ರಮ್ಯಾ ಪ್ರಶ್ನೆಗೆ ಉತ್ತರ ಕೊಟ್ಟರೆ 25 ಸಾವಿರ ರು. ಬಹುಮಾನ! ಹೇಗೆ?
ಕಾಂಗ್ರೆಸ್ ನಾಯಕಿ ರಮ್ಯಾಗೆ ಟ್ವಿಟರ್ ನಲ್ಲಿ ತರಾಟೆ. ಪ್ರಧಾನಿ ಮೋದಿ ಟೀಕಿಸಿದ್ದಕ್ಕೆ ಬೈಗುಳ. ಪ್ರವಾಹ ಪೀಡಿತರ ನೆರವಿಗೆ ಬಾರಲಿಲ್ಲ ಎಂದು ಮೋದಿ ವಿರುದ್ಧ ಕಿಡಿ ಕಾರಿದ್ದ ರಮ್ಯಾ.
Recommended Video

ಬೆಂಗಳೂರು, ಆಗಸ್ಟ್ 22: ನಟಿ ರಮ್ಯಾ ಅವರು ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆ ಪ್ರಶ್ನೆಗೆ ಉತ್ತರಿಸಿದರೆ 25 ಸಾವಿರ ರು. ಬಹುಮಾನ ಕೊಡುತ್ತಾರಂತೆ. ಹಾಗಂತ ಅವರೇ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಅವರ ಪ್ರಶ್ನೆ ಹೀಗಿದೆ. ಬಿಹಾರ ಸೇರಿದಂತೆ ಉತ್ತರ ಭಾರತದ ಹಲವೆಡೆ ಜನರು ಪ್ರವಾಹ ಪೀಡಿತರಾಗಿದ್ದು ಜನರು ಅಸ್ತವ್ಯಸ್ತಗೊಂಡಿದೆ. ಬಿಹಾರವೊಂದರಲ್ಲೇ ಸುಮಾರು 150 ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ನಿರ್ಗತಿಕರಾಗಿದ್ದಾರೆ. ಈ ಪ್ರವಾಹ ಪೀಡಿತರ ಜತೆಗೆ ಪ್ರಧಾನಿ ಮೋದಿ ನಿಂತಿರುವ ಯಾವುದಾದರೂ ಒಂದು ಫೋಟವನ್ನು ತೋರಿಸಿದರೆ ಸಾಕಂತೆ. ಅವರು 25 ಸಾವಿರ ರು. ಬಹುಮಾನ ಕೊಡುತ್ತಾರಂತೆ!

ಅವರು ಇಂಥದ್ದೊಂದು ಘೋಷಣೆ ಮಾಡಲು ಕಾರಣ, ಟ್ವಿಟ್ಟರ್ ನಲ್ಲಿ ಅವರು ಮೈಮೇಲೆಳೆದುಕೊಂಡ ವಿವಾದ. ಬಿಹಾರ, ಅಸ್ಸಾಂ, ಗುಜರಾತ್ ಪ್ರವಾಹ ಪೀಡಿತರ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರಸ್ತಾಪಿಸಿರುವ ರಮ್ಯಾ, ''ಬಿಹಾರ, ಅಸ್ಸಾಂ, ಗುಜರಾತ್ ನಲ್ಲಿ ಉಂಟಾಗಿರುವ ಪ್ರವಾಹದಿಂದ ನಲುಗಿರುವ ಸಂತ್ರಸ್ಥರ ನೆರವಿಗೆ ಪ್ರಧಾನಿ ಬರಲಿಲ್ಲ. ಅಲ್ಲಿಗೆ ಭೇಟಿ ನೀಡಿದರೆ ತಮ್ಮನ್ನು ಎಲ್ಲಿ ಬಡಿಯುತ್ತಾರೋ ಎಂಬ ಭೀತಿ ಅವರನ್ನು ಹೆಚ್ಚು ಕಾಡಿರಬಹುದು'' ಎಂದು ಅವರು ಟ್ವೀಟ್ ಮಾಡಿದ್ದರು.
ಇದಕ್ಕೆ ಉತ್ತರಿಸಿರುವ ಹಲವಾರು ಮಂದಿ, ರಮ್ಯಾ ಅವರನ್ನೇ ಕಿಂಡಲ್ ಮಾಡಿದ್ದಾರೆ. ಸಿನಿಮಾಗಳಲ್ಲಿ ಅವರು ನೀರಿನಲ್ಲಿ, ಬೀಚ್ ಗಳಲ್ಲಿ ನಿಂತಿರುವ ಫೋಟೋಗಳನ್ನು ಹಾಕಿ, 'ಪ್ರವಾಹ ಸಂತ್ರಸ್ಥರ ನೆರವಿಗೆ ಪ್ರಧಾನಿಯಂತೂ ಬರಲಿಲ್ಲ. ನೀವು ಹೋಗಿದ್ದೀರಲ್ವಾ? ಸಂತ್ರಸ್ಥರನ್ನು ಭೇಟಿಯಾಗಿ ಬಂದ ನೀವು ಒದ್ದೆಯಾಗಿದ್ದೀರಲ್ಲವೇ?' ಎಂದು ಜೋಕ್ ಮಾಡುತ್ತಾ ಟೀಕಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ರಮ್ಯಾ ಅವರು, ''ಸರಿ. ಹಾಗಾದರೆ, ಸದ್ಯಕ್ಕೆ ನಿರ್ಗತಿಕರಾಗಿರುವ ಬಿಹಾರ, ಅಸ್ಸಾಂ, ಗುಜರಾತ್ ನ ಪ್ರವಾಹ ಪೀಡಿತರ ಯಾವುದೇ ಫೋಟೋಗಳಲ್ಲಿ ಪ್ರಧಾನಿ ಮೋದಿ ನಿಂತಿರುವ ಒಂದಾದರೂ ಫೋಟೋ ತೋರಿಸಿ. ನಿಮಗೆ 25 ಸಾವಿರ ರು. ಬಹುಮಾನ ಕೊಡುತ್ತೇನೆ. ಆದರೆ, ಫೋಟೋ ಶಾಪ್ ಕೆಲಸ ಮಾಡಕೂಡದು'' ಎಂದು ಹೇಳಿದ್ದಾರೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications