ಗಣೇಶ ಚತುರ್ಥಿಗೆ ಚಂದಾ ಕೇಳಲು ಬಂದು ಚೂರಿ ಇರಿತ
ಬೆಂಗಳೂರು, ಆಗಸ್ಟ್ 27: ಗಣೇಶ ಪ್ರತಿಷ್ಟಾಪಿಸಲು ಚಂದ ಕೇಳಲು ಬಂದವನೊಬ್ಬ ವ್ಯಕ್ತಿಗೆ ಚೂರಿ ಇರಿದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಯಲಹಂಕ ಬಳಿಯ ಮಾರುತಿ ನಗರದಲ್ಲಿ ಮನೆಯೊಂದಕ್ಕೆ ಚಂದಾ ಕೇಳಲೆಂದು ಬಂದ ವ್ಯಕ್ತಿಯೊಬ್ಬ ಪಿಂಟೋ ಎಂಬುವರಿಗೆ ಇರಿದು ಪಿಂಟೋ ಅವರ ತಾಯಿಯ ಮೇಲೂ ಹಲ್ಲೆ ಮಾಡಿದ್ದಾನೆ.

ಪಿಂಟೋ ಅವರ ಎದೆಗೆ ಚೂರಿ ಇರಿದಿದ್ದು ಅವರನ್ನು ಕೊಡಿಗೆಹಳ್ಳಿಯ ಎಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇರಿತಕ್ಕೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ.
ಗಣೇಶ ಚತುರ್ಥಿ ಹತ್ತಿರವಿದ್ದು, ಗಣೇಶ ಪ್ರತಿಷ್ಠಾಪಿಸಲು ಚಂದಾ ವಸೂಲಾತಿ ಪ್ರಾರಂಭವಾಗಿದೆ. ಇಂತಹಾ ಸಮಯದಲ್ಲಿ ಈ ರೀತಿಯ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications