ಪಾಕ್ ಜೊತೆ ಯುದ್ಧಕ್ಕೆ ಯಾವುದೇ ಸಂದರ್ಭದಲ್ಲೂ ಸಿದ್ಧ: ನಿರ್ಮಲಾ ಸೀತಾರಾಮನ್
Recommended Video
ಬೆಂಗಳೂರು, ಫೆಬ್ರವರಿ 20: ಪಾಕಿಸ್ತಾನದ ಜೊತೆ ಯುದ್ಧ ಮಾಡಲು ಯಾವ ಸಂದರ್ಭದಲ್ಲಾದರೂ ನಾವು ಸಿದ್ಧ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಏರೋ ಇಂಡಿಯಾ : ಫೆ.23,24ರಂದು ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ
ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ ಆರಂಭಗೊಂಡಿರುವ ಏರೋ ಇಂಡಿಯಾ 2019ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಸಿಆರ್ಪಿಎಫ್ ಯೋಧರ ಮೇಲಿನ ಉಗ್ರರ ದಾಳಿಯಿಂದ ನಾವು ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ, ದಾಳಿ ನಡೆದ ದಿನವೇ ಯೋಧರು ಪ್ರತಿದಾಳಿಗೆ ಸಿದ್ಧರಿದ್ದರು. ಈಗಲೂ ಸಿದ್ಧರಿದ್ದಾರೆ.
ಏರೋ ಇಂಡಿಯಾ ದುರ್ಘಟನೆ : ವಿಂಗ್ ಕಮಾಂಡರ್ ಸಾಹಿಲ್ ಸಾವು
ಪುಲ್ವಾಮಾ ಮಾತ್ರವಲ್ಲ ಈ ಮೊದಲು ಮುಂಬೈನಲ್ಲೂ ಕೂಡ ಉಗ್ರರ ದಾಳಿ ನಡೆದಿತ್ತು. ಅಂದು ಪಾಕಿಸ್ತಾನಕ್ಕೆ ಸಾಕ್ಷಿ ಜೊತೆಯಲ್ಲಿ ಮಾಹಿತಿ ನೀಡಿದ್ದೆವು, ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಈಗ ಸಾಕ್ಷ್ಯಾಧಾರ ಕೇಳುತ್ತಿರುವ ಪಾಕ್ ಪ್ರಧಾನಿ ಹುಸಿ ಭರವಸೆ ನೀಡುತ್ತಿದ್ದಾರೆ ಎಂದರು.
ಏರೋ ಇಂಡಿಯಾ ಶೋ ತಾಲೀಮಿನಲ್ಲಿ ಅಪಘಾತಕ್ಕೀಡಾದ ಸೂರ್ಯ ಕಿರಣ್ ಯುದ್ಧ ವಿಮಾನದ ಬಗ್ಗೆ ಮಾತನಾಡಿದ ಅವರು ತನಿಖೆ ನಡೆಯುತ್ತಿದೆ. ತನಿಖೆ ನಡೆದ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದರು.