ಏರೋ ಇಂಡಿಯಾ-2021: ಕೆಂಪೇಗೌಡ ವಿಮಾನ ನಿಲ್ದಾಣ ತಲುಪಲು ಮಾರ್ಗ ಬದಲು
ಬೆಂಗಳೂರು, ಫೆಬ್ರವರಿ 2: ಬೆಂಗಳೂರಿನಲ್ಲಿ ಫೆ.3 ರಿಂದ ಆರಂಭವಾಗುವ ಏರೋ ಇಂಡಿಯಾ-2021ರ ಸಮಯದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಈ ಕೆಳಕಂಡ ಪರ್ಯಾಯ ಮಾರ್ಗಗಳನ್ನು ಬಳಸಬೇಕೆಂದು ಬೆಂಗಳೂರು ನಗರ ಸಂಚಾರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ. ವಾಹನ ಸವಾರರಿಗೆ ಫೆ.3ರ ಬೆಳಿಗ್ಗೆ 5ರಿಂದ ರಾತ್ರಿ 10 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದು ಫೆ.5 ರವರೆಗೆ ಇದೆ ನಿಯಮ ಜಾರಿಯಲ್ಲಿರಲಿದೆ.
Recommended Video
ಬೆಂಗಳೂರು ಪಶ್ಚಿಮ ಮತ್ತು ಉತ್ತರ ಭಾಗದ ಕಡೆಯಿಂದ

(ಕೆಂಗೇರಿ, ವಿಜಯನಗರ, ಮೈಸೂರು ರಸ್ತೆ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಪೀಣ್ಯ ಇತರೆ ಕಡೆಗಳಿಂದ)
ವಯಾ- ಗೊರಗುಂಟೆಪಾಳ್ಯ- ಬಿಇಎಲ್ ಜಂಕ್ಷನ್- ಎಡತಿರುವು- ಗಂಗಮ್ಮನಗುಡಿ ಸರ್ಕಲ್- ಎಂ.ಎಸ್ ಪಾಳ್ಯ-ಯಲಹಂಕ ಮದರ್ ಡೈರಿ ಜಂಕ್ಷನ್- ಮೇ| ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್- ಎಡತಿರುವು- ನಾಗೇನಹಳ್ಳಿ ಗೇಟ್- ಸಿಂಗನಾಯಕನಹಳ್ಳಿ- ರಾಜಾನುಕುಂಟೆ- ಬಲತಿರುವು- ಎಂ.ವಿ.ಐ.ಟಿ ಜಂಕ್ಷನ್- ಎಡತಿರುವು- ವಿದ್ಯಾನಗರ ಕ್ರಾಸ್- ಚಿಕ್ಕಜಾಲ- ಸಾದಹಳ್ಳಿ ಗೇಟ್- ಏರ್ ಪೋರ್ಟ್ ಟೋಲ್- 1ನೇ ಸರ್ಕಲ್- 2ನೇ ಸರ್ಕಲ್- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದಾಗಿದೆ.
ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಭಾಗದ ಕಡೆಯಿಂದ

(ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಜಯನಗರ, ಜೆ.ಪಿ ನಗರ, ಬನಶಂಕರಿ, ಬಸವನಗುಡಿ, ಮೆಜೆಸ್ಟಿಕ್, ಗಾಂಧಿನಗರ, ಎಂ.ಜಿ ರಸ್ತೆ)
ವಯಾ- ಬಸವೇಶ್ವರ ಸರ್ಕಲ್- ಮೇಕ್ರಿ ಸರ್ಕಲ್- ಎಡತಿರುವು- ಸದಾಶಿವ ನಗರ ಪೊಲೀಸ್ ಠಾಣೆ- ಬಲತಿರುವು- ನ್ಯೂ ಬಿಇಎಲ್ ರಸ್ತೆ- ಕುವೆಂಪು ಸರ್ಕಲ್- ಬಲತಿರುವು- ಭದ್ರಪ್ಪ ಲೇಔಟ್- ಹೆಬ್ಬಾಳ್ ಸರ್ಕಲ್- ವೀರಣ್ಣ ಪಾಳ್ಯ- ನಾಗವಾರ ಜಂಕ್ಷನ್- ಎಡತಿರುವು- ಥಣಿಸಂದ್ರ ಮುಖ್ಯರಸ್ತೆ- ರೇವಾ ಕಾಲೇಜ್ ಜಂಕ್ಷನ್- ಬಲತಿರುವು- ಬಾಗಲೂರು ಮುಖ್ಯರಸ್ತೆ- ಬಾಗಲೂರು ಗುಂಡಪ್ಪ ಎಡತಿರುವು-ಬಾಗಲೂರು ಬಸ್ ನಿಲ್ದಾಣ- ಎಡತಿರುವು- ಬಂಡಿಕೊಡಿಗೇಹಳ್ಳಿ ಮುಖ್ಯರಸ್ತೆ- ಮೈಲನಹಳ್ಳಿ ಕ್ರಾಸ್- ಎಡತಿರುವು- ಬೇಗೂರು ಬ್ಯಾಕ್ ಗೇಟ್- ಬಲತಿರುವು- 1ನೇ ಸರ್ಕಲ್ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದಾಗಿದೆ.
ಬೆಂಗಳೂರು ಪೂರ್ವ ವಿಭಾಗದ ಕಡೆಯಿಂದ

(ವರ್ತೂರು, ವೈಟ್ ಫೀಲ್ಡ್, ಕಾಡುಗೋಡಿ, ಕೆ.ಆರ್ ನಗರ, ಹಲಸೂರು, ಶಿವಾಜಿನಗರ, ಇಂದಿರಾ ನಗರ, ಬಾಣಸವಾಡಿ ಇತರೆ ಕಡೆಗಳಿಂದ)
ವಯಾ- ಟಿನ್ ಫ್ಯಾಕ್ಟರಿ- ರಾಮಮೂರ್ತಿ ನಗರ- ಹೆಣ್ಣೂರು ಕ್ರಾಸ್- ಹೆಣ್ಣೂರು ಮುಖ್ಯರಸ್ತೆ- ಭೈರತಿ ಕ್ರಾಸ್- ಹೊಸೂರು ಬಂಡೆ- ಚಾಗಲಹಟ್ಟಿ- ಬಾಗಲೂರು ಗುಂಡಪ್ಪ ಸರ್ಕಲ್- ಬಾಗಲೂರು ಬಸ್ ನಿಲ್ದಾಣ- ಬಂಡಿಕೊಡಿಗೇಹಳ್ಳಿ- ಮೈಲನಹಳ್ಳಿ- ಬೇಗೂರು ಬ್ಯಾಕ್ ಗೇಟ್ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸ್ ಪ್ರಕಟಿಸಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications