ಕನ್ನಡದಲ್ಲಿ ನಟಿ ಶಕೀಲಾ ಆತ್ಮಕಥೆ ರಿಲೀಸ್
ಬೆಂಗಳೂರು, ಆ.21: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ 2ನಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ಬಹುಭಾಷಾ ನಟಿ ಶಕೀಲಾ ಅವರ ಆತ್ಮಕಥೆ ನಗರದಲ್ಲಿ ಅನಾವರಣಗೊಳ್ಳಲಿದೆ. ಶಕೀಲಾ ಬರೆದಿರುವ ಆತ್ಮಕಥೆಯ ಕನ್ನಡ ಆವೃತ್ತಿಯನ್ನು ಸೀಮಾ ಬುಕ್ಸ್ ಹೊರ ತರುತ್ತಿದೆ.
ಹಲವಾರು ಯುವ ಮನಸ್ಸುಗಳ ನಿದ್ದೆಗೆಡಿಸಿದ ಮಾಜಿ ನೀಲಿ ಚಿತ್ರಗಳ ನಾಯಕಿ ಶಕೀಲಾ ಅವರ ಗತಕಾಲ ಗಮನಿಸಿದಾಗ ಅವರ ಹಾದಿ ಹೂವಿನ ಹಾದಿಯೇನು ಆಗಿರಲಿಲ್ಲ. ಅವರ ಬಾಳಿನಲ್ಲಿ ಎಲ್ಲವೂ ವಿಷಾದಮಯ ಸಂಗತಿಗಳೇ. ಚಿಕ್ಕಂದಿನಲ್ಲಿ ಸೂಳ್ಳೂರುಪೇಟ ಬಳಿಯ ಕೋಟೆಯಲ್ಲಿ ಬೆಳೆದ ಶಕೀಲಾ ಮಲಯಾಳಂ ಚಿತ್ರರಂಗಕ್ಕೆ ಅಡಿಯಿಟ್ಟ ಹಿಂದೆ ಸಾಕಷ್ಟು ಚಕಿತಗೊಳಿಸಿ ಹಾಗೆಯೇ ನೋವುಂಟು ಮಾಡುವ ಸಂಗತಿಗಳಿವೆ.

"ನನ್ನಲ್ಲಿ ಅಪರಾಧಿ ಮನೋಭಾವವಿಲ್ಲ...ಆದರೆ ನೋವು ಮಾತ್ರ ದಂಡಿಯಾಗಿದೆ" ಎಂಬ ಅಡಿಬರಹದೊಂದಿಗೆ ಮಲಯಾಳಂನಲ್ಲಿ ಬಿಡುಗಡೆಯಾಗಿರುವ ಈ ಆತ್ಮಕಥೆ ಈಗ ಅಲ್ಲಿ ಸಂಚಲನ ಮೂಡಿಸಿದೆ. ಈಗ ಈ ಕೃತಿಯನ್ನು ಕನ್ನಡಕ್ಕೆ ಕೆಕೆ ಗಂಗಾಧರ್ ತಂದಿದ್ದಾರೆ.[ಶಕೀಲಾ ಆತ್ಮಕಥೆಯ ಕೆಲವು ಪುಟಗಳು]
ನನ್ನ ಹೆಸರು ಶೃಂಗಾರದೇವತೆಗೆ ಹೋಲಿಕೆಯಾಗಿ ಹೇಗೆ ಬದಲಾಯಿತೋ ಯಾರಿಗೂ ಗೊತ್ತಿಲ್ಲ. ನನ್ನಂತಹ ಅದೆಷ್ಟೋ ಶಕೀಲಾಗಳು ಹೇಗೆ ಹುಟ್ಟುತ್ತಾರೋ, ಹೇಗೆ ರೂಪುಪಡೆದುಕೊಳ್ಳುತ್ತಾರೋ ಎಂಬುದನ್ನು ಎಲ್ಲರಿಗೂ ಗೊತ್ತಾಗಬೇಕು ಎಂದು ಶಕೀಲಾ ಹೇಳಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ 2 ನಲ್ಲಿ ಕೆಲ ವಾರಗಳ ಕಾಲ ಸ್ಪರ್ಧಿಯಾಗಿದ್ದ ಶಕೀಲಾ ಅವರು ಎಲ್ಲರ ಮನ ಗೆದ್ದಿದ್ದರು. ಎಲ್ಲರ ಪ್ರೀತಿಯ ಅಕ್ಕನಾಗಿ ಮನೆಯಿಂದ ಹೊರಬಂದರು.

ಕಾರ್ಯಕ್ರಮ ವಿವರ:
ನಟಿ ಶಕೀಲಾ ಆತ್ಮಕಥೆ ಕನ್ನಡ ಅನುವಾದ ಕೃತಿ ಬಿಡುಗಡೆ
ಸ್ಥಳ: ಕರ್ನಾಟಕ ಪುಸ್ತಕೋತ್ಸವ 2014, ಫ್ರೀಡಂ ಪಾರ್ಕ್, ಬೆಂಗಳೂರು
ದಿನ/ದಿನಾಂಕ: ಶನಿವಾರ, ಆ.23, 2014
ಸಮಯ : ಸಂಜೆ 6.00
ಉಪಸ್ಥಿತಿ: ಶಕೀಲಾ, ನಟಿ
* ಜೋಗಿ, ಲೇಖಕ, ಉದಯವಾಣಿ ಪುರವಣಿ ಸಂಪಾದಕ
* ಅಂಜಲಿ ರಾಮಣ್ಣ, ಲೇಖಕಿ, ವಕೀಲೆ
* ಕೆ.ಕೆ ಗಂಗಾಧರ್, ಲೇಖಕ, ಅನುವಾದಕ
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications