ. ನೀರು ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಹಂಪ್ ನಿರ್ಮಿಸಲು ಯೋಚಿಸಿದೆ. ಹಗಲಿನಲ್ಲಿ ಬೆಳಕು ಬರಲು ಪೈಬರ್ ಸೀಟ್ ಅಳಡಿಸಿ, ಎಕ್ಸಾಸ್ಟ್ ಫ್ಯಾನ್ ಅಳವಡಿಸಲಾಗುತ್ತದೆ.
ಬಿಬಿಎಂಪಿ ಅಧಿಕಾರಿಗಳ ವರದಿಯಲ್ಲಿ ಏನಿದೆ
ಈ ಅಂಡರ್ಪಾಸ್ ವಿಚಾರವಾಗಿ ಪಾಲಿಕೆ ಅಧಿಕಾರಿಗಳ ವರದಿಯಲ್ಲಿ ಈ ಅಂಡರ್ಪಾಸ್ನಲ್ಲಿ ಎರಡು ಡ್ರೈನ್ಗಳನ್ನು ಹೊಂದಿವೆ. ಅವುಗಳು ಯಾವುದೇ ಮಳೆನೀರು ಜಾಲಕ್ಕೆ ಸಂಪರ್ಕ ಹೊಂದಿಲ್ಲ ಎಂದು ತಿಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಎರಡೂ ಚರಂಡಿಗಳನ್ನು ಮುಚ್ಚಲಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ.
ಕಳೆದ ಮೂರು ವರ್ಷಗಳಿಂದ, ಅಂಡರ್ಪಾಸ್ನಿಂದ ನೀರನ್ನು ಪಂಪ್ ಮಾಡುವ ತಾತ್ಕಾಲಿಕ ವ್ಯವಸ್ಥೆ ಜಾರಿಯಲ್ಲಿತ್ತು. ಇದೀಗ ನಡೆಯುತ್ತಿರುವ ಪುನರಾಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ನಂತರ ಈ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆಗಳು ಇವೆ.
ಇನ್ನೂ ದುರಂತೆ ನಡೆದ ಕೆ.ಆರ್.ವೃತ್ತದಲ್ಲಿ ಬಿಬಿಎಂಪಿಯು ಅಂಡರ್ಪಾಸ್ನ ಮೇಲೆ ಮತ್ತು ಡೌನ್ ರ್ಯಾಂಪ್ಗಳಲ್ಲಿ ಹೊಸ ಚರಂಡಿ ನಿರ್ಮಾಣ ಮಾಡಲಿದೆ. ಅಂಡರ್ಪಾಸ್ಗೆ ನೀರು ಹರಿದುಬರದಂತೆ ತಡೆಯಲು ಮತ್ತು ಮಳೆ ನೀರು ಸರಾಗವಾಗಿ ಹರಿದು ಹೋಗಲು ಎರಡು ಚೇಂಬರ್ ನಿರ್ಮಿಸಲಾಗಿದೆ. ಕೆಲವು ಕೆಲಸಗಳು ಇನ್ನೂ ಇಲ್ಲಿ ಬಾಕಿ ಇದೆ.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications