ಆಡುಗೋಡಿ : ಖಿನ್ನತೆಗೆ ಒಳಗಾಗಿ ಎಎಸ್ಐ ನೇಣಿಗೆ ಶರಣು
ಬೆಂಗಳೂರು, ಮೇ 20 :ಪ್ರೀತಿಯ ಮಗನನ್ನು ಕಳೆದುಕೊಂಡು ತಿಂಗಳುಗಳು ಕಳೆದರೂ ಹುಡುಕಲು ಸಾಧ್ಯವಾಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರೊಬ್ಬರು ನೇಣಿಗೆ ಶರಣಾಗಿರುವ ಘಟನೆ ತಡರಾತ್ರಿ ನಡೆದಿದೆ.
ಕಾಣೆಯಾಗಿದ್ದ ಮಗನನ್ನು ಪತ್ತೆ ಹಚ್ಚಲು ಇನ್ನಿಲ್ಲದ ಪ್ರಯತ್ನ ಮಾಡಿ, ಸೋತಿದ್ದರು. ಇದೇ ಕೊರಗಿನಲ್ಲಿ ನಿನ್ನೆ ತಡರಾತ್ರಿ ಆಡುಗೋಡಿಯ ಸಿಎಆರ್ ವಿಭಾಗದ ಸಹಾಯಕ ಸಬ್ ಇನ್ಸ್ಪೆಕ್ಟರ್ ದಯಾನಂದ ಅವರು ಆಡುಗೋಡಿಯಲ್ಲಿರುವ ಪೊಲೀಸ್ ವಸತಿ ಸಮುಚ್ಚಯದ ತಮ್ಮ ನಿವಾಸದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಲ್ಕು ತಿಂಗಳ ಹಿಂದೆ ದಯಾನಂದ ಅವರ ಮಗ ಕಾಣೆಯಾಗಿದ್ದರು. ಮಗನ ಸುಳಿವು ಸಿಗದೆ ಮನನೊಂದ ಪೊಲೀಸ್ ಅಧಿಕಾರಿ ಹೀಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ












Click it and Unblock the Notifications